ಕಾಂಗ್ರೆಸ್ನ ಜೈರಾಂ ರಮೇಶ್, ಮನೋಜ್ ತಿವಾರಿ ಹೇಳಿಕೆಯನ್ನು ಖಂಡಿಸಿದ್ದರೆ, ಪಿ.ಚಿದಂಬರಂ ಅವರು, ‘ಈ ಮೂಲಕ ಧನ್ಕರ್ ಅವರು ಜನತೆಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಸಂವಿಧಾನವನ್ನು ಪ್ರೀತಿಸುವ ಎಲ್ಲರೂ ಈ ಕುರಿತು ಜಾಗೃತರಾಗಿರಬೇಕು. ಸಂಸತ್ತು ಅಲ್ಲ, ಸಂವಿಧಾನವೇ ಸರ್ವೋಚ್ಛವಾದುದು’ ಎಂದು ಹೇಳಿದ್ದಾರೆ.