<p><strong>ಬೆಂಗಳೂರು:</strong> 'ಈ ಸಲ ಕಪ್ ನಮ್ದೇ' ಎಂದು ಹೇಳಲು ನನಗೆ ಅವಕಾಶವಿಲ್ಲ. ಆದರೆ ಖಂಡಿತವಾಗಿಯೂ ಈ ಸಲ ಆರ್ಸಿಬಿ ಅಭಿಮಾನಿಗಳ ದೀರ್ಘ ಕಾಲದ ಕಾಯುವಿಕೆಗೆ ವಿರಾಮ ಬೀಳಲಿದೆ ಎಂದು ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. </p><p>18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿರುವ ಆರ್ಸಿಬಿ ಫೈನಲ್ಗೆ ಲಗ್ಗೆ ಇಟ್ಟಿದೆ. ಆ ಮೂಲಕ 2016ರ ಬಳಿಕ ಫೈನಲ್ಗೆ ಪ್ರವೇಶಿಸಿದೆ. </p><p>ಈ ಸಂಬಂಧ 'ಇಎಸ್ಪಿಎನ್ ಕ್ರಿಕ್ಇನ್ಫೋ'ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಎಬಿ ಡಿವಿಲಿಯರ್ಸ್, ಆರ್ಸಿಬಿ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ. </p><p>ಆರ್ಸಿಬಿ ಅಭಿಮಾನಗಳಿಗೆ ನೀವು ನೀಡುವ ಸಂದೇಶ ಏನು ಎಂದು ಕೇಳಿದಾಗ, 'ಸಮಯ ಆಗತವಾಗಿದೆ. ಈ ಸಲ ಆರ್ಸಿಬಿ ಗುರಿ ಮುಟ್ಟಲಿದೆ. 'ಬೆಂಗಳೂರಿನಲ್ಲಿ ಬಳಕೆ ಮಾಡುವ ಆ ವಾಕ್ಯವನ್ನು (ಈ ಸಲ ಕಪ್ ನಮ್ದೇ) ಬಳಕೆ ಮಾಡಲು ನನಗೆ ಅನುಮತಿಯಿಲ್ಲ. ಅದನ್ನು ನಾನು ಹೇಳಬಾರದೆಂದು ವಿರಾಟ್ ಕೊಹ್ಲಿ ಹೇಳಿದ್ದರು. ಆದರೆ ಈ ಸಲ ಆರ್ಸಿಬಿ ಕಪ್ ಗೆಲ್ಲುವ ನಂಬಿಕೆ ನನಗಿದೆ. ಕಾತರದಿಂದಿರಿ' ಎಂದು ಹೇಳಿದ್ದಾರೆ. </p><p>ಅದೇ ವೇಳೆ ಅತ್ಯಂತ ಒತ್ತಡದ ಸನ್ನವೇಶದಲ್ಲೂ ತಂಡದೆಲ್ಲ ಆಟಗಾರರ ಅತ್ಯುತ್ತಮ ಪ್ರದರ್ಶನವನ್ನು ವಿಲಿಯರ್ಸ್ ಕೊಂಡಾಡಿದ್ದಾರೆ. </p><p>2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ಫೈನಲ್ಗೆ ಪ್ರವೇಶಿಸಿತ್ತು. ಅಂದಿನ ತಂಡದಲ್ಲಿ ಎಬಿ ಡಿವಿಲಿಯರ್ಸ್ ಇದ್ದರು. </p>.'ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ'; ಪತ್ನಿ ಅನುಷ್ಕಾಗೆ ಸನ್ನೆ ಮಾಡಿದ ವಿರಾಟ್ .IPL | ಫೈನಲ್ಗೆ ಆರ್ಸಿಬಿ; ವಿರಾಟ್, ಕುಂಬ್ಳೆ, ವೆಟೊರಿ ಸಾಲಿಗೆ ಪಾಟೀದಾರ್.RCB Final | 4ನೇ ಬಾರಿ ಫೈನಲ್ಗೆ ಲಗ್ಗೆ; ಪ್ರಶಸ್ತಿಗೆ ಇನ್ನು ಒಂದೇ ಮೆಟ್ಟಿಲು.ಯಶ್, ಜೋಶ್, ಸುಯಶ್ ತಂದ ಯಶಸ್ಸು: RCB ಕಿರೀಟಧಾರಣೆಗೆ ಇನ್ನೊಂದೇ ಹೆಜ್ಜೆ ಬಾಕಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> 'ಈ ಸಲ ಕಪ್ ನಮ್ದೇ' ಎಂದು ಹೇಳಲು ನನಗೆ ಅವಕಾಶವಿಲ್ಲ. ಆದರೆ ಖಂಡಿತವಾಗಿಯೂ ಈ ಸಲ ಆರ್ಸಿಬಿ ಅಭಿಮಾನಿಗಳ ದೀರ್ಘ ಕಾಲದ ಕಾಯುವಿಕೆಗೆ ವಿರಾಮ ಬೀಳಲಿದೆ ಎಂದು ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. </p><p>18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿರುವ ಆರ್ಸಿಬಿ ಫೈನಲ್ಗೆ ಲಗ್ಗೆ ಇಟ್ಟಿದೆ. ಆ ಮೂಲಕ 2016ರ ಬಳಿಕ ಫೈನಲ್ಗೆ ಪ್ರವೇಶಿಸಿದೆ. </p><p>ಈ ಸಂಬಂಧ 'ಇಎಸ್ಪಿಎನ್ ಕ್ರಿಕ್ಇನ್ಫೋ'ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಎಬಿ ಡಿವಿಲಿಯರ್ಸ್, ಆರ್ಸಿಬಿ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ. </p><p>ಆರ್ಸಿಬಿ ಅಭಿಮಾನಗಳಿಗೆ ನೀವು ನೀಡುವ ಸಂದೇಶ ಏನು ಎಂದು ಕೇಳಿದಾಗ, 'ಸಮಯ ಆಗತವಾಗಿದೆ. ಈ ಸಲ ಆರ್ಸಿಬಿ ಗುರಿ ಮುಟ್ಟಲಿದೆ. 'ಬೆಂಗಳೂರಿನಲ್ಲಿ ಬಳಕೆ ಮಾಡುವ ಆ ವಾಕ್ಯವನ್ನು (ಈ ಸಲ ಕಪ್ ನಮ್ದೇ) ಬಳಕೆ ಮಾಡಲು ನನಗೆ ಅನುಮತಿಯಿಲ್ಲ. ಅದನ್ನು ನಾನು ಹೇಳಬಾರದೆಂದು ವಿರಾಟ್ ಕೊಹ್ಲಿ ಹೇಳಿದ್ದರು. ಆದರೆ ಈ ಸಲ ಆರ್ಸಿಬಿ ಕಪ್ ಗೆಲ್ಲುವ ನಂಬಿಕೆ ನನಗಿದೆ. ಕಾತರದಿಂದಿರಿ' ಎಂದು ಹೇಳಿದ್ದಾರೆ. </p><p>ಅದೇ ವೇಳೆ ಅತ್ಯಂತ ಒತ್ತಡದ ಸನ್ನವೇಶದಲ್ಲೂ ತಂಡದೆಲ್ಲ ಆಟಗಾರರ ಅತ್ಯುತ್ತಮ ಪ್ರದರ್ಶನವನ್ನು ವಿಲಿಯರ್ಸ್ ಕೊಂಡಾಡಿದ್ದಾರೆ. </p><p>2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ಫೈನಲ್ಗೆ ಪ್ರವೇಶಿಸಿತ್ತು. ಅಂದಿನ ತಂಡದಲ್ಲಿ ಎಬಿ ಡಿವಿಲಿಯರ್ಸ್ ಇದ್ದರು. </p>.'ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ'; ಪತ್ನಿ ಅನುಷ್ಕಾಗೆ ಸನ್ನೆ ಮಾಡಿದ ವಿರಾಟ್ .IPL | ಫೈನಲ್ಗೆ ಆರ್ಸಿಬಿ; ವಿರಾಟ್, ಕುಂಬ್ಳೆ, ವೆಟೊರಿ ಸಾಲಿಗೆ ಪಾಟೀದಾರ್.RCB Final | 4ನೇ ಬಾರಿ ಫೈನಲ್ಗೆ ಲಗ್ಗೆ; ಪ್ರಶಸ್ತಿಗೆ ಇನ್ನು ಒಂದೇ ಮೆಟ್ಟಿಲು.ಯಶ್, ಜೋಶ್, ಸುಯಶ್ ತಂದ ಯಶಸ್ಸು: RCB ಕಿರೀಟಧಾರಣೆಗೆ ಇನ್ನೊಂದೇ ಹೆಜ್ಜೆ ಬಾಕಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>