<p><strong>ನವದೆಹಲಿ:</strong> ‘ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಎಲ್ಲಿಯವರೆಗೂ ಆಡುತ್ತೇನೊ ಅಷ್ಟೂ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದಲ್ಲೇ ಇರುತ್ತೇನೆ. ಆರ್ಸಿಬಿ ತೊರೆಯುವ ಆಲೋಚನೆ ನನ್ನಲ್ಲಿ ಒಮ್ಮೆಯೂ ಮೂಡಿಲ್ಲ’ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.</p>.<p>ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಜೊತೆಗೆ ಶುಕ್ರವಾರ ರಾತ್ರಿ ನಡೆದ ಇನ್ಸ್ಟಾಗ್ರಾಮ್ ಸಂವಾದದಲ್ಲಿ ವಿರಾಟ್, ಹಲವು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.</p>.<p>‘2008ರಿಂದಲೂ ತಂಡದೊಂದಿಗೆ ಇದ್ದೇನೆ. ಈ ಪಯಣ ಅಮೋಘವಾದುದು. ಐಪಿಎಲ್ನಲ್ಲಿ ಪ್ರಶಸ್ತಿ ಗೆಲ್ಲುವುದು ನಮ್ಮೆಲ್ಲರ ಕನಸು. ಇದನ್ನು ಬೆನ್ನಟ್ಟಿ ಹೋಗೋಣ. ಆರ್ಸಿಬಿ ಸೋಲಲಿ ಅಥವಾ ಗೆಲ್ಲಲಿ. ಅಭಿಮಾನಿಗಳ ಪ್ರೋತ್ಸಾಹ ಕಿಂಚಿತ್ತೂ ಕಡಿಮೆಯಾಗಿಲ್ಲ. ಅವರ ಪ್ರೀತಿ ಕಂಡು ಮೂಕ ವಿಸ್ಮಿತನಾಗಿದ್ದೇನೆ’ ಎಂದು ಕೊಹ್ಲಿ ಹೇಳಿದ್ದಾರೆ.</p>.<p>ಕೋವಿಡ್ ಬಿಕ್ಕಟ್ಟು ಉಲ್ಬಣಿಸಿರುವ ಕಾರಣ ಐಪಿಎಲ್ 13ನೇ ಆವೃತ್ತಿಯ ಭವಿಷ್ಯ ಡೋಲಾಯಮಾನವಾಗಿದೆ. ಈ ಬಾರಿಯ ಲೀಗ್ ನಡೆಯಲಿದೆ ಎಂದು ವಿರಾಟ್ ಭರವಸೆ ವ್ಯಕ್ತಪಡಿಸಿದ್ದಾರೆ.</p>.<p>‘ಈ ಬಾರಿಯ ಐಪಿಎಲ್ ಯಾವಾಗ ನಡೆಯುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಂತ ಪಂದ್ಯಗಳನ್ನು ಆಡುವ ಆಸೆಯನ್ನು ಕೈಬಿಟ್ಟಿಲ್ಲ’ ಎಂದಿದ್ದಾರೆ.</p>.<p>‘ಗ್ಯಾರಿ ಕರ್ಸ್ಟನ್ ಪ್ರತಿ ಬಾರಿಯೂ ಹೊಸ ಹೊಸ ಕೌಶಲಗಳನ್ನು ಕಲಿಸಿ ನನ್ನ ಆಟದ ಗುಣಮಟ್ಟ ಹೆಚ್ಚಿಸಲು ನೆರವಾಗಿದ್ದಾರೆ. ಶಾರ್ಟ್ ಬಾಲ್ಗಳ ಎದುರು ಹೇಗೆ ಆಡಬೇಕು ಎಂಬುದನ್ನು ಮಾರ್ಕ್ ಬೌಷರ್ ಹೇಳಿಕೊಟ್ಟಿದ್ದಾರೆ. ಡಂಕನ್ ಫ್ಲೆಚರ್ ಸೇರಿದಂತೆ ಅನೇಕರ ಸಲಹೆ ಹಾಗೂ ಮಾರ್ಗದರ್ಶನದಿಂದಲೇ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ’ ಎಂದು ಕೊಹ್ಲಿ, ಎಲ್ಲರ ಸಹಕಾರವನ್ನು ಸ್ಮರಿಸಿದ್ದಾರೆ.</p>.<p>‘ನಾನು ಕೂಡಾ ಬೆಂಗಳೂರಿನ ಅಭಿಮಾನಿಗಳ ಪ್ರೀತಿಗೆ ಮಾರು ಹೋಗಿದ್ದೇನೆ. ಆರ್ಸಿಬಿ ತಂಡವನ್ನು ಬಿಡಲು ನನಗೂ ಮನಸ್ಸಿಲ್ಲ. ಆದರೆ ಅವಕಾಶ ಸಿಕ್ಕಾಗಲೆಲ್ಲಾ ಹೆಚ್ಚು ರನ್ ಗಳಿಸಲು ಪ್ರಯತ್ನಿಸಬೇಕು’ ಎಂದು ಡಿವಿಲಿಯರ್ಸ್ ನುಡಿದಿದ್ದಾರೆ.</p>.<p>ದಕ್ಷಿಣ ಆಫ್ರಿಕಾದ ಎಬಿಡಿ, ಹಿಂದಿನ ಒಂಬತ್ತು ವರ್ಷಗಳಿಂದ ಬೆಂಗಳೂರಿನ ತಂಡದ ಪರ ಆಡುತ್ತಿದ್ದಾರೆ.</p>.<p>‘2015ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತದ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಐದನೇ ಪಂದ್ಯದಲ್ಲಿ 61 ಎಸೆತಗಳಲ್ಲಿ 119ರನ್ಗಳನ್ನು ಗಳಿಸಿದ್ದೆ. ಆ ಪಂದ್ಯವನ್ನು ಜಯಿಸಿ ನಾವು (ದಕ್ಷಿಣ ಆಫ್ರಿಕಾ ತಂಡ) 3–2ರಿಂದ ಸರಣಿ ಕೈವಶ ಮಾಡಿಕೊಂಡಿದ್ದೆವು. ಹೀಗಾಗಿ ಆ ಇನಿಂಗ್ಸ್ ನನ್ನ ಪಾಲಿಗೆ ಸ್ಮರಣೀಯವಾದುದು’ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.</p>.<p>ಕೊಹ್ಲಿ ಮತ್ತು ಎಬಿಡಿ,ಭಾರತ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರನ್ನು ಒಳಗೊಂಡ ಏಕದಿನ ತಂಡವನ್ನು ಆಯ್ಕೆ ಮಾಡಿದ್ದಾರೆ.</p>.<p><strong>ತಂಡ ಇಂತಿದೆ:</strong> ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಜಾಕ್ ಕಾಲಿಸ್, ಮಹೇಂದ್ರ ಸಿಂಗ್ ಧೋನಿ (ನಾಯಕ), ಯುವರಾಜ್ ಸಿಂಗ್, ಯಜುವೇಂದ್ರ ಚಾಹಲ್, ಡೇಲ್ ಸ್ಟೇಯ್ನ್, ಜಸ್ಪ್ರೀತ್ ಬೂಮ್ರಾ ಹಾಗೂ ಕಗಿಸೊ ರಬಾಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಎಲ್ಲಿಯವರೆಗೂ ಆಡುತ್ತೇನೊ ಅಷ್ಟೂ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದಲ್ಲೇ ಇರುತ್ತೇನೆ. ಆರ್ಸಿಬಿ ತೊರೆಯುವ ಆಲೋಚನೆ ನನ್ನಲ್ಲಿ ಒಮ್ಮೆಯೂ ಮೂಡಿಲ್ಲ’ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.</p>.<p>ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಜೊತೆಗೆ ಶುಕ್ರವಾರ ರಾತ್ರಿ ನಡೆದ ಇನ್ಸ್ಟಾಗ್ರಾಮ್ ಸಂವಾದದಲ್ಲಿ ವಿರಾಟ್, ಹಲವು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.</p>.<p>‘2008ರಿಂದಲೂ ತಂಡದೊಂದಿಗೆ ಇದ್ದೇನೆ. ಈ ಪಯಣ ಅಮೋಘವಾದುದು. ಐಪಿಎಲ್ನಲ್ಲಿ ಪ್ರಶಸ್ತಿ ಗೆಲ್ಲುವುದು ನಮ್ಮೆಲ್ಲರ ಕನಸು. ಇದನ್ನು ಬೆನ್ನಟ್ಟಿ ಹೋಗೋಣ. ಆರ್ಸಿಬಿ ಸೋಲಲಿ ಅಥವಾ ಗೆಲ್ಲಲಿ. ಅಭಿಮಾನಿಗಳ ಪ್ರೋತ್ಸಾಹ ಕಿಂಚಿತ್ತೂ ಕಡಿಮೆಯಾಗಿಲ್ಲ. ಅವರ ಪ್ರೀತಿ ಕಂಡು ಮೂಕ ವಿಸ್ಮಿತನಾಗಿದ್ದೇನೆ’ ಎಂದು ಕೊಹ್ಲಿ ಹೇಳಿದ್ದಾರೆ.</p>.<p>ಕೋವಿಡ್ ಬಿಕ್ಕಟ್ಟು ಉಲ್ಬಣಿಸಿರುವ ಕಾರಣ ಐಪಿಎಲ್ 13ನೇ ಆವೃತ್ತಿಯ ಭವಿಷ್ಯ ಡೋಲಾಯಮಾನವಾಗಿದೆ. ಈ ಬಾರಿಯ ಲೀಗ್ ನಡೆಯಲಿದೆ ಎಂದು ವಿರಾಟ್ ಭರವಸೆ ವ್ಯಕ್ತಪಡಿಸಿದ್ದಾರೆ.</p>.<p>‘ಈ ಬಾರಿಯ ಐಪಿಎಲ್ ಯಾವಾಗ ನಡೆಯುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಂತ ಪಂದ್ಯಗಳನ್ನು ಆಡುವ ಆಸೆಯನ್ನು ಕೈಬಿಟ್ಟಿಲ್ಲ’ ಎಂದಿದ್ದಾರೆ.</p>.<p>‘ಗ್ಯಾರಿ ಕರ್ಸ್ಟನ್ ಪ್ರತಿ ಬಾರಿಯೂ ಹೊಸ ಹೊಸ ಕೌಶಲಗಳನ್ನು ಕಲಿಸಿ ನನ್ನ ಆಟದ ಗುಣಮಟ್ಟ ಹೆಚ್ಚಿಸಲು ನೆರವಾಗಿದ್ದಾರೆ. ಶಾರ್ಟ್ ಬಾಲ್ಗಳ ಎದುರು ಹೇಗೆ ಆಡಬೇಕು ಎಂಬುದನ್ನು ಮಾರ್ಕ್ ಬೌಷರ್ ಹೇಳಿಕೊಟ್ಟಿದ್ದಾರೆ. ಡಂಕನ್ ಫ್ಲೆಚರ್ ಸೇರಿದಂತೆ ಅನೇಕರ ಸಲಹೆ ಹಾಗೂ ಮಾರ್ಗದರ್ಶನದಿಂದಲೇ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ’ ಎಂದು ಕೊಹ್ಲಿ, ಎಲ್ಲರ ಸಹಕಾರವನ್ನು ಸ್ಮರಿಸಿದ್ದಾರೆ.</p>.<p>‘ನಾನು ಕೂಡಾ ಬೆಂಗಳೂರಿನ ಅಭಿಮಾನಿಗಳ ಪ್ರೀತಿಗೆ ಮಾರು ಹೋಗಿದ್ದೇನೆ. ಆರ್ಸಿಬಿ ತಂಡವನ್ನು ಬಿಡಲು ನನಗೂ ಮನಸ್ಸಿಲ್ಲ. ಆದರೆ ಅವಕಾಶ ಸಿಕ್ಕಾಗಲೆಲ್ಲಾ ಹೆಚ್ಚು ರನ್ ಗಳಿಸಲು ಪ್ರಯತ್ನಿಸಬೇಕು’ ಎಂದು ಡಿವಿಲಿಯರ್ಸ್ ನುಡಿದಿದ್ದಾರೆ.</p>.<p>ದಕ್ಷಿಣ ಆಫ್ರಿಕಾದ ಎಬಿಡಿ, ಹಿಂದಿನ ಒಂಬತ್ತು ವರ್ಷಗಳಿಂದ ಬೆಂಗಳೂರಿನ ತಂಡದ ಪರ ಆಡುತ್ತಿದ್ದಾರೆ.</p>.<p>‘2015ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತದ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಐದನೇ ಪಂದ್ಯದಲ್ಲಿ 61 ಎಸೆತಗಳಲ್ಲಿ 119ರನ್ಗಳನ್ನು ಗಳಿಸಿದ್ದೆ. ಆ ಪಂದ್ಯವನ್ನು ಜಯಿಸಿ ನಾವು (ದಕ್ಷಿಣ ಆಫ್ರಿಕಾ ತಂಡ) 3–2ರಿಂದ ಸರಣಿ ಕೈವಶ ಮಾಡಿಕೊಂಡಿದ್ದೆವು. ಹೀಗಾಗಿ ಆ ಇನಿಂಗ್ಸ್ ನನ್ನ ಪಾಲಿಗೆ ಸ್ಮರಣೀಯವಾದುದು’ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.</p>.<p>ಕೊಹ್ಲಿ ಮತ್ತು ಎಬಿಡಿ,ಭಾರತ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರನ್ನು ಒಳಗೊಂಡ ಏಕದಿನ ತಂಡವನ್ನು ಆಯ್ಕೆ ಮಾಡಿದ್ದಾರೆ.</p>.<p><strong>ತಂಡ ಇಂತಿದೆ:</strong> ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಜಾಕ್ ಕಾಲಿಸ್, ಮಹೇಂದ್ರ ಸಿಂಗ್ ಧೋನಿ (ನಾಯಕ), ಯುವರಾಜ್ ಸಿಂಗ್, ಯಜುವೇಂದ್ರ ಚಾಹಲ್, ಡೇಲ್ ಸ್ಟೇಯ್ನ್, ಜಸ್ಪ್ರೀತ್ ಬೂಮ್ರಾ ಹಾಗೂ ಕಗಿಸೊ ರಬಾಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>