ಎನ್ಡಿಎ ಭಾರಿ ಗೆಲುವು ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದು ಇದು ಜನರ ಭಾವನೆಗಳನ್ನು ಪ್ರತಿಫಲಿಸುತ್ತದೆ. ಮತಗಟ್ಟೆ ಸಮೀಕ್ಷೆಗಳು ಅಂದಾಜು ಮಾಡಿರುವುದಕ್ಕಿಂತಲೂ ಭಾರಿ ಗೆಲುವು ನಮ್ಮದಾಗಲಿದೆ
–ನಿತ್ಯಾನಂದ ರಾಯ್, ಕೇಂದ್ರ ಸಚಿವ ಬಿಜೆಪಿ ನಾಯಕ
ಜೆಡಿಯು 65–70 ಸ್ಥಾನಗಳನ್ನು ಪಡೆಯುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಎನ್ಡಿಎ 130–135 ಸ್ಥಾನಗಳಲ್ಲಿ ಗೆಲ್ಲಲಿದೆ
–ಶ್ರವಣ ಕುಮಾರ್, ಜೆಡಿಯು ಹಿರಿಯ ನಾಯಕ
ಈ ಹಿಂದೆ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಲಿವೆ. ಜನರು ಮತ ಚಲಾಯಿಸಲು ಸರದಿಯಲ್ಲಿ ನಿಂತಿದ್ದಾಗಲೇ ಸಮೀಕ್ಷೆಗಳು ಹೊರಬಿದ್ದಿವೆ. ಆಪರೇಷನ್ ಸಿಂಧೂರ ಹಿರಿಯ ನಟ ಧರ್ಮೇಂದ್ರ ‘ಸಾವು’ ಕುರಿತು ಪರಿಶೀಲಿಸದೇ ಮಾಧ್ಯಮಗಳು ವರದಿ ಪ್ರಕಟಿಸಿದ್ದವು
–ತೇಜಸ್ವಿ ಯಾದವ್, ಆರ್ಜೆಡಿ ನಾಯಕ
ದಾಖಲೆಯ ಮತದಾನವು ನಿರುದ್ಯೋಗ ಮತ್ತು ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಆಕ್ರೋಶ ಮತ್ತು ಬದಲಾವಣೆ ಬಯಸಿರುವುದನ್ನು ತೋರಿಸುತ್ತದೆ. ಬಿಹಾರದಲ್ಲಿ ‘ಇಂಡಿಯಾ’ ಒಕ್ಕೂಟ ಸರ್ಕಾರ ರಚಿಸಲಿದೆ.
–ಪವನ್ ಖೇರಾ, ಪ್ರಚಾರ ವಿಭಾಗದ ಮುಖ್ಯಸ್ಥ ಕಾಂಗ್ರೆಸ್
ಬಿಹಾರದ ಜನತೆ ಬದಲಾವಣೆ ಬಯಸಿದ್ದಾರೆ. ಭಾರಿ ಪ್ರಮಾಣದ ಮತ ಚಲಾವಣೆ ಹಾಗೂ ನಮ್ಮ ವರದಿಗಳು ಈ ಸಂಗತಿಯನ್ನೇ ಹೇಳುತ್ತಿದ್ದು ‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೇರಲಿದೆ
–ದೀಪಂಕರ್ ಭಟ್ಟಾಚಾರ್ಯ, ಪ್ರಧಾನ ಕಾರ್ಯದರ್ಶಿ ಸಿಪಿಐ(ಎಂಎಲ್) ಲಿಬರೇಷನ್
ಮತಗಟ್ಟೆ ಸಮೀಕ್ಷೆಗಳಲ್ಲಿ ‘ಇಂಡಿಯಾ’ಗೆ ನಂಬಿಕೆ ಇಲ್ಲ. ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷದ ಕಾರ್ಯಕರ್ತರು ಸಿದ್ಧಪಡಿಸಿರುವ ವರದಿಗಳು ‘ಮಹಾಘಟಬಂಧನ’ ಪರ ಅಲೆ ಇದೆ ಎಂದು ಹೇಳಿವೆ
–ಕೆ.ಸಿ.ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕಾಗಿ ಅವರು ಎನ್ಡಿಎ ಪರ ನಿರ್ಣಾಯಕ ಮತ ಚಲಾಯಿಸಿದ್ದಾರೆ.