ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಶಂಕರನಾಯಕ ತಾಂಡಾದ ಸರ್ಕಾರಿ ಶಾಲೆಯ ಶಿಕ್ಷಕ ಶಂಕರಲಿಂಗ ಬ. ಹಿಪ್ಪರಗಿ ಅವರು ಶಾಲಾ ಮಕ್ಕಳಿಗಾಗಿ ಮಾಡುತ್ತಿರುವ ಕೈಂಕರ್ಯದ ಬಗ್ಗೆ (ಪ್ರ.ವಾ., ಸೆ. 3) ತಿಳಿದು ಶಿಕ್ಷಕ ಸಮು ದಾಯದ ಬಗ್ಗೆ ಹೆಮ್ಮೆ ಹಾಗೂ ಅಭಿಮಾನಗಳೆರಡೂ ಏಕಕಾಲಕ್ಕೆ ಮೂಡಿದಂತಾಯಿತು. 45 ಮಕ್ಕಳಿರುವ, 5 ತರಗತಿಗಳನ್ನು ಹೊಂದಿದ ಶಾಲೆಯಲ್ಲಿ ಒಬ್ಬರೇ ಶಿಕ್ಷಕರಿದ್ದರೂ ತಮ್ಮ ಅಭೂತಪೂರ್ವ ಶ್ರದ್ಧೆಯಿಂದ ಅಲ್ಲಿನ ಗ್ರಾಮಸ್ಥರು ಹಾಗೂ ಎಸ್ಡಿಎಂಸಿಯವರ ಸಹಕಾರದೊಂದಿಗೆ ಶಾಲೆಯನ್ನು ಅಭಿವೃದ್ಧಿಪಥದತ್ತ ಮುನ್ನಡೆಸಲು ಅವರು ಪಡುತ್ತಿ ರುವ ಪರಿಶ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂಥದ್ದು.