<h2>ಖಾನ್ ಸೋದರರನ್ನು ಬಿಡುಗಡೆ ಮಾಡಬೇಕೆಂದು ಮನವಿ</h2>.<p><strong>ಮದರಾಸ್, ಜುಲೈ 11–</strong> ಗಡಿನಾಡಿನ ಪ್ರದೇಶದಲ್ಲಿ ಖಾನ್ ಅಬ್ದುಲ್ ಗಫಾರ್ ಖಾನ್, ಡಾ. ಖಾನ್ ಸಾಹೇಬ್ ಮತ್ತು ನೂರಾರು ಖುದಾಯಿ ಖಿದ್ಮತ್ಗಾರರು ಬಂಧನವಾಗಿರುವ ಬಗ್ಗೆ ಸೋಷಲಿಸ್ಟ್ ಪಕ್ಷವು ಕಳವಳ ವ್ಯಕ್ತಪಡಿಸಿ, ಅವರನ್ನು ತಡಮಾಡದೆ ಬಿಡುಗಡೆ ಮಾಡಬೇಕೆಂದು ಪಾಕಿಸ್ತಾನದ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುವ ನಿರ್ಣಯವನ್ನು ಅಂಗೀಕರಿಸಿತು.</p>.<p>ಭಾರತ, ಪಾಕಿಸ್ತಾನದಲ್ಲಿ ಎಲ್ಲ ರಾಜಕೀಯಾಭಿಪ್ರಾಯದವರಿಗೂ ಪೂರ್ಣ ಪೌರ ಸ್ವಾತಂತ್ರ್ಯವು ಪುನರುತ್ಥಾಪನೆಯಾಗಬೇಕೆಂದೂ ಇದರಿಂದ ಉಭಯ ಪಕ್ಷಗಳ ಬಾಂಧವ್ಯವು ಬೆಳೆಯುವುದೆಂದೂ ಸೋಷಲಿಸ್ಟ್ ಪಕ್ಷದ ಸಮ್ಮೇಳನವು ಸೂಚಿಸಿತು.</p>.<h2>ಅಡ್ಡ ಹಾದಿಯಲ್ಲಿ ತಾರಾಸಿಂಗ್</h2>.<p><strong>ನವದೆಹಲಿ, ಜುಲೈ 11–</strong> ಅಕಾಲಿ ನಾಯಕ ಮಾಸ್ಟರ್ ತಾರಾಸಿಂಗ್ ಅವರ ಚಟುವಟಿಕೆಗಳನ್ನು ಕೇಂದ್ರದ ಗೃಹ ಸಚಿವ ಶಾಖೆಯವರು ತೀವ್ರ ಭಾವನೆಯಿಂದ ವೀಕ್ಷಿಸುತ್ತಿದ್ದಾರೆ. ಇತ್ತೀಚೆಗೆ ಆತ ಸಿಖ್ಖರನ್ನು ಕಾಂಗ್ರೆಸ್ಸಿನಿಂದ ಈಚೆಗೆ ಸೆಳೆದುಕೊಳ್ಳುಲು ಪ್ರಯತ್ನಿಸುತ್ತಿದ್ದಾರೆ, ಕೋಮುವಾರು ಭಾವನೆಯನ್ನು ಉಗ್ರರೂಪದಲ್ಲಿ ಪ್ರಚಾರ ಮಾಡುತ್ತಿದ್ದಾರೆ.</p>.<p>ಪಂಥ್ ಮಾರ್ಗದ ವೈಭವದ ಪುನರುತ್ಥಾನದ ಪೂರ್ಣ ಅಧಿಕಾರವನ್ನು ಮಾಸ್ಟರ್ ತಾರಾಸಿಂಗ್ ಅವರಿಗೆ ಇತ್ತೀಚೆಗೆ ಸೇರಿದ್ದ ಅಕಾಲಿ ಸಮ್ಮೇಳನದಲ್ಲಿ ಕೊಡಲಾಯಿತು. ಅಂದಿನಿಂದ ಅವರು, ಪಂಜಾಬ್ ಶಾಸನ ಸಭೆಯ ಸಿಖ್ ಸದಸ್ಯರು ಕಾಂಗ್ರೆಸ್ ಸೇರಲು ಕಾರಣವಾದ ಒಪ್ಪಂದವನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಖಾನ್ ಸೋದರರನ್ನು ಬಿಡುಗಡೆ ಮಾಡಬೇಕೆಂದು ಮನವಿ</h2>.<p><strong>ಮದರಾಸ್, ಜುಲೈ 11–</strong> ಗಡಿನಾಡಿನ ಪ್ರದೇಶದಲ್ಲಿ ಖಾನ್ ಅಬ್ದುಲ್ ಗಫಾರ್ ಖಾನ್, ಡಾ. ಖಾನ್ ಸಾಹೇಬ್ ಮತ್ತು ನೂರಾರು ಖುದಾಯಿ ಖಿದ್ಮತ್ಗಾರರು ಬಂಧನವಾಗಿರುವ ಬಗ್ಗೆ ಸೋಷಲಿಸ್ಟ್ ಪಕ್ಷವು ಕಳವಳ ವ್ಯಕ್ತಪಡಿಸಿ, ಅವರನ್ನು ತಡಮಾಡದೆ ಬಿಡುಗಡೆ ಮಾಡಬೇಕೆಂದು ಪಾಕಿಸ್ತಾನದ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುವ ನಿರ್ಣಯವನ್ನು ಅಂಗೀಕರಿಸಿತು.</p>.<p>ಭಾರತ, ಪಾಕಿಸ್ತಾನದಲ್ಲಿ ಎಲ್ಲ ರಾಜಕೀಯಾಭಿಪ್ರಾಯದವರಿಗೂ ಪೂರ್ಣ ಪೌರ ಸ್ವಾತಂತ್ರ್ಯವು ಪುನರುತ್ಥಾಪನೆಯಾಗಬೇಕೆಂದೂ ಇದರಿಂದ ಉಭಯ ಪಕ್ಷಗಳ ಬಾಂಧವ್ಯವು ಬೆಳೆಯುವುದೆಂದೂ ಸೋಷಲಿಸ್ಟ್ ಪಕ್ಷದ ಸಮ್ಮೇಳನವು ಸೂಚಿಸಿತು.</p>.<h2>ಅಡ್ಡ ಹಾದಿಯಲ್ಲಿ ತಾರಾಸಿಂಗ್</h2>.<p><strong>ನವದೆಹಲಿ, ಜುಲೈ 11–</strong> ಅಕಾಲಿ ನಾಯಕ ಮಾಸ್ಟರ್ ತಾರಾಸಿಂಗ್ ಅವರ ಚಟುವಟಿಕೆಗಳನ್ನು ಕೇಂದ್ರದ ಗೃಹ ಸಚಿವ ಶಾಖೆಯವರು ತೀವ್ರ ಭಾವನೆಯಿಂದ ವೀಕ್ಷಿಸುತ್ತಿದ್ದಾರೆ. ಇತ್ತೀಚೆಗೆ ಆತ ಸಿಖ್ಖರನ್ನು ಕಾಂಗ್ರೆಸ್ಸಿನಿಂದ ಈಚೆಗೆ ಸೆಳೆದುಕೊಳ್ಳುಲು ಪ್ರಯತ್ನಿಸುತ್ತಿದ್ದಾರೆ, ಕೋಮುವಾರು ಭಾವನೆಯನ್ನು ಉಗ್ರರೂಪದಲ್ಲಿ ಪ್ರಚಾರ ಮಾಡುತ್ತಿದ್ದಾರೆ.</p>.<p>ಪಂಥ್ ಮಾರ್ಗದ ವೈಭವದ ಪುನರುತ್ಥಾನದ ಪೂರ್ಣ ಅಧಿಕಾರವನ್ನು ಮಾಸ್ಟರ್ ತಾರಾಸಿಂಗ್ ಅವರಿಗೆ ಇತ್ತೀಚೆಗೆ ಸೇರಿದ್ದ ಅಕಾಲಿ ಸಮ್ಮೇಳನದಲ್ಲಿ ಕೊಡಲಾಯಿತು. ಅಂದಿನಿಂದ ಅವರು, ಪಂಜಾಬ್ ಶಾಸನ ಸಭೆಯ ಸಿಖ್ ಸದಸ್ಯರು ಕಾಂಗ್ರೆಸ್ ಸೇರಲು ಕಾರಣವಾದ ಒಪ್ಪಂದವನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>