<p><strong>ಮೊಕಮಾ (ಬಿಹಾರ:</strong> ಗಂಡನ ಸ್ವಭಾವ ಬದಲಾಯಿಸಿದಂತೆ ಕ್ಷೇತ್ರವನ್ನೂ ಸುಧಾರಿಸುತ್ತೇನೆ ಎಂದು ಮೊಕಮಾ ಕ್ಷೇತ್ರದ ಆರ್ಜೆಡಿ ಅಭ್ಯರ್ಥಿ ವೀಣಾ ದೇವಿ ಹೇಳಿದ್ದಾರೆ.</p>.Bihar Polls | ನಾನು ಸಿಎಂ ಆದ್ರೆ ಬಡತನ ಮುಕ್ತ ಬಿಹಾರ ನನ್ನ ಆದ್ಯತೆ: ತೇಜಸ್ವಿ.<p>ಪಿಟಿಐ ಜೊತೆಗೆ ಮಾತನಾಡಿದ ಅವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಡಳಿತದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಅವರ ಅಭಿವೃದ್ಧಿ ಹೆದ್ದಾರಿ ಹಾಗೂ ಮೇಲ್ಸೇತುವೆಗೆ ಮಾತ್ರ ಸೀಮಿತವಾಗಿತ್ತು, ಸಾಮಾನ್ಯ ಜನರ ಸಂಕಷ್ಟ ಹಾಗೆಯೇ ಇದೆ ಎಂದು ಹೇಳಿದ್ದಾರೆ.</p><p>ಮೊಕಮಾದ ಮಾಜಿ ಶಾಸಕರ ಪತ್ನಿಯಾಗಿರುವ ವೀಣಾ ದೇವಿ ಈ ಹಿಂದೆ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು. ಕ್ರಿಮಿನಲ್ ಹಿನ್ನೆಲೆ ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಪತಿಗೆ ಸ್ಪರ್ಧೆ ಮಾಡಲು ಅವಕಾಶ ಇಲ್ಲದಿರುವುದರಿಂದ, ವೀಣಾಗೆ ಆರ್ಜೆಡಿ ಟಿಕೆಟ್ ನೀಡಿದೆ.</p>.Bihar Polls | ನಾನು ಸಿಎಂ ಆದ್ರೆ ಬಡತನ ಮುಕ್ತ ಬಿಹಾರ ನನ್ನ ಆದ್ಯತೆ: ತೇಜಸ್ವಿ.<p>‘ನನ್ನ ಪತಿ ಈಗ ಕ್ರಿಮಿನಲ್ ಅಲ್ಲ, ಅವರು ಹಲವು ವರ್ಷ ಜನಪ್ರತಿನಿಧಿಯಾಗಿದ್ದವರು. ಪತಿ ಸ್ವಭಾವ ಪರಿಷ್ಕರಿಸಿದಂತೆ ಕ್ಷೇತ್ರವನ್ನೂ ಬದಲಾಯಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.</p><p>‘ಬಿಹಾರದಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಬಡ ಜನರು ವಾಸಿಸುವ ಗ್ರಾಮೀಣ, ನಗರ ಪ್ರದೇಶದ ಪರಿಸ್ಥಿತಿ ಬದಲಾಗಿಯೇ ಇಲ್ಲ’ ಎಂದು ಹೇಳಿದ್ದಾರೆ.</p>.ಬಿಹಾರ ಚುನಾವಣೆ| ನಿತೀಶ್ ಕುಮಾರ್ ನಾಯಕತ್ವದಲ್ಲಿ ಎನ್ಡಿಎ ದಾಖಲೆ ಬರೆಯಲಿದೆ: ಮೋದಿ.<p>ಚುನಾವಣೆ ಬಂದಾಗ ನಾಯಕರು ವಿವಿಧ ಭಾಗಗಳಿಗೆ ಹೆಲಿಕಾಪ್ಟರ್ ಮೂಲಕ ತೆರಳುತ್ತಾರೆ. ಆದರೆ ಶಾಸಕರು ಮತ್ತು ಸಂಸದರು ಜನರ ಆಕ್ರೋಶವನ್ನು ಎದುರಿಸಬೇಕು. ಸಂಸದೆಯಾಗಿದ್ದಾಗ ನಾನು ಹಲವು ಸಮಸ್ಯೆಗಳನ್ನು ಎತ್ತಿದ್ದೆ. ನಿಜವಾಗಿಯೂ ಅಧಿಕಾರ ಇರುವ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಆಶ್ವಾಸನೆಗಳನ್ನು ಈಡೇರಿಸುವುದಿಲ್ಲ ಎಂದು ಹೇಳಿದ್ದಾರೆ.</p><p>ಪತಿ ಸುರಜ್ಭನ್ ಸಿಂಗ್ ಈ ಹಿಂದೆ ಇದೇ ಕ್ಷೇತ್ರದ ಶಾಸಕರಾಗಿದ್ದರು. ಲೋಕ ಜನಶಕ್ತಿ ಪಕ್ಷದಿಂದ (ಎಲ್ಜೆಪಿ) ಸಂಸದರೂ ಆಗಿದ್ದರು. ಕೊಲೆ ಪ್ರಕರಣವೊಂದರಲ್ಲಿ ದೋಷಿಯಾಗಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ.</p>.ಬಿಹಾರ ಚುನಾವಣೆ: ಇಂಡಿಯಾ ಬಣದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಆಯ್ಕೆ.<p>2014–19ರ ವರೆಗೆ ವೀಣಾ ದೇವಿ ಎಲ್ಜೆಪಿಯಿಂದ ಮುಂಗೇರ್ ಕ್ಷೇತ್ರದ ಸಂಸದರಾಗಿದ್ದರು. ಈಗ ಆರ್ಜೆಡಿಯಿಂದ ಮೊಕಮಾ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ.</p><p>2020ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಅನಂತ್ ಸಿಂಗ್ ಆರ್ಜೆಡಿಯಿಂದ ಗೆದ್ದಿದ್ದರು. ಶಸ್ತ್ರಾಸ್ತ್ರ ಕಾಯ್ದೆಯಡಿ ದೋಷಿಯಾಗಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ನೀಲಂ ದೇವಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಈ ಬಾರಿ ಅವರು ಜೆಡಿಯುಗೆ ಪಕ್ಷಾಂತರ ಮಾಡಿದ್ದಾರೆ.</p><p>ಜೆಡಿಯುನಿಂದ ಅನಂತ್ ಸಿಂಗ್ ಕಣದಲ್ಲಿದ್ದಾರೆ.</p>.ಬಿಹಾರ ಚುನಾವಣೆಯು ‘ವಿಕಾಸ’ ಮತ್ತು ‘ವಿನಾಶ’ ನಡುವಿನ ಹೋರಾಟ: ನಡ್ಡಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಕಮಾ (ಬಿಹಾರ:</strong> ಗಂಡನ ಸ್ವಭಾವ ಬದಲಾಯಿಸಿದಂತೆ ಕ್ಷೇತ್ರವನ್ನೂ ಸುಧಾರಿಸುತ್ತೇನೆ ಎಂದು ಮೊಕಮಾ ಕ್ಷೇತ್ರದ ಆರ್ಜೆಡಿ ಅಭ್ಯರ್ಥಿ ವೀಣಾ ದೇವಿ ಹೇಳಿದ್ದಾರೆ.</p>.Bihar Polls | ನಾನು ಸಿಎಂ ಆದ್ರೆ ಬಡತನ ಮುಕ್ತ ಬಿಹಾರ ನನ್ನ ಆದ್ಯತೆ: ತೇಜಸ್ವಿ.<p>ಪಿಟಿಐ ಜೊತೆಗೆ ಮಾತನಾಡಿದ ಅವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಡಳಿತದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಅವರ ಅಭಿವೃದ್ಧಿ ಹೆದ್ದಾರಿ ಹಾಗೂ ಮೇಲ್ಸೇತುವೆಗೆ ಮಾತ್ರ ಸೀಮಿತವಾಗಿತ್ತು, ಸಾಮಾನ್ಯ ಜನರ ಸಂಕಷ್ಟ ಹಾಗೆಯೇ ಇದೆ ಎಂದು ಹೇಳಿದ್ದಾರೆ.</p><p>ಮೊಕಮಾದ ಮಾಜಿ ಶಾಸಕರ ಪತ್ನಿಯಾಗಿರುವ ವೀಣಾ ದೇವಿ ಈ ಹಿಂದೆ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು. ಕ್ರಿಮಿನಲ್ ಹಿನ್ನೆಲೆ ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಪತಿಗೆ ಸ್ಪರ್ಧೆ ಮಾಡಲು ಅವಕಾಶ ಇಲ್ಲದಿರುವುದರಿಂದ, ವೀಣಾಗೆ ಆರ್ಜೆಡಿ ಟಿಕೆಟ್ ನೀಡಿದೆ.</p>.Bihar Polls | ನಾನು ಸಿಎಂ ಆದ್ರೆ ಬಡತನ ಮುಕ್ತ ಬಿಹಾರ ನನ್ನ ಆದ್ಯತೆ: ತೇಜಸ್ವಿ.<p>‘ನನ್ನ ಪತಿ ಈಗ ಕ್ರಿಮಿನಲ್ ಅಲ್ಲ, ಅವರು ಹಲವು ವರ್ಷ ಜನಪ್ರತಿನಿಧಿಯಾಗಿದ್ದವರು. ಪತಿ ಸ್ವಭಾವ ಪರಿಷ್ಕರಿಸಿದಂತೆ ಕ್ಷೇತ್ರವನ್ನೂ ಬದಲಾಯಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.</p><p>‘ಬಿಹಾರದಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಬಡ ಜನರು ವಾಸಿಸುವ ಗ್ರಾಮೀಣ, ನಗರ ಪ್ರದೇಶದ ಪರಿಸ್ಥಿತಿ ಬದಲಾಗಿಯೇ ಇಲ್ಲ’ ಎಂದು ಹೇಳಿದ್ದಾರೆ.</p>.ಬಿಹಾರ ಚುನಾವಣೆ| ನಿತೀಶ್ ಕುಮಾರ್ ನಾಯಕತ್ವದಲ್ಲಿ ಎನ್ಡಿಎ ದಾಖಲೆ ಬರೆಯಲಿದೆ: ಮೋದಿ.<p>ಚುನಾವಣೆ ಬಂದಾಗ ನಾಯಕರು ವಿವಿಧ ಭಾಗಗಳಿಗೆ ಹೆಲಿಕಾಪ್ಟರ್ ಮೂಲಕ ತೆರಳುತ್ತಾರೆ. ಆದರೆ ಶಾಸಕರು ಮತ್ತು ಸಂಸದರು ಜನರ ಆಕ್ರೋಶವನ್ನು ಎದುರಿಸಬೇಕು. ಸಂಸದೆಯಾಗಿದ್ದಾಗ ನಾನು ಹಲವು ಸಮಸ್ಯೆಗಳನ್ನು ಎತ್ತಿದ್ದೆ. ನಿಜವಾಗಿಯೂ ಅಧಿಕಾರ ಇರುವ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಆಶ್ವಾಸನೆಗಳನ್ನು ಈಡೇರಿಸುವುದಿಲ್ಲ ಎಂದು ಹೇಳಿದ್ದಾರೆ.</p><p>ಪತಿ ಸುರಜ್ಭನ್ ಸಿಂಗ್ ಈ ಹಿಂದೆ ಇದೇ ಕ್ಷೇತ್ರದ ಶಾಸಕರಾಗಿದ್ದರು. ಲೋಕ ಜನಶಕ್ತಿ ಪಕ್ಷದಿಂದ (ಎಲ್ಜೆಪಿ) ಸಂಸದರೂ ಆಗಿದ್ದರು. ಕೊಲೆ ಪ್ರಕರಣವೊಂದರಲ್ಲಿ ದೋಷಿಯಾಗಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ.</p>.ಬಿಹಾರ ಚುನಾವಣೆ: ಇಂಡಿಯಾ ಬಣದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಆಯ್ಕೆ.<p>2014–19ರ ವರೆಗೆ ವೀಣಾ ದೇವಿ ಎಲ್ಜೆಪಿಯಿಂದ ಮುಂಗೇರ್ ಕ್ಷೇತ್ರದ ಸಂಸದರಾಗಿದ್ದರು. ಈಗ ಆರ್ಜೆಡಿಯಿಂದ ಮೊಕಮಾ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ.</p><p>2020ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಅನಂತ್ ಸಿಂಗ್ ಆರ್ಜೆಡಿಯಿಂದ ಗೆದ್ದಿದ್ದರು. ಶಸ್ತ್ರಾಸ್ತ್ರ ಕಾಯ್ದೆಯಡಿ ದೋಷಿಯಾಗಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ನೀಲಂ ದೇವಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಈ ಬಾರಿ ಅವರು ಜೆಡಿಯುಗೆ ಪಕ್ಷಾಂತರ ಮಾಡಿದ್ದಾರೆ.</p><p>ಜೆಡಿಯುನಿಂದ ಅನಂತ್ ಸಿಂಗ್ ಕಣದಲ್ಲಿದ್ದಾರೆ.</p>.ಬಿಹಾರ ಚುನಾವಣೆಯು ‘ವಿಕಾಸ’ ಮತ್ತು ‘ವಿನಾಶ’ ನಡುವಿನ ಹೋರಾಟ: ನಡ್ಡಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>