<p><strong>ಮುಂಬೈ</strong>: ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣಾ ವಿರುದ್ಧ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಎನ್ಸಿಪಿ ಎಂಎಲ್ಸಿ ಅಮೋಲ್ ಮಿಟ್ಕರಿ ತಮ್ಮ ಹೇಳಿಕೆಯನ್ನು ಹಿಂಪಡೆದು ಇಂದು (ಶನಿವಾರ) ಕ್ಷಮೆಯಾಚಿದ್ದಾರೆ.</p><p>ಅಂಜನಾ ಕೃಷ್ಣಾ ಅವರು ಯುಸಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಾರಣವಾದ ಶೈಕ್ಷಣಿಕ ಮತ್ತು ಜಾತಿ ಪ್ರಮಾಣಪತ್ರವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಇದೀಗ ಟ್ವೀಟ್ ಅನ್ನು ಅಳಿಸಿ ಹಾಕಿ ಕ್ಷಮೆಯಾಚಿದ್ದಾರೆ.</p>.ಸೇಡಿಗಾಗಿ ಬಾಲಕರಿಂದ ದಾಳಿ: ಎದೆ ಹೊಕ್ಕ ಚಾಕುವಿನೊಂದಿಗೇ ಠಾಣೆ ತಲುಪಿದ ವಿದ್ಯಾರ್ಥಿ.ಧರ್ಮಸ್ಥಳ ಪ್ರಕರಣ: ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸೆಂಥಿಲ್. <p>ಸೋಲಾಪುರ ಜಿಲ್ಲೆಯ ಕುರ್ಡು ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ಸಂದರ್ಭದಲ್ಲಿ ದಾಳಿ ನಡೆಸಿದ್ದ ಜಿಲ್ಲೆಯ ಡಿಎಸ್ಪಿ ಹಾಗೂ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣಾ ಅವರಿಗೆ ಫೋನ್ ಕಾಲ್ನಲ್ಲಿ ಡಿಸಿಎಂ ಅಜಿತ್ ಪವಾರ್ ಧಮಕಿ ಹಾಕಿದ್ದಾರೆ ಎನ್ನಲಾಗಿದೆ. ಅದರ ಬೆನ್ನಲ್ಲೇ ಮಿಟ್ಕರಿ ಅಂಜನಾ ವಿರುದ್ಧ ಸುಳ್ಳು ಆರೋಪ ಮಾಡಿದ್ದರು.</p><p>ಮಹಿಳಾ ಪೊಲೀಸ್ ಅಧಿಕಾರಿಯನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ಎನ್ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ ಮತ್ತು ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ಅವರು ಮಿಟ್ಕರಿ ವಿರುದ್ಧ ಕಿಡಿಕಾರಿದ್ದರು.</p>.ಓಣಂ ಸಂಭ್ರಮ: ಸಾಂಪ್ರದಾಯಿಕ ಸೀರೆಯಲ್ಲಿ ನಟಿ ಮೌನಿ ರಾಯ್.US Open: ಸತತ 3ನೇ ಗ್ರ್ಯಾನ್ಸ್ಲಾಮ್ ಫೈನಲ್ನಲ್ಲಿ ಸಿನ್ನರ್-ಅಲ್ಕರಾಜ್ ಮುಖಾಮುಖಿ. <p>'ಇದು ನನ್ನ ಪಕ್ಷದ ನಿಲುವಾಗಿರಲಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿತ್ತು. ಪೊಲೀಸ್ ಪಡೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅಧಿಕಾರಿಗಳ ಬಗ್ಗೆ ನನಗೆ ಅತ್ಯುನ್ನತ ಗೌರವವಿದೆ. ಪಕ್ಷದ ಹಿರಿಯರ ನಾಯಕತ್ವದ ನಿಲುವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ‘ ಎಂದು ಮಿಟ್ಕರಿ ತಿಳಿಸಿದ್ದಾರೆ.</p><p>ಅಜಿತ್ ಪವಾರ್ ನಡೆ ಖಂಡಿಸಿರುವ ಶಿವಸೇನಾ ಉದ್ಧವ್ ಠಾಕ್ರೆ ಬಣದ ನಾಯಕ ಹಾಗೂ ಸಂಸದ ಸಂಜಯ್ ರಾವುತ್ ಅವರು, ನಮ್ಮ ರಾಜ್ಯದ ಡಿಸಿಎಂ, ಕಳ್ಳರ ರಕ್ಷಣೆಗೆ ನಿಂತಿದ್ದಾರೆ ನೋಡಿ ಎಂದು ಕಿಡಿಕಾರಿದ್ದರು.</p>.ಆಕೆಯ ವಿವೇಚನೆಗೆ ಬಿಟ್ಟಿದ್ದು: ಕವಿತಾ ಆರೋಪದ ಬಗ್ಗೆ ಹರೀಶ್ ರಾವ್ ಪ್ರತಿಕ್ರಿಯೆ.ಮಹಿಳಾ IPS ಅಧಿಕಾರಿಗೆ DCM ಧಮಕಿ: ಕಳ್ಳರ ರಕ್ಷಣೆಗೆ ನಿಂತ ಪವಾರ್ ಎಂದ ರಾವುತ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣಾ ವಿರುದ್ಧ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಎನ್ಸಿಪಿ ಎಂಎಲ್ಸಿ ಅಮೋಲ್ ಮಿಟ್ಕರಿ ತಮ್ಮ ಹೇಳಿಕೆಯನ್ನು ಹಿಂಪಡೆದು ಇಂದು (ಶನಿವಾರ) ಕ್ಷಮೆಯಾಚಿದ್ದಾರೆ.</p><p>ಅಂಜನಾ ಕೃಷ್ಣಾ ಅವರು ಯುಸಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಾರಣವಾದ ಶೈಕ್ಷಣಿಕ ಮತ್ತು ಜಾತಿ ಪ್ರಮಾಣಪತ್ರವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಇದೀಗ ಟ್ವೀಟ್ ಅನ್ನು ಅಳಿಸಿ ಹಾಕಿ ಕ್ಷಮೆಯಾಚಿದ್ದಾರೆ.</p>.ಸೇಡಿಗಾಗಿ ಬಾಲಕರಿಂದ ದಾಳಿ: ಎದೆ ಹೊಕ್ಕ ಚಾಕುವಿನೊಂದಿಗೇ ಠಾಣೆ ತಲುಪಿದ ವಿದ್ಯಾರ್ಥಿ.ಧರ್ಮಸ್ಥಳ ಪ್ರಕರಣ: ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸೆಂಥಿಲ್. <p>ಸೋಲಾಪುರ ಜಿಲ್ಲೆಯ ಕುರ್ಡು ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ಸಂದರ್ಭದಲ್ಲಿ ದಾಳಿ ನಡೆಸಿದ್ದ ಜಿಲ್ಲೆಯ ಡಿಎಸ್ಪಿ ಹಾಗೂ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣಾ ಅವರಿಗೆ ಫೋನ್ ಕಾಲ್ನಲ್ಲಿ ಡಿಸಿಎಂ ಅಜಿತ್ ಪವಾರ್ ಧಮಕಿ ಹಾಕಿದ್ದಾರೆ ಎನ್ನಲಾಗಿದೆ. ಅದರ ಬೆನ್ನಲ್ಲೇ ಮಿಟ್ಕರಿ ಅಂಜನಾ ವಿರುದ್ಧ ಸುಳ್ಳು ಆರೋಪ ಮಾಡಿದ್ದರು.</p><p>ಮಹಿಳಾ ಪೊಲೀಸ್ ಅಧಿಕಾರಿಯನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ಎನ್ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ ಮತ್ತು ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ಅವರು ಮಿಟ್ಕರಿ ವಿರುದ್ಧ ಕಿಡಿಕಾರಿದ್ದರು.</p>.ಓಣಂ ಸಂಭ್ರಮ: ಸಾಂಪ್ರದಾಯಿಕ ಸೀರೆಯಲ್ಲಿ ನಟಿ ಮೌನಿ ರಾಯ್.US Open: ಸತತ 3ನೇ ಗ್ರ್ಯಾನ್ಸ್ಲಾಮ್ ಫೈನಲ್ನಲ್ಲಿ ಸಿನ್ನರ್-ಅಲ್ಕರಾಜ್ ಮುಖಾಮುಖಿ. <p>'ಇದು ನನ್ನ ಪಕ್ಷದ ನಿಲುವಾಗಿರಲಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿತ್ತು. ಪೊಲೀಸ್ ಪಡೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅಧಿಕಾರಿಗಳ ಬಗ್ಗೆ ನನಗೆ ಅತ್ಯುನ್ನತ ಗೌರವವಿದೆ. ಪಕ್ಷದ ಹಿರಿಯರ ನಾಯಕತ್ವದ ನಿಲುವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ‘ ಎಂದು ಮಿಟ್ಕರಿ ತಿಳಿಸಿದ್ದಾರೆ.</p><p>ಅಜಿತ್ ಪವಾರ್ ನಡೆ ಖಂಡಿಸಿರುವ ಶಿವಸೇನಾ ಉದ್ಧವ್ ಠಾಕ್ರೆ ಬಣದ ನಾಯಕ ಹಾಗೂ ಸಂಸದ ಸಂಜಯ್ ರಾವುತ್ ಅವರು, ನಮ್ಮ ರಾಜ್ಯದ ಡಿಸಿಎಂ, ಕಳ್ಳರ ರಕ್ಷಣೆಗೆ ನಿಂತಿದ್ದಾರೆ ನೋಡಿ ಎಂದು ಕಿಡಿಕಾರಿದ್ದರು.</p>.ಆಕೆಯ ವಿವೇಚನೆಗೆ ಬಿಟ್ಟಿದ್ದು: ಕವಿತಾ ಆರೋಪದ ಬಗ್ಗೆ ಹರೀಶ್ ರಾವ್ ಪ್ರತಿಕ್ರಿಯೆ.ಮಹಿಳಾ IPS ಅಧಿಕಾರಿಗೆ DCM ಧಮಕಿ: ಕಳ್ಳರ ರಕ್ಷಣೆಗೆ ನಿಂತ ಪವಾರ್ ಎಂದ ರಾವುತ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>