ವಿಡಿಯೊದಲ್ಲೇನಿದೆ?: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಣ ಪಿಸು ಮಾತಿನ ದೃಶ್ಯ ವಿಡಿಯೊದಲ್ಲಿದೆ. ಇಬ್ಬರೂ ನಾಯಕರ ಹಿಂಬದಿಯಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರವಿದೆ. ಡಿಕೆಶಿ ಅವರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ‘ವಲ್ಲಭಭಾಯಿ ಪಟೇಲ್ ಅವರದ್ದೂ ಇವತ್ತು ಜನ್ಮದಿನವಂತೆ’ ಎಂದಿದ್ದಾರೆ. ಇದಕ್ಕುತ್ತರಿಸಿದ ಡಿಕೆಶಿ, ‘ಇದು ದಿನ (ಸ್ಮರಣೆ ಕಾರ್ಯಕ್ರಮ), ಅದು ಜನ್ಮದಿನ, ಫೋಟೊ ಇಡುವುದಿಲ್ಲ’ ಎಂದಿದ್ದಾರೆ. ಆದರೆ, ಬಿಜೆಪಿಯವರು ಇದರ ಲಾಭ ಪಡೆಯಬಹುದು ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಬಳಿಕ ಡಿಕೆಶಿ ಅವರು ಪಟೇಲ್ ಅವರ ಭಾವಚಿತ್ರ ಇರಿಸಲು ಸೂಚಿಸುತ್ತಾರೆ.