ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತೆರಿಗೆಯಷ್ಟೇ ಅಲ್ಲ, ಕನ್ನಡಕ್ಕೂ ಕೇಂದ್ರದ ಅನ್ಯಾಯ: ಸಚಿವ ಶಿವರಾಜ ತಂಗಡಗಿ

Published : 20 ಫೆಬ್ರುವರಿ 2024, 23:43 IST
Last Updated : 20 ಫೆಬ್ರುವರಿ 2024, 23:43 IST
ಫಾಲೋ ಮಾಡಿ
Comments
ಹೋರಾಟಗಾರರ ಮೇಲಿನ ಮೊಕದ್ದಮೆ ವಾಪಸ್‌ಗೆ
ಆಗ್ರಹ ಕನ್ನಡ ನಾಮಫಲಕ ಅಭಿಯಾನದಲ್ಲಿ ಪಾಲ್ಗೊಂಡ ಹೋರಾಟಗಾರರ ವಿರುದ್ಧ ದಾಖಲಿಸಿರುವ ಪ್ರಕರಣ ವಾಪಸ್ ಪಡೆಯಬೇಕು ಎಂದು ಸದಸ್ಯರು ಪಕ್ಷಭೇದ ಮರೆತು ಆಗ್ರಹಿಸಿದರು. ಹೋರಾಟ ಮಾಡದೇ ಇದ್ದರೆ ಸರ್ಕಾರವು ಕಾಯ್ದೆಗೆ ತಿದ್ದುಪಡಿ ತರುತ್ತಿರಲಿಲ್ಲ. ಹಾಗಂತ ಹಿಂಸಾತ್ಮಕ ಹೋರಾಟವನ್ನು ನಾವು ಒಪ್ಪುವುದಿಲ್ಲ. ಕನ್ನಡಕ್ಕಾಗಿ ಹೋರಾಟ ನಡೆಸಿದ ವಿರುದ್ಧ ಗಂಭೀರ ಪ್ರಕರಣಗಳನ್ನು ಹೂಡಿದ್ದೂ ಸರಿಯಲ್ಲ ಎಂದು ಸದಸ್ಯರು ಪ್ರತಿಪಾದಿಸಿದರು. ಮೊಕದ್ದಮೆ ವಾಪಸ್ ಪಡೆಯುವ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಜತೆ ಚರ್ಚಿಸುವುದಾಗಿ ಸಚಿವ ತಂಗಡಗಿ ಹೇಳಿದರು.
ಬದಲಾಗಿದೆ ಬೆಳಗಾವಿ: ಜಾರಕಿಹೊಳಿ
ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳು ಮರಾಠಿ ಮಯವಾಗಿದೆ ಎಂಬ ವಿಷಯ ಪರಿಷತ್ತಿನಲ್ಲಿ ಚರ್ಚೆಗೆ ಕಾರಣವಾಯಿತು. ಮಸೂದೆ ಕುರಿತ ಚರ್ಚೆ ವೇಳೆ ಮಾತನಾಡಿದ ಬಿಜೆಪಿಯ ತಳವಾರ ಸಾಬಣ್ಣ ಬೆಳಗಾವಿಯ ಗಡಿಭಾಗಗಳಲ್ಲಿ ಮರಾಠಿ ಭಾಷೆ ಬಳಕೆ ಮತ್ತು ನಾಮಫಲಕಗಳು ಇವೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಉಮಾಶ್ರೀ ನಿಪ್ಪಾಣಿ ಮರಾಠಿ ಮಯ; ಕನ್ನಡ ಮಾಯ ಎಂದು ಹೇಳಿದರು. ಇದನ್ನು ಅಲ್ಲಗಳೆದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ‘70ರ ದಶಕದ ಪರಿಸ್ಥಿತಿ ಆಧರಿಸಿ ನೀವು ಹೇಳುತ್ತಿದ್ದೀರಿ.ಬೆಳಗಾವಿ ಬದಲಾಗಿದೆ. ನಿಪ್ಪಾಣಿ ಖಾನಾಪುರ ಭಾಗದಲ್ಲಿ ಮರಾಠಿ ಮಾತನಾಡುವವರು  ಇದ್ದಾರೆ. ಅಲ್ಲಿಯೂ ಶೇ 70ರಷ್ಟು ಕನ್ನಡ ವಾತಾವರಣವೇ ಇದೆ. ಮರಾಠಿ ಭಾಷಿಗರು ಬೇರೆ ಮರಾಠರು ಬೇರೆ. ಎರಡೂ ಒಂದೇ ಅಲ್ಲ. ಬೆಳಗಾವಿ ಜಿಲ್ಲೆಯ ಜನ ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಬಳಸುತ್ತಾರೆ ಎಂದು ಪ್ರತಿಪಾದಿಸಿದರು.
ಕನ್ನಡಿಗರಿಗೆ ಉದ್ಯೋಗ; ಮಾಹಿತಿ ಕಡ್ಡಾಯ
ಕರ್ನಾಟಕದಲ್ಲಿರುವ ಕೈಗಾರಿಕೆಗಳು ಉದ್ದಿಮೆ ಸಂಸ್ಥೆಗಳಲ್ಲಿ ಉದ್ಯೋಗಿಗಳ ಭಾಷಿಕ ವಿವರವನ್ನು ಡ್ಯಾಷ್‌ಬೋರ್ಡ್‌ನಲ್ಲಿ ಪ್ರಕಟಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಸಚಿವ ತಂಗಡಗಿ ಹೇಳಿದರು. ಮುಖ್ಯಸಚೇತಕ ಸಲೀಂ ಅಹಮದ್ ಅವರು ಇಲ್ಲಿ ಉದ್ದಿಮೆ ಆರಂಭಿಸುವವರು ಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಖಾತ್ರಿಪಡಿಸಲು ಕ್ರಮ ಆಗಬೇಕಿದೆ ಎಂದರು. ‘ಉದ್ದಿಮೆ ಆರಂಭಿಸಿದವರು ಯಾವ ಯಾವ ಭಾಷೆಯವರಿಗೆ ಉದ್ಯೋಗ ನೀಡಿದ್ದಾರೆ. ಅದರಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ಎಂಬುದನ್ನು ಎಲ್ಲರಿಗೂ ಗೊತ್ತಾಗುವ ರೀತಿಯಲ್ಲಿ ಡ್ಯಾಷ್‌ ಬೋರ್ಡ್‌ನಲ್ಲಿ ಪ್ರಕಟಿಸುವಂತೆ ಮಾಡುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT