ದೆಹಲಿ ದಳ್ಳುರಿ ಬಗ್ಗೆ ಬುಧವಾರ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಲೇಖಿ, ದೆಹಲಿ ಹಿಂಸಾಚಾರಕ್ಕೆ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ಅವರನ್ನು ದೂರಲಾಗುತ್ತಿದೆ . ಅನುರಾಗ್ ಮತ್ತು ವರ್ಮಾ ಜನವರಿ 20 ಮತ್ತು ಜನವರಿ 28ರಂದು ಹೇಳಿಕೆ ನೀಡಿದ್ದರು. ಆದಾಗ್ಯೂ, ಗಲಭೆ ಆರಂಭವಾಗಿದ್ದು ಫೆಬ್ರುವರಿ 23ರಂದು. ಅಮಾನತುಲ್ಲಾಖಾನ್, ಶರ್ಜೀಲ್ ಇಮಾಮ್ ಮತ್ತು ತಾಹೀರ್ ಹುಸೇನ್ ಅವರ ಕೃತ್ಯಗಳಿಗಾಗಿ ಕಪಿಲ್ ಮಿಶ್ರಾ ಅವರನ್ನು ಹೊಣೆಯಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.