ಹೀಗಿರುವಾಗಲೇಮಧ್ಯಪ್ರದೇಶದ ಶುಜಾಲ್ಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಹುಲ್ ಗಾಂಧಿ, ‘ಸಿಖ್ ನರಮೇಧದ ಕುರಿತು ಸ್ಯಾಮ್ ಪಿತ್ರೋಡ ಅವರು ನೀಡಿರುವ ಹೇಳಿಕೆ ತಪ್ಪು. ಇಂಥ ಮಾತುಗಳನ್ನಾಡದಂತೆ ನಾನು ಅವರಿಗೆ ತಾಕೀತು ಮಾಡಿದ್ದೇನೆ. 1984ರ ಸಿಖ್ ನರಮೇಧದ ಕುರಿತು ಚರ್ಚೆ ಮಾಡುವ ಪ್ರಶ್ನೆಯೇ ಇಲ್ಲ. ಅಂದು ಯಾರೆಲ್ಲ ಹಿಂಸಾಚಾರದಲ್ಲಿ ತೊಡಗಿದ್ದರೋ ಅವರಿಗೆಲ್ಲ ನೂರಕ್ಕೆ ನೂರು ಶಿಕ್ಷೆಯಾಗಲೇಬೇಕು,’ ಎಂದು ಅವರು ಪ್ರತಿಪಾದಿಸಿದ್ದಾರೆ.