<p><strong>ಮುಂಬೈ:</strong>ಕೊರೊನಾ ವೈರಸ್ ಭೀತಿಯಿಂದಾಗಿ ವಿದೇಶಿಯರಿಗೆ ವೀಸಾ ನಿರ್ಬಂಧಿರುವುದಿರಂದ, ಐಪಿಎಲ್–2020 ಟೂರ್ನಿಯಲ್ಲಿ ಆಡಲಿರುವ ವಿದೇಶಿ ಆಟಗಾರರು ಏಪ್ರಿಲ್ 15ರ ವರೆಗೆ ಲಭ್ಯರಿರುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದು ಈ ಬಾರಿಯು ಐಪಿಎಲ್ ಟೂರ್ನಿ ಆಯೋಜನೆ ಬಗ್ಗೆಯೇ ಅನುಮಾನಗಳನ್ನು ಮೂಡಿಸಿದೆ.</p>.<p>ಐಪಿಎಲ್–2020 ಟೂರ್ನಿಯು ಮಾರ್ಚ್29ರಿಂದ ಆರಂಭವಾಗಲಿದ್ದು, ಮೇ 17ರವರೆಗೆ ನಡೆಯಲಿದೆ.</p>.<p>‘ಐಪಿಎಲ್ನಲ್ಲಿ ವಿವಿಧ ಪ್ರಾಂಚೈಸ್ ಪರ ಆಡುವ ವಿದೇಶಿ ಆಟಗಾರರು ಬ್ಯುಸಿನೆಸ್ ವೀಸಾ ಕೆಟಗರಿಗೆ ಒಳಪಟ್ಟಿದ್ದಾರೆ. ಸರ್ಕಾರದ ನಿರ್ದೇಶನದಂತೆ ಅವರು ಏಪ್ರಿಲ್ 15ರ ವರೆಗೆ ದೇಶಕ್ಕೆ ಆಗಮಿಸಲು ಸಾಧ್ಯವಿಲ್ಲ’ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ವಿಶ್ವದಾದ್ಯಂತ 4 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಸೋಂಕು, ದೇಶದ ಸುಮಾರು 70ಕ್ಕೂ ಹೆಚ್ಚುಜನರಿಗೆ ತಗುಲಿರುವುದುದೃಢಪಟ್ಟಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಜತಾಂತ್ರಿಕ ಮತ್ತು ಔದ್ಯೋಗಿಕ ಸೇರಿ ಕೆಲವೇಕೆಲವು ವರ್ಗದ ವೀಸಾ ಹೊರತುಪಡಿಸಿ ಉಳಿದೆಲ್ಲವನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.</p>.<p>ಮಾರ್ಚ್ 14ರಂದು (ಶನಿವಾರ) ಮುಂಬೈನಲ್ಲಿಐಪಿಎಲ್ ಆಡಳಿತ ಮಂಡಳಿ ಸಭೆನಡೆಯಲಿದ್ದು, ಅದರಲ್ಲಿ ಟೂರ್ನಿಯಹಣೆಬರಹ ನಿರ್ಧಾರವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong>ಕೊರೊನಾ ವೈರಸ್ ಭೀತಿಯಿಂದಾಗಿ ವಿದೇಶಿಯರಿಗೆ ವೀಸಾ ನಿರ್ಬಂಧಿರುವುದಿರಂದ, ಐಪಿಎಲ್–2020 ಟೂರ್ನಿಯಲ್ಲಿ ಆಡಲಿರುವ ವಿದೇಶಿ ಆಟಗಾರರು ಏಪ್ರಿಲ್ 15ರ ವರೆಗೆ ಲಭ್ಯರಿರುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದು ಈ ಬಾರಿಯು ಐಪಿಎಲ್ ಟೂರ್ನಿ ಆಯೋಜನೆ ಬಗ್ಗೆಯೇ ಅನುಮಾನಗಳನ್ನು ಮೂಡಿಸಿದೆ.</p>.<p>ಐಪಿಎಲ್–2020 ಟೂರ್ನಿಯು ಮಾರ್ಚ್29ರಿಂದ ಆರಂಭವಾಗಲಿದ್ದು, ಮೇ 17ರವರೆಗೆ ನಡೆಯಲಿದೆ.</p>.<p>‘ಐಪಿಎಲ್ನಲ್ಲಿ ವಿವಿಧ ಪ್ರಾಂಚೈಸ್ ಪರ ಆಡುವ ವಿದೇಶಿ ಆಟಗಾರರು ಬ್ಯುಸಿನೆಸ್ ವೀಸಾ ಕೆಟಗರಿಗೆ ಒಳಪಟ್ಟಿದ್ದಾರೆ. ಸರ್ಕಾರದ ನಿರ್ದೇಶನದಂತೆ ಅವರು ಏಪ್ರಿಲ್ 15ರ ವರೆಗೆ ದೇಶಕ್ಕೆ ಆಗಮಿಸಲು ಸಾಧ್ಯವಿಲ್ಲ’ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ವಿಶ್ವದಾದ್ಯಂತ 4 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಸೋಂಕು, ದೇಶದ ಸುಮಾರು 70ಕ್ಕೂ ಹೆಚ್ಚುಜನರಿಗೆ ತಗುಲಿರುವುದುದೃಢಪಟ್ಟಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಜತಾಂತ್ರಿಕ ಮತ್ತು ಔದ್ಯೋಗಿಕ ಸೇರಿ ಕೆಲವೇಕೆಲವು ವರ್ಗದ ವೀಸಾ ಹೊರತುಪಡಿಸಿ ಉಳಿದೆಲ್ಲವನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.</p>.<p>ಮಾರ್ಚ್ 14ರಂದು (ಶನಿವಾರ) ಮುಂಬೈನಲ್ಲಿಐಪಿಎಲ್ ಆಡಳಿತ ಮಂಡಳಿ ಸಭೆನಡೆಯಲಿದ್ದು, ಅದರಲ್ಲಿ ಟೂರ್ನಿಯಹಣೆಬರಹ ನಿರ್ಧಾರವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>