<p><strong>ಪ್ಯಾರಿಸ್</strong>: ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕಲು,ಜಾಗತಿಕ ಮಟ್ಟದಲ್ಲಿ ಮಾಂಸಾಹಾರ ಸೇವನೆ ಪ್ರಮಾಣ ಕಡಿಮೆ ಆಗಬೇಕುಎಂದುಹೊಸ ಅಧ್ಯಯನವೊಂದು ಹೇಳಿದೆ.</p>.<p>‘ಭೂಮಿಯ ಮೇಲ್ಮೈ ತಾಪಮಾನ ಹೆಚ್ಚುತ್ತಿರುವುದನ್ನು ತಡೆಗಟ್ಟುವ ಕಠಿಣ ಸವಾಲು ಎದುರಿಸುತ್ತಿರುವ ಈ ಸಂದರ್ಭದಲ್ಲಿ,ನಿರ್ದಿಷ್ಟವಾಗಿ ಪಶ್ಚಿಮದ ರಾಷ್ಟ್ರಗಳು ಮಾಂಸಾಹಾರ ಸೇವನೆಯನ್ನು ಶೇ 90ರಷ್ಟು ಕಡಿಮೆ ಮಾಡಬೇಕಾದ ಅಗತ್ಯವಿದೆ’ಎಂದು ವಿಜ್ಞಾನಿಗಳು ಅಧ್ಯಯನದಲ್ಲಿ ಸಲಹೆ ನೀಡಿದ್ದಾರೆ.</p>.<p>ಮನುಷ್ಯರು ಸೇವಿಸುವ ಆಹಾರದಿಂದಪರಿಸರದ ಮೇಲೆ ಹೇಗೆ ಪರಿಣಾಮ ಉಂಟಾಗುತ್ತದೆ ಎನ್ನುವ ಕುರಿತು ಈವರೆಗೆ ನಡೆದಿರುವ ಅಧ್ಯಯನಗಳಲ್ಲೇ ಇದು ವಿಸ್ತೃತವಾದುದಾಗಿದ್ದು, <strong>ನೇಚರ್</strong>ಜರ್ನಲ್ನಲ್ಲಿ ಪ್ರಕಟವಾಗಿದೆ.</p>.<p>‘ಈಗಾಗಲೇ ಆಹಾರ ಉದ್ದಿಮೆಗಳಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತಿವೆ.ಮಾಂಸಾಹಾರ ಸೇವನೆ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗದಿದ್ದರೆ, ಈ ಶತಮಾನದ ಮಧ್ಯಭಾಗದ ವೇಳೆಗೆ ಪರಿಸರದ ಮೇಲಾಗುವ ಹಾನಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಜತೆಗೆ 2050ರ ವೇಳೆಗೆ ಭೂಮಿ ಮೇಲಿನ ಜನಸಂಖ್ಯೆ 1,000 ಕೋಟಿ ತಲುಪುವ ಅಂದಾಜಿದೆ. ಈ ಎಲ್ಲಾ ಅಂಶಗಳಿಂದ ಒಟ್ಟಾರೆಯಾಗಿ ಮನುಕುಲಕ್ಕೆಆಹಾರ ಪೂರೈಕೆ ಸಾಮರ್ಥ್ಯ ಕುಗ್ಗಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.</p>.<p><strong>‘ಹಸಿರುಮನೆಗೆ ಹಾನಿ’</strong></p>.<p>‘ನಿರ್ದಿಷ್ಟವಾಗಿ ಮಾಂಸಾಹಾರ ಉತ್ಪಾದನೆ ಪ್ರಕ್ರಿಯೆಯಿಂದ ಹಸಿರುಮನೆಗೆ ಹಾನಿ ಉಂಟುಮಾಡುವಂತಹ ಅನಿಲಗಳು ಬಿಡುಗಡೆ ಆಗುತ್ತವೆ, ದೊಡ್ಡ ಮಟ್ಟದಲ್ಲಿ ಅರಣ್ಯಭೂಮಿ ನಾಶವಾಗುತ್ತದೆ ಹಾಗೂ ಭಾರಿ ಪ್ರಮಾಣದ ನೀರು ಬಳಕೆಯಾಗುತ್ತದೆ. ಹವಾಮಾನ ಬದಲಾವಣೆಯಲ್ಲಿ ನೀರು ಬಳಕೆ ಪ್ರಮಾಣ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.</p>.<p>ಜನರುಮಾಂಸಾಹಾರ ಸೇವನೆ ಕಡಿಮೆ ಮಾಡುವುದರಿಂದ ಹವಾಮಾನ ಸಂರಕ್ಷಣೆಗೆ ತಮ್ಮ ಪಾಲಿನ ಸಣ್ಣ ಕೊಡುಗೆ ನೀಡಬಹುದು ಎನ್ನುವುದು ತಜ್ಞರ ಅಭಿಮತವಾಗಿದೆ.</p>.<p><strong>‘ಸಮಗ್ರ ಪರಿಹಾರ ಅವಶ್ಯ’</strong></p>.<p>‘ಕೇವಲ ಒಂದೇ ಪರಿಹಾರದಿಂದ ಈ ಸವಾಲು ಎದುರಿಸಲು ಸಾಧ್ಯವಾಗುವುದಿಲ್ಲ. ಸಮಗ್ರ ಪರಿಹಾರ ಕಂಡುಕೊಂಡಾಗ ಮಾತ್ರ, ಹೆಚ್ಚುತ್ತಲೇ ಇರುವ ಜನಸಂಖ್ಯೆಗೆ ಆಹಾರ ಪೂರೈಕೆ ಸಾಧ್ಯ’ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಮ್ಯಾಕ್ರೊ ಸ್ಪ್ರಿಂಗ್ಮನ್ ತಿಳಿಸಿದ್ದಾರೆ.</p>.<p>ಹೆಚ್ಚುತ್ತಿರುವಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕಲು ವಿಶ್ವದಾದ್ಯಂತ ಹಿಂದೆಂದೂ ಆಗದ ಮಟ್ಟದಲ್ಲಿ ಸಾಮಾಜಿಕ ಹಾಗೂ ಜಾಗತಿಕ ಆರ್ಥಿಕ ಬದಲಾವಣೆಗಳು ಅವಶ್ಯ ಎಂದು ಈಚೆಗಷ್ಟೆ ವಿಶ್ವಸಂಸ್ಥೆ ತನ್ನ ವರದಿಯೊಂದರಲ್ಲಿ ಎಚ್ಚರಿಕೆ ನೀಡಿತ್ತು.</p>.<p><strong>ಹೈನುಗಾರಿಕೆಯಿಂದ ಅಪಾಯ: ತಜ್ಞರ ನಿಲುವು</strong></p>.<p>‘ಪ್ರಾಣಿಗಳ ಮೇವಿಗಾಗಿ ದೊಡ್ಡ ಮಟ್ಟದಲ್ಲಿ ಜಾಗ ಮೀಸಲಿಡಲು ಅರಣ್ಯ ನಾಶ ಮಾಡಲಾಗುತ್ತದೆ. ಇದರಿಂದ ಇಂಗಾಲ ಹೀರುವ ಮರಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಲ್ಲದೆ, ಪ್ರಾಣಿಗಳು ದೊಡ್ಡ ಮಟ್ಟದಲ್ಲಿ ಹೊರಸೂಸುವಮೀಥೇನ್ ಅನಿಲ ಹಸಿರುಮನೆಗೆ ಹಾನಿಕಾರಕ. ಈ ಎಲ್ಲ ಕಾರಣಗಳಿಂದ ಹೈನುಗಾರಿಕೆಯು ಪರಿಸರಕ್ಕೆ ಮೂರುಪಟ್ಟು ಹೆಚ್ಚು ಅಪಾಯ ಒಡ್ಡುತ್ತದೆ’ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.</p>.<p><strong>ಮುಖ್ಯಾಂಶಗಳು</strong></p>.<p>* ಉತ್ತಮ ಶಿಕ್ಷಣ, ಕೈಗಾರಿಕಾ ಕ್ಷೇತ್ರದ ಸುಧಾರಣೆಗಳಿಂದ ಸಮಸ್ಯೆ ನಿರ್ವಹಣೆ ಸಾಧ್ಯ</p>.<p>* ಆರೋಗ್ಯಕರ ಹಾಗೂಸಸ್ಯಾಧಾರಿತ ಆಹಾರ ಸೇವನೆ ಶೈಲಿ ರೂಢಿಸಿಕೊಳ್ಳುವುದು ಉತ್ತಮ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ಯಾರಿಸ್</strong>: ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕಲು,ಜಾಗತಿಕ ಮಟ್ಟದಲ್ಲಿ ಮಾಂಸಾಹಾರ ಸೇವನೆ ಪ್ರಮಾಣ ಕಡಿಮೆ ಆಗಬೇಕುಎಂದುಹೊಸ ಅಧ್ಯಯನವೊಂದು ಹೇಳಿದೆ.</p>.<p>‘ಭೂಮಿಯ ಮೇಲ್ಮೈ ತಾಪಮಾನ ಹೆಚ್ಚುತ್ತಿರುವುದನ್ನು ತಡೆಗಟ್ಟುವ ಕಠಿಣ ಸವಾಲು ಎದುರಿಸುತ್ತಿರುವ ಈ ಸಂದರ್ಭದಲ್ಲಿ,ನಿರ್ದಿಷ್ಟವಾಗಿ ಪಶ್ಚಿಮದ ರಾಷ್ಟ್ರಗಳು ಮಾಂಸಾಹಾರ ಸೇವನೆಯನ್ನು ಶೇ 90ರಷ್ಟು ಕಡಿಮೆ ಮಾಡಬೇಕಾದ ಅಗತ್ಯವಿದೆ’ಎಂದು ವಿಜ್ಞಾನಿಗಳು ಅಧ್ಯಯನದಲ್ಲಿ ಸಲಹೆ ನೀಡಿದ್ದಾರೆ.</p>.<p>ಮನುಷ್ಯರು ಸೇವಿಸುವ ಆಹಾರದಿಂದಪರಿಸರದ ಮೇಲೆ ಹೇಗೆ ಪರಿಣಾಮ ಉಂಟಾಗುತ್ತದೆ ಎನ್ನುವ ಕುರಿತು ಈವರೆಗೆ ನಡೆದಿರುವ ಅಧ್ಯಯನಗಳಲ್ಲೇ ಇದು ವಿಸ್ತೃತವಾದುದಾಗಿದ್ದು, <strong>ನೇಚರ್</strong>ಜರ್ನಲ್ನಲ್ಲಿ ಪ್ರಕಟವಾಗಿದೆ.</p>.<p>‘ಈಗಾಗಲೇ ಆಹಾರ ಉದ್ದಿಮೆಗಳಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತಿವೆ.ಮಾಂಸಾಹಾರ ಸೇವನೆ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗದಿದ್ದರೆ, ಈ ಶತಮಾನದ ಮಧ್ಯಭಾಗದ ವೇಳೆಗೆ ಪರಿಸರದ ಮೇಲಾಗುವ ಹಾನಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಜತೆಗೆ 2050ರ ವೇಳೆಗೆ ಭೂಮಿ ಮೇಲಿನ ಜನಸಂಖ್ಯೆ 1,000 ಕೋಟಿ ತಲುಪುವ ಅಂದಾಜಿದೆ. ಈ ಎಲ್ಲಾ ಅಂಶಗಳಿಂದ ಒಟ್ಟಾರೆಯಾಗಿ ಮನುಕುಲಕ್ಕೆಆಹಾರ ಪೂರೈಕೆ ಸಾಮರ್ಥ್ಯ ಕುಗ್ಗಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.</p>.<p><strong>‘ಹಸಿರುಮನೆಗೆ ಹಾನಿ’</strong></p>.<p>‘ನಿರ್ದಿಷ್ಟವಾಗಿ ಮಾಂಸಾಹಾರ ಉತ್ಪಾದನೆ ಪ್ರಕ್ರಿಯೆಯಿಂದ ಹಸಿರುಮನೆಗೆ ಹಾನಿ ಉಂಟುಮಾಡುವಂತಹ ಅನಿಲಗಳು ಬಿಡುಗಡೆ ಆಗುತ್ತವೆ, ದೊಡ್ಡ ಮಟ್ಟದಲ್ಲಿ ಅರಣ್ಯಭೂಮಿ ನಾಶವಾಗುತ್ತದೆ ಹಾಗೂ ಭಾರಿ ಪ್ರಮಾಣದ ನೀರು ಬಳಕೆಯಾಗುತ್ತದೆ. ಹವಾಮಾನ ಬದಲಾವಣೆಯಲ್ಲಿ ನೀರು ಬಳಕೆ ಪ್ರಮಾಣ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.</p>.<p>ಜನರುಮಾಂಸಾಹಾರ ಸೇವನೆ ಕಡಿಮೆ ಮಾಡುವುದರಿಂದ ಹವಾಮಾನ ಸಂರಕ್ಷಣೆಗೆ ತಮ್ಮ ಪಾಲಿನ ಸಣ್ಣ ಕೊಡುಗೆ ನೀಡಬಹುದು ಎನ್ನುವುದು ತಜ್ಞರ ಅಭಿಮತವಾಗಿದೆ.</p>.<p><strong>‘ಸಮಗ್ರ ಪರಿಹಾರ ಅವಶ್ಯ’</strong></p>.<p>‘ಕೇವಲ ಒಂದೇ ಪರಿಹಾರದಿಂದ ಈ ಸವಾಲು ಎದುರಿಸಲು ಸಾಧ್ಯವಾಗುವುದಿಲ್ಲ. ಸಮಗ್ರ ಪರಿಹಾರ ಕಂಡುಕೊಂಡಾಗ ಮಾತ್ರ, ಹೆಚ್ಚುತ್ತಲೇ ಇರುವ ಜನಸಂಖ್ಯೆಗೆ ಆಹಾರ ಪೂರೈಕೆ ಸಾಧ್ಯ’ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಮ್ಯಾಕ್ರೊ ಸ್ಪ್ರಿಂಗ್ಮನ್ ತಿಳಿಸಿದ್ದಾರೆ.</p>.<p>ಹೆಚ್ಚುತ್ತಿರುವಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕಲು ವಿಶ್ವದಾದ್ಯಂತ ಹಿಂದೆಂದೂ ಆಗದ ಮಟ್ಟದಲ್ಲಿ ಸಾಮಾಜಿಕ ಹಾಗೂ ಜಾಗತಿಕ ಆರ್ಥಿಕ ಬದಲಾವಣೆಗಳು ಅವಶ್ಯ ಎಂದು ಈಚೆಗಷ್ಟೆ ವಿಶ್ವಸಂಸ್ಥೆ ತನ್ನ ವರದಿಯೊಂದರಲ್ಲಿ ಎಚ್ಚರಿಕೆ ನೀಡಿತ್ತು.</p>.<p><strong>ಹೈನುಗಾರಿಕೆಯಿಂದ ಅಪಾಯ: ತಜ್ಞರ ನಿಲುವು</strong></p>.<p>‘ಪ್ರಾಣಿಗಳ ಮೇವಿಗಾಗಿ ದೊಡ್ಡ ಮಟ್ಟದಲ್ಲಿ ಜಾಗ ಮೀಸಲಿಡಲು ಅರಣ್ಯ ನಾಶ ಮಾಡಲಾಗುತ್ತದೆ. ಇದರಿಂದ ಇಂಗಾಲ ಹೀರುವ ಮರಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಲ್ಲದೆ, ಪ್ರಾಣಿಗಳು ದೊಡ್ಡ ಮಟ್ಟದಲ್ಲಿ ಹೊರಸೂಸುವಮೀಥೇನ್ ಅನಿಲ ಹಸಿರುಮನೆಗೆ ಹಾನಿಕಾರಕ. ಈ ಎಲ್ಲ ಕಾರಣಗಳಿಂದ ಹೈನುಗಾರಿಕೆಯು ಪರಿಸರಕ್ಕೆ ಮೂರುಪಟ್ಟು ಹೆಚ್ಚು ಅಪಾಯ ಒಡ್ಡುತ್ತದೆ’ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.</p>.<p><strong>ಮುಖ್ಯಾಂಶಗಳು</strong></p>.<p>* ಉತ್ತಮ ಶಿಕ್ಷಣ, ಕೈಗಾರಿಕಾ ಕ್ಷೇತ್ರದ ಸುಧಾರಣೆಗಳಿಂದ ಸಮಸ್ಯೆ ನಿರ್ವಹಣೆ ಸಾಧ್ಯ</p>.<p>* ಆರೋಗ್ಯಕರ ಹಾಗೂಸಸ್ಯಾಧಾರಿತ ಆಹಾರ ಸೇವನೆ ಶೈಲಿ ರೂಢಿಸಿಕೊಳ್ಳುವುದು ಉತ್ತಮ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>