<p><strong>ನವದೆಹಲಿ:</strong> ದೀಪಾವಳಿ ಹಬ್ಬದ ಬಳಿಕ ದೆಹಲಿ–ಎನ್ಸಿಆರ್ನಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದ್ದು, ಏರ್ ಪ್ಯೂರಿಫೈರ್ ಖರೀದಿಸುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ.</p><p>ದೆಹಲಿಯಲ್ಲಿ ಬುಧವಾರ ಗಾಳಿಯ ಗುಣಮಟ್ಟ ತುಸು ಸುಧಾರಿಸಿದರೂ ಕಳಪೆ ಮಟ್ಟದಲ್ಲೇ ಮುಂದುವರಿದಿದ್ದು ಎಕ್ಯೂಐ ಸೂಚ್ಯಂಕ 273ಕ್ಕೆ ತಲುಪಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. </p><p>ಸೋಮವಾರ ನಗರದಲ್ಲಿ ಎಕ್ಯೂಐ ಸೂಚ್ಯಂಕ 301ಕ್ಕೆ ಹಾಗೂ ಮಂಗಳವಾರ 294 ಕ್ಕೆ ತಲುಪುವ ಮೂಲಕ ಗಾಳಿಯ ಗುಣಮಟ್ಟ ಅತಿ ಕಳಪೆ ಮಟ್ಟಕ್ಕೆ ಕುಸಿದಿತ್ತು.</p>.ದೀಪಾವಳಿ ಬಳಿಕ ದೆಹಲಿ ಗಾಳಿ ಗುಣಮಟ್ಟ ಕುಸಿತ: ಗರ್ಭಿಣಿಯರು, ಮಕ್ಕಳು ಬಾಧಿತರು...<p>ಯುರೇಕಾ ಫೋರ್ಬ್ಸ್ನ ಅಧಿಕಾರಿಯೊಬ್ಬರು ಪಿಟಿಐ ಜತೆ ಮಾತನಾಡಿ, ‘ದೀಪಾವಳಿ ಇರುವ ಕಾರಣಕ್ಕೆ ಅಕ್ಟೋಬರ್ನಲ್ಲಿ ಏರ್ ಪ್ಯೂರಿಫೈರ್ಗೆ ಬೇಡಿಕೆ ಹೆಚ್ಚಳವಾಗಿದೆ. ನಗರದಲ್ಲಿನ ವಾಯುಮಾಲಿನ್ಯ ಹೆಚ್ಚಳ ಮತ್ತು ಜನರಲ್ಲಿ ಜಾಗೃತಿ ಮೂಡಿರುವುದರಿಂದ ಏರ್ ಪ್ಯೂರಿಫೈರ್ ಬಳಕೆಯತ್ತ ಜನ ಒಲವು ತೋರುತ್ತಿದ್ದಾರೆ’ ಎಂದರು.</p><p>ಕೆನ್ಟ್ ಆರ್ಒನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಗುಪ್ತಾ ಮಾತನಾಡಿ, ‘ದೆಹಲಿ ಉತ್ತರ ಭಾಗದಲ್ಲಿ ಮಾಲಿನ್ಯ ಹೆಚ್ಚಾಗಿದೆ. ಜನರು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಏರ್ ಪ್ಯೂರಿಫೈರ್ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಮಾರಾಟ ಶೇ 30–40ರಷ್ಟು ಏರಿಕೆಯಾಗಿದೆ’ ಎಂದರು.</p>.ದೆಹಲಿ | ವಿಷಕಾರಿ ಗಾಳಿ: ಕಣ್ಣುಗಳಲ್ಲಿ ಉರಿ, ತಲೆ ಸುತ್ತು – ಸಮೀಕ್ಷೆಯಿಂದ ಬಹಿರಂಗ.ಸಂಪಾದಕೀಯ | ದೆಹಲಿ: ಪಟಾಕಿಗೆ ‘ಹಸಿರು’ನಿಶಾನೆ; ಪರಿಸರ–ಆರೋಗ್ಯ ಕಾಳಜಿ ನಿರ್ಲಕ್ಷ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೀಪಾವಳಿ ಹಬ್ಬದ ಬಳಿಕ ದೆಹಲಿ–ಎನ್ಸಿಆರ್ನಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದ್ದು, ಏರ್ ಪ್ಯೂರಿಫೈರ್ ಖರೀದಿಸುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ.</p><p>ದೆಹಲಿಯಲ್ಲಿ ಬುಧವಾರ ಗಾಳಿಯ ಗುಣಮಟ್ಟ ತುಸು ಸುಧಾರಿಸಿದರೂ ಕಳಪೆ ಮಟ್ಟದಲ್ಲೇ ಮುಂದುವರಿದಿದ್ದು ಎಕ್ಯೂಐ ಸೂಚ್ಯಂಕ 273ಕ್ಕೆ ತಲುಪಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. </p><p>ಸೋಮವಾರ ನಗರದಲ್ಲಿ ಎಕ್ಯೂಐ ಸೂಚ್ಯಂಕ 301ಕ್ಕೆ ಹಾಗೂ ಮಂಗಳವಾರ 294 ಕ್ಕೆ ತಲುಪುವ ಮೂಲಕ ಗಾಳಿಯ ಗುಣಮಟ್ಟ ಅತಿ ಕಳಪೆ ಮಟ್ಟಕ್ಕೆ ಕುಸಿದಿತ್ತು.</p>.ದೀಪಾವಳಿ ಬಳಿಕ ದೆಹಲಿ ಗಾಳಿ ಗುಣಮಟ್ಟ ಕುಸಿತ: ಗರ್ಭಿಣಿಯರು, ಮಕ್ಕಳು ಬಾಧಿತರು...<p>ಯುರೇಕಾ ಫೋರ್ಬ್ಸ್ನ ಅಧಿಕಾರಿಯೊಬ್ಬರು ಪಿಟಿಐ ಜತೆ ಮಾತನಾಡಿ, ‘ದೀಪಾವಳಿ ಇರುವ ಕಾರಣಕ್ಕೆ ಅಕ್ಟೋಬರ್ನಲ್ಲಿ ಏರ್ ಪ್ಯೂರಿಫೈರ್ಗೆ ಬೇಡಿಕೆ ಹೆಚ್ಚಳವಾಗಿದೆ. ನಗರದಲ್ಲಿನ ವಾಯುಮಾಲಿನ್ಯ ಹೆಚ್ಚಳ ಮತ್ತು ಜನರಲ್ಲಿ ಜಾಗೃತಿ ಮೂಡಿರುವುದರಿಂದ ಏರ್ ಪ್ಯೂರಿಫೈರ್ ಬಳಕೆಯತ್ತ ಜನ ಒಲವು ತೋರುತ್ತಿದ್ದಾರೆ’ ಎಂದರು.</p><p>ಕೆನ್ಟ್ ಆರ್ಒನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಗುಪ್ತಾ ಮಾತನಾಡಿ, ‘ದೆಹಲಿ ಉತ್ತರ ಭಾಗದಲ್ಲಿ ಮಾಲಿನ್ಯ ಹೆಚ್ಚಾಗಿದೆ. ಜನರು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಏರ್ ಪ್ಯೂರಿಫೈರ್ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಮಾರಾಟ ಶೇ 30–40ರಷ್ಟು ಏರಿಕೆಯಾಗಿದೆ’ ಎಂದರು.</p>.ದೆಹಲಿ | ವಿಷಕಾರಿ ಗಾಳಿ: ಕಣ್ಣುಗಳಲ್ಲಿ ಉರಿ, ತಲೆ ಸುತ್ತು – ಸಮೀಕ್ಷೆಯಿಂದ ಬಹಿರಂಗ.ಸಂಪಾದಕೀಯ | ದೆಹಲಿ: ಪಟಾಕಿಗೆ ‘ಹಸಿರು’ನಿಶಾನೆ; ಪರಿಸರ–ಆರೋಗ್ಯ ಕಾಳಜಿ ನಿರ್ಲಕ್ಷ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>