<p><strong>ವಿಶಾಖಪಟ್ಟಣಂ</strong>: ಏಕದಿನ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸ್ಥಾನವನ್ನು ಪ್ರಶ್ನೆ ಮಾಡುವುದರ ಬಗ್ಗೆ ಟೀಂ ಇಂಡಿಯಾದ ಮಾಜಿ ಕೋಚ್ ಸಂಜಯ್ ಬಂಗಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p><p>ಕೊಹ್ಲಿ ಮತ್ತು ರೋಹಿತ್, ಶನಿವಾರವಷ್ಟೇ (ಡಿ.6) ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಆಟವಾಡಿದ್ದರು. ಅದರ ಬೆನ್ನಲ್ಲೇ, ಏಕದಿನ ತಂಡದಲ್ಲಿ 'ರೋ–ಕೊ' ಸ್ಥಾನವನ್ನು ಯಾರೂ ಪ್ರಶ್ನಿಸಬಾರದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p><p>ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ 2027ರ ಏಕದಿನ ವಿಶ್ವಕಪ್ ನಡೆಯಲಿದೆ. ಹಾಗಾಗಿ, ಪ್ರಸ್ತುತ ಸರಣಿಯು ರೋ–ಕೊ ಪಾಲಿಗೆ ಮಹತ್ವದ್ದಾಗಿತ್ತು. ಅದರಲ್ಲಿ ಅವರಿಬ್ಬರೂ ಪಾಸ್ ಆಗಿದ್ದಾರೆ.</p>.ನೂರು 'ನೂರು': ಸಚಿನ್ ದಾಖಲೆ ಮುರಿಯುವರೇ ಕೊಹ್ಲಿ: ಗವಾಸ್ಕರ್ ಹೇಳಿದ್ದಿಷ್ಟು....IND vs SA| ಜೈಸ್ವಾಲ್ ಶತಕ; ವಿರಾಟ್, ರೋಹಿತ್ ಅಬ್ಬರ: ಸರಣಿ ಗೆದ್ದ ಭಾರತ.<p>'JioStar' ಕಾರ್ಯಕ್ರಮದಲ್ಲಿ ಮಾತನಾಡಿರುವ ಸಂಜಯ್, 'ಕೊಹ್ಲಿ ಮತ್ತು ರೋಹಿತ್ ಅವರ ಸ್ಥಾನವನ್ನು ಯಾರೊಬ್ಬರೂ ಪ್ರಶ್ನಿಸಬಾರದು' ಎಂದು ಒತ್ತಿ ಹೇಳಿದ್ದಾರೆ. ಹಾಗೆಯೇ, 'ಅವರಿಬ್ಬರೂ, ಇಷ್ಟು ವರ್ಷಗಳ ಕಾಲ ಏನು ಮಾಡಿದ್ದಾರೆ ಎಂಬುದನ್ನು ನೋಡಿ' ಎಂದು ಸಲಹೆ ನೀಡಿದ್ದಾರೆ.</p><p>ರೋ–ಕೊ ಎರಡು ಮಾದರಿಗೆ ವಿದಾಯ ಹೇಳಿದ್ದಾರೆ. ಹಾಗಾಗಿ, ಆಟಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಅದಕ್ಕಾಗಿ ಅವರು ಅನನುಭವಿ ಆಟಗಾರರಂತೆ ಹೆಚ್ಚೆಚ್ಚು ಪಂದ್ಯ ಆಡುವ ಅಗ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.</p><p>ಒಂದು ಸಲ ರೋ–ಕೊ ಆಟಕ್ಕೆ ಕುದುರಿಕೊಂಡರೆ, ರನ್ ಗಳಿಸುವ ಹಸಿವು ಶುರುವಾದರೆ, ವ್ಯತ್ಯಾಸ ನಿಮಗೇ ಕಾಣುತ್ತದೆ. ಅವರಿಬ್ಬರ ಉಪಸ್ಥಿತಿಯು ಡ್ರೆಸ್ಸಿಂಗ್ ರೂಂನ ವಾತಾವರಣವನ್ನೇ ಬದಲಿಸುತ್ತದೆ ಎಂದು ಬಂಗಾರ್ ಹೇಳಿದ್ದಾರೆ.</p><p>ಟೆಸ್ಟ್ ಮತ್ತು ಟಿ20 ಮಾದರಿಗೆ ವಿದಾಯ ಹೇಳಿರುವ ವಿರಾಟ್ ಹಾಗೂ ರೋಹಿತ್, ಟೀಂ ಇಂಡಿಯಾ ಇತ್ತೀಚೆಗೆ ಆಡಿದ ಎರಡು ಏಕದಿನ ಸರಣಿಗಳಲ್ಲಿ 'ಶ್ರೇಷ್ಠ' ಆಟಗಾರರಾಗಿ ಹೊರಹೊಮ್ಮಿದ್ದಾರೆ.</p><p>ದಕ್ಷಿಣ ಆಫ್ರಿಕಾ ಎದುರು ಮೂರು ಪಂದ್ಯಗಳಲ್ಲಿ ಎರಡು ಶತಕ, ಒಂದು ಅರ್ಧಶತಕ ಸಹಿತ 302 ರನ್ ಸಿಡಿಸಿದ್ದ ಕೊಹ್ಲಿ, 'ಸರಣಿ ಶ್ರೇಷ್ಠ' ಎನಿಸಿದ್ದಾರೆ.</p><p>ಅದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್ಗೆ ಆ ಪ್ರಶಸ್ತಿ ಒಲಿದಿತ್ತು. ಅವರು, ಮೂರು ಪಂದ್ಯಗಳಲ್ಲಿ ತಲಾ ಒಂದು ಶತಕ ಹಾಗೂ ಅರ್ಧಶತಕ ಸಹಿತ 202 ರನ್ ಬಾರಿಸಿದ್ದರು.</p>.ಮದುವೆ ಕುರಿತ ವದಂತಿಗಳ ಬಗ್ಗೆ ಮೌನ ಮುರಿದ ಸ್ಮೃತಿ ಮಂದಾನ.. ಎಲ್ಲರಿಗೂ ಸಂದೇಶ.ಮದುವೆ ರದ್ದಾಗುತ್ತಿದ್ದಂತೆ ಪರಸ್ಪರ 'ಅನ್ಫಾಲೋ' ಮಾಡಿಕೊಂಡ ಸ್ಮೃತಿ, ಪಲಾಶ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶಾಖಪಟ್ಟಣಂ</strong>: ಏಕದಿನ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸ್ಥಾನವನ್ನು ಪ್ರಶ್ನೆ ಮಾಡುವುದರ ಬಗ್ಗೆ ಟೀಂ ಇಂಡಿಯಾದ ಮಾಜಿ ಕೋಚ್ ಸಂಜಯ್ ಬಂಗಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p><p>ಕೊಹ್ಲಿ ಮತ್ತು ರೋಹಿತ್, ಶನಿವಾರವಷ್ಟೇ (ಡಿ.6) ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಆಟವಾಡಿದ್ದರು. ಅದರ ಬೆನ್ನಲ್ಲೇ, ಏಕದಿನ ತಂಡದಲ್ಲಿ 'ರೋ–ಕೊ' ಸ್ಥಾನವನ್ನು ಯಾರೂ ಪ್ರಶ್ನಿಸಬಾರದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p><p>ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ 2027ರ ಏಕದಿನ ವಿಶ್ವಕಪ್ ನಡೆಯಲಿದೆ. ಹಾಗಾಗಿ, ಪ್ರಸ್ತುತ ಸರಣಿಯು ರೋ–ಕೊ ಪಾಲಿಗೆ ಮಹತ್ವದ್ದಾಗಿತ್ತು. ಅದರಲ್ಲಿ ಅವರಿಬ್ಬರೂ ಪಾಸ್ ಆಗಿದ್ದಾರೆ.</p>.ನೂರು 'ನೂರು': ಸಚಿನ್ ದಾಖಲೆ ಮುರಿಯುವರೇ ಕೊಹ್ಲಿ: ಗವಾಸ್ಕರ್ ಹೇಳಿದ್ದಿಷ್ಟು....IND vs SA| ಜೈಸ್ವಾಲ್ ಶತಕ; ವಿರಾಟ್, ರೋಹಿತ್ ಅಬ್ಬರ: ಸರಣಿ ಗೆದ್ದ ಭಾರತ.<p>'JioStar' ಕಾರ್ಯಕ್ರಮದಲ್ಲಿ ಮಾತನಾಡಿರುವ ಸಂಜಯ್, 'ಕೊಹ್ಲಿ ಮತ್ತು ರೋಹಿತ್ ಅವರ ಸ್ಥಾನವನ್ನು ಯಾರೊಬ್ಬರೂ ಪ್ರಶ್ನಿಸಬಾರದು' ಎಂದು ಒತ್ತಿ ಹೇಳಿದ್ದಾರೆ. ಹಾಗೆಯೇ, 'ಅವರಿಬ್ಬರೂ, ಇಷ್ಟು ವರ್ಷಗಳ ಕಾಲ ಏನು ಮಾಡಿದ್ದಾರೆ ಎಂಬುದನ್ನು ನೋಡಿ' ಎಂದು ಸಲಹೆ ನೀಡಿದ್ದಾರೆ.</p><p>ರೋ–ಕೊ ಎರಡು ಮಾದರಿಗೆ ವಿದಾಯ ಹೇಳಿದ್ದಾರೆ. ಹಾಗಾಗಿ, ಆಟಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಅದಕ್ಕಾಗಿ ಅವರು ಅನನುಭವಿ ಆಟಗಾರರಂತೆ ಹೆಚ್ಚೆಚ್ಚು ಪಂದ್ಯ ಆಡುವ ಅಗ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.</p><p>ಒಂದು ಸಲ ರೋ–ಕೊ ಆಟಕ್ಕೆ ಕುದುರಿಕೊಂಡರೆ, ರನ್ ಗಳಿಸುವ ಹಸಿವು ಶುರುವಾದರೆ, ವ್ಯತ್ಯಾಸ ನಿಮಗೇ ಕಾಣುತ್ತದೆ. ಅವರಿಬ್ಬರ ಉಪಸ್ಥಿತಿಯು ಡ್ರೆಸ್ಸಿಂಗ್ ರೂಂನ ವಾತಾವರಣವನ್ನೇ ಬದಲಿಸುತ್ತದೆ ಎಂದು ಬಂಗಾರ್ ಹೇಳಿದ್ದಾರೆ.</p><p>ಟೆಸ್ಟ್ ಮತ್ತು ಟಿ20 ಮಾದರಿಗೆ ವಿದಾಯ ಹೇಳಿರುವ ವಿರಾಟ್ ಹಾಗೂ ರೋಹಿತ್, ಟೀಂ ಇಂಡಿಯಾ ಇತ್ತೀಚೆಗೆ ಆಡಿದ ಎರಡು ಏಕದಿನ ಸರಣಿಗಳಲ್ಲಿ 'ಶ್ರೇಷ್ಠ' ಆಟಗಾರರಾಗಿ ಹೊರಹೊಮ್ಮಿದ್ದಾರೆ.</p><p>ದಕ್ಷಿಣ ಆಫ್ರಿಕಾ ಎದುರು ಮೂರು ಪಂದ್ಯಗಳಲ್ಲಿ ಎರಡು ಶತಕ, ಒಂದು ಅರ್ಧಶತಕ ಸಹಿತ 302 ರನ್ ಸಿಡಿಸಿದ್ದ ಕೊಹ್ಲಿ, 'ಸರಣಿ ಶ್ರೇಷ್ಠ' ಎನಿಸಿದ್ದಾರೆ.</p><p>ಅದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್ಗೆ ಆ ಪ್ರಶಸ್ತಿ ಒಲಿದಿತ್ತು. ಅವರು, ಮೂರು ಪಂದ್ಯಗಳಲ್ಲಿ ತಲಾ ಒಂದು ಶತಕ ಹಾಗೂ ಅರ್ಧಶತಕ ಸಹಿತ 202 ರನ್ ಬಾರಿಸಿದ್ದರು.</p>.ಮದುವೆ ಕುರಿತ ವದಂತಿಗಳ ಬಗ್ಗೆ ಮೌನ ಮುರಿದ ಸ್ಮೃತಿ ಮಂದಾನ.. ಎಲ್ಲರಿಗೂ ಸಂದೇಶ.ಮದುವೆ ರದ್ದಾಗುತ್ತಿದ್ದಂತೆ ಪರಸ್ಪರ 'ಅನ್ಫಾಲೋ' ಮಾಡಿಕೊಂಡ ಸ್ಮೃತಿ, ಪಲಾಶ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>