<p><strong>ಚೆನ್ನೈ: </strong>ಕೋವಿಡ್–19 ನಿಂದ ಉಂಟಾಗಿರುವ ಸಂಕಷ್ಟದ ಸನ್ನಿವೇಶವನ್ನು ಗಮನದಲ್ಲಿರಿಸಿ ಮುಂದಿನ ದಿನಗಳಲ್ಲಿ ಐಪಿಎಲ್ ಟೂರ್ನಿಯನ್ನು ಭಾರತದ ಆಟಗಾರರನ್ನು ಮಾತ್ರವೇ ಒಳಗೊಂಡಂತೆ ನಡೆಸಬಹುದು ಎಂದು ರಾಜಸ್ಥಾನ ರಾಯಲ್ಸ್ ಪ್ರಾಂಚೈಸ್ ನೀಡಿರುವ ಸಲಹೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿರಾಕರಿಸಿದೆ.</p>.<p>ಸದ್ಯ ಐಪಿಎಲ್ ಟೂರ್ನಿಯನ್ನು ಕೋವಿಡ್–19 ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆಸ್ಟ್ರೇಲಿಯಾದಲ್ಲಿ ಸೆಪ್ಟೆಂಬರ್–ಅಕ್ಟೋಬರ್ನಲ್ಲಿ ನಡೆಯಬೇಕಿರುವ ಟಿ–20 ವಿಶ್ವಕಪ್ ರದ್ದಾದರೆ, ಅದೇ ವೇಳೆ ಭಾರತದಲ್ಲಿ ಐಪಿಎಲ್ ನಡೆಸಲು ಯೋಜಿಸಲಾಗುತ್ತಿದೆ.</p>.<p>ರಾಜಸ್ಥಾನ ಪ್ರಾಂಚೈಸ್ ಸಲಹೆ ಸಂಬಂಧ ಪ್ರತಿಕ್ರಿಯಿಸಿರುವ ಚೆನ್ನೈ, ‘ಕೇವಲ ಭಾರತೀಯ ಆಟಗಾರರೊಂದಿಗೆ ಐಪಿಎಲ್ ಆಡುವ ವಿಚಾರದಲ್ಲಿ ಸಿಎಸ್ಕೆಗೆ ಆಸಕ್ತಿಯಿಲ್ಲ. ಆ ರೀತಿಯಲ್ಲಿ ಆಡುವುದಾದರೆ ಅದು ಇನ್ನೊಂದು ಸೈಯದ್ ಮುಷ್ತಾಕ್ ಅಲಿ (ದೇಶೀಯ ಟಿ20) ಟೂರ್ನಿಯಂತಾಗಲಿದೆ. ಸದ್ಯ ಪರಿಸ್ಥಿತಿ ಹದಗೆಡುವುದರಿಂದ ಈ ಸಂಬಂಧ ಬಿಸಿಸಿಐನೊಂದಿಗೆ ಚರ್ಚೆ ನಡೆಸಿಲ್ಲ’ ಎಂದು ಹೇಳಿರುವುದಾಗಿ ತಂಡದ ಮೂಲಗಳು ತಿಳಿಸಿವೆ.</p>.<p>‘ಈ ವರ್ಷದ ಕೊನೆಯಲ್ಲಿ ನಾವು ಐಪಿಎಲ್ ಆಡುವ ವಿಶ್ವಾಸ ಇಟ್ಟುಕೊಳ್ಳೋಣ’ ಎಂದಿರುವುದಾಗಿಯೂ ವರದಿಯಾಗಿದೆ.</p>.<p>ಐಪಿಎಲ್ನಲ್ಲಿ ಸಿಎಸ್ಕೆ ಇದುವರೆಗೆ ಮೂರು ಬಾರಿ ಚಾಂಪಿಯನ್ ಆಗಿದೆ. ನಾಲ್ಕು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬಳಿಕ ಅತ್ಯಂತ ಯಶಸ್ವಿ ತಂಡ ಎನಿಸಿದೆ.</p>.<p>ಒಂದುವೇಳೆ ಈ ಬಾರಿ ಐಪಿಎಲ್ ನಡೆಯದಿದ್ದರೆ, ಕ್ರಿಕೆಟ್ ಆಸ್ಟ್ರೇಲಿಯಾ ರೀತಿಯಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುವ ಭೀತಿಯಲ್ಲಿರುವ ಬಿಸಿಸಿಐ, ಟಿ20 ಟೂರ್ನಿ ಆಯೋಜಿಸಲು ಅತ್ಯಂತ ಉತ್ಸುಕವಾಗಿದೆ.</p>.<p>‘ಈ ಬಾರಿಯ ಐಪಿಎಲ್ ಟೂರ್ನಿ ನಡೆಯದಿದ್ದರೆ ಮಂಡಳಿಗೆ (ಬಿಸಿಸಿಐ) ಸುಮಾರು ₹ 4 ಸಾವಿರ ಕೋಟಿ ನಷ್ಟ ಉಂಟಾಗಲಿದೆ. ಇದು ಮಂಡಳಿಯನ್ನು ದೊಡ್ಡ ಸಂಕಷ್ಟಕ್ಕೆ ದೂಡಲಿದೆ’ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.</p>.<p>ದೇಶದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಿಸಿಸಿಐ ಮತ್ತು ಐಪಿಎಲ್ ಆಡಳಿತಾಧಿಕಾರಿಗಳು ಟೂರ್ನಿ ಆಯೋಜನೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ: </strong>ಕೋವಿಡ್–19 ನಿಂದ ಉಂಟಾಗಿರುವ ಸಂಕಷ್ಟದ ಸನ್ನಿವೇಶವನ್ನು ಗಮನದಲ್ಲಿರಿಸಿ ಮುಂದಿನ ದಿನಗಳಲ್ಲಿ ಐಪಿಎಲ್ ಟೂರ್ನಿಯನ್ನು ಭಾರತದ ಆಟಗಾರರನ್ನು ಮಾತ್ರವೇ ಒಳಗೊಂಡಂತೆ ನಡೆಸಬಹುದು ಎಂದು ರಾಜಸ್ಥಾನ ರಾಯಲ್ಸ್ ಪ್ರಾಂಚೈಸ್ ನೀಡಿರುವ ಸಲಹೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿರಾಕರಿಸಿದೆ.</p>.<p>ಸದ್ಯ ಐಪಿಎಲ್ ಟೂರ್ನಿಯನ್ನು ಕೋವಿಡ್–19 ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆಸ್ಟ್ರೇಲಿಯಾದಲ್ಲಿ ಸೆಪ್ಟೆಂಬರ್–ಅಕ್ಟೋಬರ್ನಲ್ಲಿ ನಡೆಯಬೇಕಿರುವ ಟಿ–20 ವಿಶ್ವಕಪ್ ರದ್ದಾದರೆ, ಅದೇ ವೇಳೆ ಭಾರತದಲ್ಲಿ ಐಪಿಎಲ್ ನಡೆಸಲು ಯೋಜಿಸಲಾಗುತ್ತಿದೆ.</p>.<p>ರಾಜಸ್ಥಾನ ಪ್ರಾಂಚೈಸ್ ಸಲಹೆ ಸಂಬಂಧ ಪ್ರತಿಕ್ರಿಯಿಸಿರುವ ಚೆನ್ನೈ, ‘ಕೇವಲ ಭಾರತೀಯ ಆಟಗಾರರೊಂದಿಗೆ ಐಪಿಎಲ್ ಆಡುವ ವಿಚಾರದಲ್ಲಿ ಸಿಎಸ್ಕೆಗೆ ಆಸಕ್ತಿಯಿಲ್ಲ. ಆ ರೀತಿಯಲ್ಲಿ ಆಡುವುದಾದರೆ ಅದು ಇನ್ನೊಂದು ಸೈಯದ್ ಮುಷ್ತಾಕ್ ಅಲಿ (ದೇಶೀಯ ಟಿ20) ಟೂರ್ನಿಯಂತಾಗಲಿದೆ. ಸದ್ಯ ಪರಿಸ್ಥಿತಿ ಹದಗೆಡುವುದರಿಂದ ಈ ಸಂಬಂಧ ಬಿಸಿಸಿಐನೊಂದಿಗೆ ಚರ್ಚೆ ನಡೆಸಿಲ್ಲ’ ಎಂದು ಹೇಳಿರುವುದಾಗಿ ತಂಡದ ಮೂಲಗಳು ತಿಳಿಸಿವೆ.</p>.<p>‘ಈ ವರ್ಷದ ಕೊನೆಯಲ್ಲಿ ನಾವು ಐಪಿಎಲ್ ಆಡುವ ವಿಶ್ವಾಸ ಇಟ್ಟುಕೊಳ್ಳೋಣ’ ಎಂದಿರುವುದಾಗಿಯೂ ವರದಿಯಾಗಿದೆ.</p>.<p>ಐಪಿಎಲ್ನಲ್ಲಿ ಸಿಎಸ್ಕೆ ಇದುವರೆಗೆ ಮೂರು ಬಾರಿ ಚಾಂಪಿಯನ್ ಆಗಿದೆ. ನಾಲ್ಕು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬಳಿಕ ಅತ್ಯಂತ ಯಶಸ್ವಿ ತಂಡ ಎನಿಸಿದೆ.</p>.<p>ಒಂದುವೇಳೆ ಈ ಬಾರಿ ಐಪಿಎಲ್ ನಡೆಯದಿದ್ದರೆ, ಕ್ರಿಕೆಟ್ ಆಸ್ಟ್ರೇಲಿಯಾ ರೀತಿಯಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುವ ಭೀತಿಯಲ್ಲಿರುವ ಬಿಸಿಸಿಐ, ಟಿ20 ಟೂರ್ನಿ ಆಯೋಜಿಸಲು ಅತ್ಯಂತ ಉತ್ಸುಕವಾಗಿದೆ.</p>.<p>‘ಈ ಬಾರಿಯ ಐಪಿಎಲ್ ಟೂರ್ನಿ ನಡೆಯದಿದ್ದರೆ ಮಂಡಳಿಗೆ (ಬಿಸಿಸಿಐ) ಸುಮಾರು ₹ 4 ಸಾವಿರ ಕೋಟಿ ನಷ್ಟ ಉಂಟಾಗಲಿದೆ. ಇದು ಮಂಡಳಿಯನ್ನು ದೊಡ್ಡ ಸಂಕಷ್ಟಕ್ಕೆ ದೂಡಲಿದೆ’ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.</p>.<p>ದೇಶದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಿಸಿಸಿಐ ಮತ್ತು ಐಪಿಎಲ್ ಆಡಳಿತಾಧಿಕಾರಿಗಳು ಟೂರ್ನಿ ಆಯೋಜನೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>