<p><strong>ನವದೆಹಲಿ: </strong>ಕ್ರೀಡಾಂಗಣದಾಚೆ ಮಹೇಂದ್ರಸಿಂಗ್ ಧೋನಿಯ ಪೂರ್ವಾಭ್ಯಾಸ, ನಡವಳಿಕೆ ಮತ್ತು ಆಟದ ಕುರಿತ ಯೋಜನೆ ರೂಪಿಸುವ ಪರಿಯಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನ ಹಾದಿಯಲ್ಲಿದೆ ಎಂದು ಎನ್ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಹೇಳಿದ್ದಾರೆ.</p>.<p>’ಸಿಎಸ್ಕೆ ಬಳಗದ ತೆರೆಮರೆಯಲ್ಲಿರುವ ನೆರವು ಸಿಬ್ಬಂದಿಯು ಚಾಣಾಕ್ಷವಾಗಿದೆ. ಅವರು ಸಂಗ್ರಹಿಸುವ ದತ್ತಾಂಶ ಮತ್ತು ಜನಸಂಪರ್ಕವು ಉತ್ತಮವಾಗಿದೆ. ಆಟಗಾರರೊಂದಿಗೆ ಈ ಸಿಬ್ಬಂದಿಯು ನಿರಂತರ ಸಂಪರ್ಕದಲ್ಲಿರುತ್ತದೆ. ಜೂನಿಯರ್ ಹಂತದ ತಂಡಗಳನ್ನು ನಿರ್ವಹಿಸುವ ಅನುಭವ ಈ ತಂಡಗಳಿಗೆ ಇದೆ‘ ಎಂದು ರಾಹುಲ್ ಹೇಳಿದ್ದಾರೆ.</p>.<p>’ಧೋನಿ ಅವರ ವೃತ್ತಿಪರತೆ ಎಂದಿಗೂ ಬದಲಾಗಿಲ್ಲ. ಅವರು ಮಾಹಿತಿಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಿ ಅನುಷ್ಠಾನ ಮಾಡುವಲ್ಲಿ ಅವರು ಮತ್ತು ನೆರವು ತಂಡದ ಪಾತ್ರ ಪ್ರಮುಖವಾಗಿದೆ‘ ಇಎಸ್ಪಿಎನ್ ಕ್ರಿಕ್ಇನ್ಫೋ ವೆಬಿನಾರ್ನಲ್ಲಿ ಹೇಳಿದ್ದಾರೆ.</p>.<p>ದ್ರಾವಿಡ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಸಿಎಸ್ಕೆ ಸಹಮಾಲೀಕ ಎನ್. ಶ್ರೀನಿವಾಸನ್, ’ಮಾಹಿತಿಗಳ ರಾಶಿಯೇ ನಮ್ಮಲಿದೆ. ಉದಾಹರಣೆಗೆ ಟಿ20 ಪಂದ್ಯದಲ್ಲಿ ಆಡುವ ಪ್ರತಿಯೊಬ್ಬ ಬ್ಯಾಟ್ಸ್ಮನ್ ವಿಡಿಯೊಗಳು ಇರುತ್ತವೆ. ಆ ಬ್ಯಾಟ್ಸ್ಮನ್ಗಳ ಲೋಪದೋಷಗಳನ್ನು ಗುರುತಿಸುತ್ತಾರೆ. ನಿರಂತರವಾಗಿ ನೋಡಿ ಅಧ್ಯಯನ ಮಾಡಿ ಬೌಲರ್ಗಳಿಗೂ ತೋರಿಸಿ ಮಾಹಿತಿ ನೀಡುವ ಕಾರ್ಯವನ್ನು ಕೋಚ್ಗಳು ಮಾಡುತ್ತಾರೆ‘ ಎಂದರು.</p>.<p>’ಇಂತಹ ಕಾರ್ಯದಲ್ಲಿ ಧೋನಿ ನೇರವಾಗಿ ಭಾಗಿಯಾಗುವುದಿಲ್ಲ. ಇದರಲ್ಲಿ ಬೌಲಿಂಗ್ ಕೋಚ್, ಮುಖ್ಯ ಕೋಚ್ (ಫ್ಲೆಮಿಂಗ್) ಇರುತ್ತಾರೆ. ಉಳಿದವರು ಇರುತ್ತಾರೆ. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ನೀಡುತ್ತಾರೆ. ಆದರೆ ಧೋನಿ ಏನೂ ಮಾತನಾಡುವುದಿಲ್ಲ‘ ಎಂದು ವಿವರಿಸಿದರು.</p>.<p>’ಅವರ ಸ್ವಭಾವವೇ ಹಾಗೆ. ಪಂದ್ಯ ನಡೆಯುವ ಕಣದಲ್ಲಿಯೇ ಎದುರಾಳಿ ಬ್ಯಾಟ್ಸ್ಮನ್ಗಳನ್ನು ನೋಡಿ ತಂತ್ರಗಳ ಕುರಿತು ನಿರ್ಣಯಿಸುವ ಆತ್ಮವಿಶ್ವಾಸ ಧೋನಿಗೆ ಇದೆ. ಲಭ್ಯವಿರುವಾ ಅಪಾರ ಪ್ರಮಾಣದ ಮಾಹಿತಿ, ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಕೂಡ ಕಷ್ಟಸಾಧ್ಯ‘ ಎಂದರು.</p>.<p>’ಹಿಂದೊಮ್ಮೆ ನಾನು ಒಬ್ಬ ಶ್ರೇಷ್ಠ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಹೇಳಿದ್ದೆ. ಆದರೆ, ಧೋನಿ ಖಡಾಖಂಡಿತವಾಗಿ ನಿರಾಕರಿಸಿದ್ದರು. ಆ ವ್ಯಕ್ತಿಯು ತಂಡದ ಒಗ್ಗಟ್ಟು ಮತ್ತು ವಾತಾವರಣವನ್ನು ಕೆಡಿಸುತ್ತಾನೆ. ಆದ್ದರಿಂದ ಬೇಡ ಅಂದಿದ್ದರು. ಅಲ್ಲದೇ ಅಮೆರಿಕದಲ್ಲಿ ನೋಡಿ ಫ್ರ್ಯಾಂಚೈಸ್ ಲೀಗ್ಗಳು ಎಷ್ಟ ಕಾಲದಿಂದ ನಡೆಯುತ್ತಿವೆ. ಅದಕ್ಕೆ ಕಾರಣ ತಂಡದೊಳಗಿರುವ ಸಾಮರಸ್ಯವೆಂದು ಹೇಳಿದ್ದರು‘ ಎಂದು ಶ್ರಿನಿವಾಸನ್ ನೆನಪಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕ್ರೀಡಾಂಗಣದಾಚೆ ಮಹೇಂದ್ರಸಿಂಗ್ ಧೋನಿಯ ಪೂರ್ವಾಭ್ಯಾಸ, ನಡವಳಿಕೆ ಮತ್ತು ಆಟದ ಕುರಿತ ಯೋಜನೆ ರೂಪಿಸುವ ಪರಿಯಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನ ಹಾದಿಯಲ್ಲಿದೆ ಎಂದು ಎನ್ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಹೇಳಿದ್ದಾರೆ.</p>.<p>’ಸಿಎಸ್ಕೆ ಬಳಗದ ತೆರೆಮರೆಯಲ್ಲಿರುವ ನೆರವು ಸಿಬ್ಬಂದಿಯು ಚಾಣಾಕ್ಷವಾಗಿದೆ. ಅವರು ಸಂಗ್ರಹಿಸುವ ದತ್ತಾಂಶ ಮತ್ತು ಜನಸಂಪರ್ಕವು ಉತ್ತಮವಾಗಿದೆ. ಆಟಗಾರರೊಂದಿಗೆ ಈ ಸಿಬ್ಬಂದಿಯು ನಿರಂತರ ಸಂಪರ್ಕದಲ್ಲಿರುತ್ತದೆ. ಜೂನಿಯರ್ ಹಂತದ ತಂಡಗಳನ್ನು ನಿರ್ವಹಿಸುವ ಅನುಭವ ಈ ತಂಡಗಳಿಗೆ ಇದೆ‘ ಎಂದು ರಾಹುಲ್ ಹೇಳಿದ್ದಾರೆ.</p>.<p>’ಧೋನಿ ಅವರ ವೃತ್ತಿಪರತೆ ಎಂದಿಗೂ ಬದಲಾಗಿಲ್ಲ. ಅವರು ಮಾಹಿತಿಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಿ ಅನುಷ್ಠಾನ ಮಾಡುವಲ್ಲಿ ಅವರು ಮತ್ತು ನೆರವು ತಂಡದ ಪಾತ್ರ ಪ್ರಮುಖವಾಗಿದೆ‘ ಇಎಸ್ಪಿಎನ್ ಕ್ರಿಕ್ಇನ್ಫೋ ವೆಬಿನಾರ್ನಲ್ಲಿ ಹೇಳಿದ್ದಾರೆ.</p>.<p>ದ್ರಾವಿಡ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಸಿಎಸ್ಕೆ ಸಹಮಾಲೀಕ ಎನ್. ಶ್ರೀನಿವಾಸನ್, ’ಮಾಹಿತಿಗಳ ರಾಶಿಯೇ ನಮ್ಮಲಿದೆ. ಉದಾಹರಣೆಗೆ ಟಿ20 ಪಂದ್ಯದಲ್ಲಿ ಆಡುವ ಪ್ರತಿಯೊಬ್ಬ ಬ್ಯಾಟ್ಸ್ಮನ್ ವಿಡಿಯೊಗಳು ಇರುತ್ತವೆ. ಆ ಬ್ಯಾಟ್ಸ್ಮನ್ಗಳ ಲೋಪದೋಷಗಳನ್ನು ಗುರುತಿಸುತ್ತಾರೆ. ನಿರಂತರವಾಗಿ ನೋಡಿ ಅಧ್ಯಯನ ಮಾಡಿ ಬೌಲರ್ಗಳಿಗೂ ತೋರಿಸಿ ಮಾಹಿತಿ ನೀಡುವ ಕಾರ್ಯವನ್ನು ಕೋಚ್ಗಳು ಮಾಡುತ್ತಾರೆ‘ ಎಂದರು.</p>.<p>’ಇಂತಹ ಕಾರ್ಯದಲ್ಲಿ ಧೋನಿ ನೇರವಾಗಿ ಭಾಗಿಯಾಗುವುದಿಲ್ಲ. ಇದರಲ್ಲಿ ಬೌಲಿಂಗ್ ಕೋಚ್, ಮುಖ್ಯ ಕೋಚ್ (ಫ್ಲೆಮಿಂಗ್) ಇರುತ್ತಾರೆ. ಉಳಿದವರು ಇರುತ್ತಾರೆ. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ನೀಡುತ್ತಾರೆ. ಆದರೆ ಧೋನಿ ಏನೂ ಮಾತನಾಡುವುದಿಲ್ಲ‘ ಎಂದು ವಿವರಿಸಿದರು.</p>.<p>’ಅವರ ಸ್ವಭಾವವೇ ಹಾಗೆ. ಪಂದ್ಯ ನಡೆಯುವ ಕಣದಲ್ಲಿಯೇ ಎದುರಾಳಿ ಬ್ಯಾಟ್ಸ್ಮನ್ಗಳನ್ನು ನೋಡಿ ತಂತ್ರಗಳ ಕುರಿತು ನಿರ್ಣಯಿಸುವ ಆತ್ಮವಿಶ್ವಾಸ ಧೋನಿಗೆ ಇದೆ. ಲಭ್ಯವಿರುವಾ ಅಪಾರ ಪ್ರಮಾಣದ ಮಾಹಿತಿ, ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಕೂಡ ಕಷ್ಟಸಾಧ್ಯ‘ ಎಂದರು.</p>.<p>’ಹಿಂದೊಮ್ಮೆ ನಾನು ಒಬ್ಬ ಶ್ರೇಷ್ಠ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಹೇಳಿದ್ದೆ. ಆದರೆ, ಧೋನಿ ಖಡಾಖಂಡಿತವಾಗಿ ನಿರಾಕರಿಸಿದ್ದರು. ಆ ವ್ಯಕ್ತಿಯು ತಂಡದ ಒಗ್ಗಟ್ಟು ಮತ್ತು ವಾತಾವರಣವನ್ನು ಕೆಡಿಸುತ್ತಾನೆ. ಆದ್ದರಿಂದ ಬೇಡ ಅಂದಿದ್ದರು. ಅಲ್ಲದೇ ಅಮೆರಿಕದಲ್ಲಿ ನೋಡಿ ಫ್ರ್ಯಾಂಚೈಸ್ ಲೀಗ್ಗಳು ಎಷ್ಟ ಕಾಲದಿಂದ ನಡೆಯುತ್ತಿವೆ. ಅದಕ್ಕೆ ಕಾರಣ ತಂಡದೊಳಗಿರುವ ಸಾಮರಸ್ಯವೆಂದು ಹೇಳಿದ್ದರು‘ ಎಂದು ಶ್ರಿನಿವಾಸನ್ ನೆನಪಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>