ಸಂಸದ ತೇಜಸ್ವಿ ಸೂರ್ಯ ಮತ್ತು ತಂಡದವರು ಬಿಬಿಎಂಪಿ ಸಿಬ್ಬಂದಿಯ ‘ಹಾಸಿಗೆ ಬ್ಲಾಕಿಂಗ್’ ಕರ್ಮಕಾಂಡವನ್ನು
ಬಯಲು ಮಾಡಿರುವುದು ಒಳ್ಳೆಯ ಕೆಲಸ. ಆದರೆ ಅದನ್ನು ಪತ್ರಿಕಾಗೋಷ್ಠಿಯ ಮುಖಾಂತರ ಸಾರ್ವಜನಿಕರಿಗೆ
ತಿಳಿಸಿದ ಹಿಂದಿನ ಉದ್ದೇಶವೇನು? ಅವರದೇ ಪಕ್ಷದ ಸರ್ಕಾರ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವಾಗ, ಪ್ರಕರಣದ ಬಗ್ಗೆ ಅನುಮಾನ ಬಂದ ಕೂಡಲೇ ಮುಖ್ಯಮಂತ್ರಿಯವರಿಗೆ ದಾಖಲೆ ಒದಗಿಸಿ, ತನಿಖೆ ಮಾಡಿಸಿ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಿ ವ್ಯವಸ್ಥೆಯನ್ನು ಸರಿದಾರಿಗೆ ತರಬಹುದಿತ್ತು. ಮುಖ್ಯಮಂತ್ರಿ ಸಹಕಾರ ಕೊಡದಿದ್ದರೆ ಕೇಂದ್ರ ಸರ್ಕಾರದ ಸಹಾಯ ಪಡೆಯಬಹುದಿತ್ತು. ಅದೂ ಆಗದಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದಿತ್ತು.