ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಂಗ್ಲಾ ತಂಡವನ್ನು ದೇವರೇ ಕಾಪಾಡಿದ’

Last Updated 15 ಮಾರ್ಚ್ 2019, 20:25 IST
ಅಕ್ಷರ ಗಾತ್ರ

ಕ್ರೈಸ್ಟ್ ಚರ್ಚ್‌: ಭಯೋತ್ಪಾದಕರ ದಾಳಿಯಿಂದ ಸ್ವಲ್ಪದರಲ್ಲೇ ಬಚಾವಾದ ಬಾಂಗ್ಲಾದೇಶ ಕ್ರಿಕೆಟ್ ತಂಡದೊಂದಿಗೆ ಬೌಲಿಂಗ್ ಕೋಚ್‌, ಕರ್ನಾಟಕದ ಸುನಿಲ್ ಜೋಶಿ ಕೂಡ ಇದ್ದರು. ಘಟನೆಯ ಬಗ್ಗೆ ಮಾತನಾಡಿದ ಅವರು ‘ಅದೊಂದು ಘೋರ ಕೃತ್ಯ. ಇದರಿಂದ ನಮ್ಮ ತಂಡವನ್ನು ದೇವರೇ ಬಚಾವ್ ಮಾಡಿದ, ದೇವರು ದೊಡ್ಡವ’ ಎಂದರು.

ದಾಳಿ ವೇಳೆ ಸುನಿಲ್‌ ಜೋಶಿ ಅವರು ತಂಡ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿದ್ದರು. ನಾಲ್ಕನೇ ಟೆಸ್ಟ್ ನಡೆಯಲಿದ್ದ ಹೆಗ್ಲಿ ಓವಲ್ ಕ್ರೀಡಾಂಗಣಕ್ಕೆ ತೆರಳಲು ಸಜ್ಜಾಗುತ್ತಿದ್ದರು.

‘ಘಟನೆ ನಡೆದ ಮಸೀದಿ ಕ್ರೀಡಾಂಗಣಕ್ಕೆ ಹತ್ತಿರದಲ್ಲೇ ಇದೆ. ಇದೇ ಮಸೀದಿಗೆ ತಂಡದ ಆಟಗಾರರು ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ತೆರಳಬೇಕಿತ್ತು. ಆಟಗಾರರು ದೇವರ ಕೃಪೆಯಿಂದ ಬಚಾವಾಗಿದ್ದಾರೆ’ ಎಂದು ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT