<p><strong>ಢಾಕಾ</strong>: ಈ ಋತುವಿನಲ್ಲಿ ಶ್ರೀಮಂತ ಲೀಗ್ ಐಪಿಎಲ್ ಬದಲು ರಾಷ್ಟ್ರೀಯ ತಂಡಕ್ಕೆ ಆಡಲು ಆದ್ಯತೆ ನೀಡಿದ ಕಾರಣ ಮೂವರು ಹಿರಿಯ ಆಟಗಾರರಿಗೆ ಒಟ್ಟು ₹ 53.30 ಲಕ್ಷ ಮೊತ್ತವನ್ನು ‘ಪರಿಹಾರ’ವಾಗಿ ನೀಡಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.</p><p>‘ಇದು ನಮ್ಮ ಕಡೆಯಿಂದ ಸಣ್ಣ ಕೊಡುಗೆ’ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆಪರೇಷನ್ಸ್ ಮುಖ್ಯಸ್ಥ ಜಲಾಲ್ ಯೂನುಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈ ಹಣವನ್ನು ಶಕೀಬ್ ಅಲ್ ಹಸನ್, ತಸ್ಕಿನ್ ಅಹ್ಮದ್ ಮತ್ತು ಲಿಟನ್ ದಾಸ್ ಅವರಿಗೆ ಹಂಚಲಾಗಿದೆ.</p><p>ಅವರು ನಮ್ಮಿಂದೇನೂ ಹಣವನ್ನು ಕೇಳಲಿಲ್ಲ. ಆದರೆ ಐಪಿಎಲ್ ತ್ಯಜಿಸಿದ್ದರಿಂದ ಆಗುವ ನಷ್ಟಕ್ಕೆ ಭಾಗಶಃ ಆದರೂ ತುಂಬಿಕೊಡಬೇಕು ಎಂದು ನಮಗೆ ಅನಿಸಿತು ಎಂದು ಸ್ವಲ್ಪವಾದರೂ ಆದರೂ ಹಣವನ್ನು ಸರಿದೂಗಿಸಬೇಕಿತ್ತು ಜಲಾಲ್ ಹೇಳಿದರು. ಇದನ್ನು ಇನ್ನು ಕಡ್ಡಾಯವಾಗೇನೂ ಪಾಲಿಸುವುದಿಲ್ಲ ಎಂಬ ಮಾತನ್ನೂ ಸೇರಿಸಿದರು.</p><p>ಐಪಿಎಲ್ನಲ್ಲಿ ಶಕೀಬ್ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ಖರೀದಿಸಿತ್ತು. ಆದರೆ ಅವರು ಹಿಂದೆ ಸರಿದು, ಐರ್ಲೆಂಡ್ ವಿರುದ್ಧ ಸ್ವದೇಶದಲ್ಲಿ ಮತ್ತು ಹೊರಗೆ ನಡೆದ ಸರಣಿಯಲ್ಲಿ ಆಡಿದರು. ಈ ಸರಣಿ ಐಪಿಎಲ್ ವೇಳೆಯಲ್ಲೇ ಇತ್ತು. ಕೋಲ್ಕತ್ತ ತಂಡಕ್ಕೆ ಆಯ್ಕೆಯಾಗುವ ಮೂಲಕ ಮೊದಲ ಬಾರಿ ಐಪಿಎಲ್ ಅವಕಾಶ ಪಡೆದ ಲಿಟ್ಟನ್ ಒಂದು ಮಾತ್ರ ಆಡಿ ಸ್ವದೇಶಕ್ಕೆ ಮರಳಿದ್ದರು. ಢಾಕಾದಲ್ಲಿ ಏ. 4 ರಿಂದ 8ರವರೆಗೆ ಟೆಸ್ಟ್ ಆಡುವವರೆಗೆ) ಐಪಿಎಲ್ಗೆ ಆಡಲು ಅನುಮತಿ ನೀಡಿರಲಿಲ್ಲ. ಶಕೀಬ್ ನಾಯಕ ಮತ್ತು ದಾಸ್ ಉಪನಾಯಕ ಆಗಿದ್ದರು. ತಸ್ಕಿನ್ ಐಪಿಎಲ್ನಲ್ಲಿ ಖರೀದಿ ಆಗಿರಲಿಲ್ಲ. ಆದರೆ ಅವರು ರಾಷ್ಟ್ರೀಯ ತಂಡದ ಮೀಸಲು ಆಟಗಾರರಲ್ಲಿ ಒಬ್ಬರಾಗಿದ್ದರು.</p><p>ಮುಸ್ತಫಿಜುರ್ ರಹಮಾನ್ ಐಪಿಎಲ್ ಋತುವಿನಲ್ಲಿ ಆಡಿದ ಏಕಮಾತ್ರ ಬಾಂಗ್ಲಾ ಆಟಗಾರರಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಿದ್ದರು. ಆದರೆ ಅವಕಾಶ ಸಿಕ್ಕಿದ್ದು ಎರಡು ಪಂದ್ಯಗಳಲ್ಲಿ ಮಾತ್ರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ</strong>: ಈ ಋತುವಿನಲ್ಲಿ ಶ್ರೀಮಂತ ಲೀಗ್ ಐಪಿಎಲ್ ಬದಲು ರಾಷ್ಟ್ರೀಯ ತಂಡಕ್ಕೆ ಆಡಲು ಆದ್ಯತೆ ನೀಡಿದ ಕಾರಣ ಮೂವರು ಹಿರಿಯ ಆಟಗಾರರಿಗೆ ಒಟ್ಟು ₹ 53.30 ಲಕ್ಷ ಮೊತ್ತವನ್ನು ‘ಪರಿಹಾರ’ವಾಗಿ ನೀಡಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.</p><p>‘ಇದು ನಮ್ಮ ಕಡೆಯಿಂದ ಸಣ್ಣ ಕೊಡುಗೆ’ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆಪರೇಷನ್ಸ್ ಮುಖ್ಯಸ್ಥ ಜಲಾಲ್ ಯೂನುಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈ ಹಣವನ್ನು ಶಕೀಬ್ ಅಲ್ ಹಸನ್, ತಸ್ಕಿನ್ ಅಹ್ಮದ್ ಮತ್ತು ಲಿಟನ್ ದಾಸ್ ಅವರಿಗೆ ಹಂಚಲಾಗಿದೆ.</p><p>ಅವರು ನಮ್ಮಿಂದೇನೂ ಹಣವನ್ನು ಕೇಳಲಿಲ್ಲ. ಆದರೆ ಐಪಿಎಲ್ ತ್ಯಜಿಸಿದ್ದರಿಂದ ಆಗುವ ನಷ್ಟಕ್ಕೆ ಭಾಗಶಃ ಆದರೂ ತುಂಬಿಕೊಡಬೇಕು ಎಂದು ನಮಗೆ ಅನಿಸಿತು ಎಂದು ಸ್ವಲ್ಪವಾದರೂ ಆದರೂ ಹಣವನ್ನು ಸರಿದೂಗಿಸಬೇಕಿತ್ತು ಜಲಾಲ್ ಹೇಳಿದರು. ಇದನ್ನು ಇನ್ನು ಕಡ್ಡಾಯವಾಗೇನೂ ಪಾಲಿಸುವುದಿಲ್ಲ ಎಂಬ ಮಾತನ್ನೂ ಸೇರಿಸಿದರು.</p><p>ಐಪಿಎಲ್ನಲ್ಲಿ ಶಕೀಬ್ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ಖರೀದಿಸಿತ್ತು. ಆದರೆ ಅವರು ಹಿಂದೆ ಸರಿದು, ಐರ್ಲೆಂಡ್ ವಿರುದ್ಧ ಸ್ವದೇಶದಲ್ಲಿ ಮತ್ತು ಹೊರಗೆ ನಡೆದ ಸರಣಿಯಲ್ಲಿ ಆಡಿದರು. ಈ ಸರಣಿ ಐಪಿಎಲ್ ವೇಳೆಯಲ್ಲೇ ಇತ್ತು. ಕೋಲ್ಕತ್ತ ತಂಡಕ್ಕೆ ಆಯ್ಕೆಯಾಗುವ ಮೂಲಕ ಮೊದಲ ಬಾರಿ ಐಪಿಎಲ್ ಅವಕಾಶ ಪಡೆದ ಲಿಟ್ಟನ್ ಒಂದು ಮಾತ್ರ ಆಡಿ ಸ್ವದೇಶಕ್ಕೆ ಮರಳಿದ್ದರು. ಢಾಕಾದಲ್ಲಿ ಏ. 4 ರಿಂದ 8ರವರೆಗೆ ಟೆಸ್ಟ್ ಆಡುವವರೆಗೆ) ಐಪಿಎಲ್ಗೆ ಆಡಲು ಅನುಮತಿ ನೀಡಿರಲಿಲ್ಲ. ಶಕೀಬ್ ನಾಯಕ ಮತ್ತು ದಾಸ್ ಉಪನಾಯಕ ಆಗಿದ್ದರು. ತಸ್ಕಿನ್ ಐಪಿಎಲ್ನಲ್ಲಿ ಖರೀದಿ ಆಗಿರಲಿಲ್ಲ. ಆದರೆ ಅವರು ರಾಷ್ಟ್ರೀಯ ತಂಡದ ಮೀಸಲು ಆಟಗಾರರಲ್ಲಿ ಒಬ್ಬರಾಗಿದ್ದರು.</p><p>ಮುಸ್ತಫಿಜುರ್ ರಹಮಾನ್ ಐಪಿಎಲ್ ಋತುವಿನಲ್ಲಿ ಆಡಿದ ಏಕಮಾತ್ರ ಬಾಂಗ್ಲಾ ಆಟಗಾರರಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಿದ್ದರು. ಆದರೆ ಅವಕಾಶ ಸಿಕ್ಕಿದ್ದು ಎರಡು ಪಂದ್ಯಗಳಲ್ಲಿ ಮಾತ್ರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>