ರಾಂಚಿ: ಮಹೇಂದ್ರಸಿಂಗ್ ಧೋನಿ ಈಗ ಏನು ಮಾಡಿದರೂ ಸುದ್ದಿ. ಅವರ ಪ್ರತಿಯೊಂದು ಕಾರ್ಯಕ್ಕೂ ಈಗ ಕ್ರಿಕೆಟ್ನಿಂದ ನಿವೃತ್ತಿ ಅಥವಾ ಮರಳುವಿಕೆಯ ವಿಷಯಗಳಿಗೆ ತಳಕು ಹಾಕಲಾಗುತ್ತಿದೆ.
ರಾಂಚಿ ಸಮೀಪದ ದಿಯೊರಾ ಮಾತಾ ಮಂದಿರದಲ್ಲಿ ಸೋಮವಾರ ಪೂಜೆ ಸಲ್ಲಿಸಿದ್ದು ಕೂಡ ಚರ್ಚೆಗೆ ನಾಂದಿ ಹಾಡಿದೆ.
ಅಭಿಮಾನಿ ಬಳಗವೊಂದು ಸಾಮಾಜಿಕ ಜಾಲತಾಣದಲ್ಲಿ ಪೂಜೆಯ ಚಿತ್ರಗಳನ್ನು ಹಾಕಿ, ಐಪಿಎಲ್ ಟೂರ್ನಿಗೆ ಮರಳಲು ಇದು ಮುನ್ನುಡಿ ಎಂದು ಬರೆದುಕೊಂಡಿದೆ. ಕೆಲವರು ಐಪಿಎಲ್ ಮಾತ್ರವಲ್ಲ, ಭಾರತ ತಂಡಕ್ಕೂ ಮರ ಳಲಿದ್ದಾರೆ ಎಂದಿದ್ದಾರೆ.