<p><strong>ಬೆಂಗಳೂರು:</strong> 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಚೊಚ್ಚಲ ಟ್ರೋಫಿಯ ಹುಡುಕಾಟದಲ್ಲಿದೆ. ಈ ಸಂಬಂಧ ಆರ್ಸಿಬಿಯ ಮಾಜಿ ಆಟಗಾರ, ದಕ್ಷಿಣ ಆಫ್ರಿಕಾದ ಮೂಲದ ಎಬಿ ಡಿವಿಲಿಯರ್ಸ್ ಮಹತ್ವದ ಸಲಹೆ ನೀಡಿದ್ದಾರೆ. </p><p>'ವಿರಾಟ್ ಕೊಹ್ಲಿ ಎಂದಿನಂತೆ ಸ್ಮಾರ್ಟ್ ಕ್ರಿಕೆಟ್ ಆಟದತ್ತ ಗಮನ ಕೊಡಬೇಕು. ಆಟದ ಮೇಲೆ ನಿಯಂತ್ರಣ ಸಾಧಿಸುವುದನ್ನು ಮುಂದುವರಿಸಬೇಕು. ಆರ್ಸಿಬಿ ತಂಡದಲ್ಲಿ ಸಾಕಷ್ಟು ಸ್ಫೋಟಕ ದಾಂಡಿಗರಿದ್ದು, ಫಿಲ್ ಸಾಲ್ಟ್, ಕೊಹ್ಲಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನೆರವಾಗಲಿದ್ದಾರೆ' ಎಂದು ಡಿವಿಲಿಯರ್ಸ್ ಹೇಳಿದ್ದಾರೆ. </p><p>ಎಲ್ಲ ಆವೃತ್ತಿಗಳಲ್ಲೂ ಸ್ಥಿರ ಪ್ರದರ್ಶನದ ಹೊರತಾಗಿಯೂ ಕೊಹ್ಲಿ ನಿಧಾನಗತಿಯ ಆಟ ಹಾಗೂ ಕಳಪೆ ಸ್ಟ್ರೈಕ್ರೇಟ್ಗಾಗಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. </p><p>ಆದರೆ ಈ ಬಾರಿ ತಂಡದಲ್ಲಿ ಇಂಗ್ಲೆಂಡ್ನ ಫಿಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್, ಆಸ್ಟ್ರೇಲಿಯಾದ ಟಿಮ್ ಡೇವಿಡ್ ಮತ್ತು ವೆಸ್ಟ್ಇಂಡೀಸ್ನ ರೊಮರಿಯೊ ಶೆಫಾರ್ಡ್ ಇರುವುದರಿಂದ ಕೊಹ್ಲಿ ಹೆಚ್ಚು ನಿರಾಳವಾಗಿ ಆಡಬಹುದು ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. </p><p>'ವಿರಾಟ್ ತಮ್ಮ ಕ್ರಿಕೆಟನ್ನು ಆನಂದಿಸುತ್ತಿದ್ದಾರೆ. ಸ್ಟೈಕ್ರೇಟ್ ಕುರಿತು ಚಿಂತೆ ಮಾಡಬಾರದು. ಅವರು ಸ್ಟ್ರೈಕ್ರೇಟ್ ಹೆಚ್ಚಿಸುವ ಅಗತ್ಯವಿದೆ ಎಂದು ನನಗೆ ಅನಿಸುತ್ತಿಲ್ಲ. ಪರಿಸ್ಥಿತಿಯನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಆಡಲು ವಿರಾಟ್ಗೆ ಚೆನ್ನಾಗಿ ಗೊತ್ತಿದೆ' ಎಂದು ಸ್ನೇಹಿತನ ಕುರಿತು ಡಿವಿಲಿಯರ್ಸ್ ಗುಣಗಾನ ಮಾಡಿದ್ದಾರೆ. </p><p>'ಕೊಹ್ಲಿ ಈ ಟೂರ್ನಿಯಲ್ಲಿ ಆರ್ಸಿಬಿಯ ಬ್ಯಾಟಿಂಗ್ ವಿಭಾಗದ ನಾಯಕರಾಗಿದ್ದಾರೆ. ತಂಡವು ದಿಢೀರ್ ಪತನ ಕಾಣದಂತೆ ನೋಡಿಕೂಳ್ಳಬೇಕಿದೆ ಎಂದು ಎಬಿಡಿ ಹೇಳಿದ್ದಾರೆ. </p>.ಏಕದಿನದಲ್ಲಿ ರೋಹಿತ್ ಶ್ರೇಷ್ಠ ನಾಯಕ, ನಿವೃತ್ತಿಯಾಗಲು ಕಾರಣಗಳಿಲ್ಲ: ಡಿವಿಲಿಯರ್ಸ್.28 ಎಸೆತಗಳಲ್ಲಿ ಶತಕ ಗಳಿಸಿ ಅಬ್ಬರಿಸಿದ ಎಬಿ ಡಿವಿಲಿಯರ್ಸ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಚೊಚ್ಚಲ ಟ್ರೋಫಿಯ ಹುಡುಕಾಟದಲ್ಲಿದೆ. ಈ ಸಂಬಂಧ ಆರ್ಸಿಬಿಯ ಮಾಜಿ ಆಟಗಾರ, ದಕ್ಷಿಣ ಆಫ್ರಿಕಾದ ಮೂಲದ ಎಬಿ ಡಿವಿಲಿಯರ್ಸ್ ಮಹತ್ವದ ಸಲಹೆ ನೀಡಿದ್ದಾರೆ. </p><p>'ವಿರಾಟ್ ಕೊಹ್ಲಿ ಎಂದಿನಂತೆ ಸ್ಮಾರ್ಟ್ ಕ್ರಿಕೆಟ್ ಆಟದತ್ತ ಗಮನ ಕೊಡಬೇಕು. ಆಟದ ಮೇಲೆ ನಿಯಂತ್ರಣ ಸಾಧಿಸುವುದನ್ನು ಮುಂದುವರಿಸಬೇಕು. ಆರ್ಸಿಬಿ ತಂಡದಲ್ಲಿ ಸಾಕಷ್ಟು ಸ್ಫೋಟಕ ದಾಂಡಿಗರಿದ್ದು, ಫಿಲ್ ಸಾಲ್ಟ್, ಕೊಹ್ಲಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನೆರವಾಗಲಿದ್ದಾರೆ' ಎಂದು ಡಿವಿಲಿಯರ್ಸ್ ಹೇಳಿದ್ದಾರೆ. </p><p>ಎಲ್ಲ ಆವೃತ್ತಿಗಳಲ್ಲೂ ಸ್ಥಿರ ಪ್ರದರ್ಶನದ ಹೊರತಾಗಿಯೂ ಕೊಹ್ಲಿ ನಿಧಾನಗತಿಯ ಆಟ ಹಾಗೂ ಕಳಪೆ ಸ್ಟ್ರೈಕ್ರೇಟ್ಗಾಗಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. </p><p>ಆದರೆ ಈ ಬಾರಿ ತಂಡದಲ್ಲಿ ಇಂಗ್ಲೆಂಡ್ನ ಫಿಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್, ಆಸ್ಟ್ರೇಲಿಯಾದ ಟಿಮ್ ಡೇವಿಡ್ ಮತ್ತು ವೆಸ್ಟ್ಇಂಡೀಸ್ನ ರೊಮರಿಯೊ ಶೆಫಾರ್ಡ್ ಇರುವುದರಿಂದ ಕೊಹ್ಲಿ ಹೆಚ್ಚು ನಿರಾಳವಾಗಿ ಆಡಬಹುದು ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. </p><p>'ವಿರಾಟ್ ತಮ್ಮ ಕ್ರಿಕೆಟನ್ನು ಆನಂದಿಸುತ್ತಿದ್ದಾರೆ. ಸ್ಟೈಕ್ರೇಟ್ ಕುರಿತು ಚಿಂತೆ ಮಾಡಬಾರದು. ಅವರು ಸ್ಟ್ರೈಕ್ರೇಟ್ ಹೆಚ್ಚಿಸುವ ಅಗತ್ಯವಿದೆ ಎಂದು ನನಗೆ ಅನಿಸುತ್ತಿಲ್ಲ. ಪರಿಸ್ಥಿತಿಯನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಆಡಲು ವಿರಾಟ್ಗೆ ಚೆನ್ನಾಗಿ ಗೊತ್ತಿದೆ' ಎಂದು ಸ್ನೇಹಿತನ ಕುರಿತು ಡಿವಿಲಿಯರ್ಸ್ ಗುಣಗಾನ ಮಾಡಿದ್ದಾರೆ. </p><p>'ಕೊಹ್ಲಿ ಈ ಟೂರ್ನಿಯಲ್ಲಿ ಆರ್ಸಿಬಿಯ ಬ್ಯಾಟಿಂಗ್ ವಿಭಾಗದ ನಾಯಕರಾಗಿದ್ದಾರೆ. ತಂಡವು ದಿಢೀರ್ ಪತನ ಕಾಣದಂತೆ ನೋಡಿಕೂಳ್ಳಬೇಕಿದೆ ಎಂದು ಎಬಿಡಿ ಹೇಳಿದ್ದಾರೆ. </p>.ಏಕದಿನದಲ್ಲಿ ರೋಹಿತ್ ಶ್ರೇಷ್ಠ ನಾಯಕ, ನಿವೃತ್ತಿಯಾಗಲು ಕಾರಣಗಳಿಲ್ಲ: ಡಿವಿಲಿಯರ್ಸ್.28 ಎಸೆತಗಳಲ್ಲಿ ಶತಕ ಗಳಿಸಿ ಅಬ್ಬರಿಸಿದ ಎಬಿ ಡಿವಿಲಿಯರ್ಸ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>