ತೋಳ ಬಂತು ತೋಳ ಎಂಬ ಅಪಪ್ರಚಾರವನ್ನು ಬಿಜೆಪಿ ಮಾಡುತ್ತಿಲ್ಲ. ಬೆಳಗಾವಿ ಜಾರಕೊಹೊಳಿ ಗುಂಪಿನ ತೋಳಗಳು, ಚಿಕ್ಕಬಳ್ಳಾಪುರದ ಸುಧಾಕರ ಗುಂಪಿನ ತೋಳಗಳು ಈಗಾಗಲೇ ಗುಹೆಯಿಂದ ಹೊರಬರುತ್ತಿವೆ. ಅವರಾಗಿ ಅವರೇ ಕಚ್ಚಾಡಿ ಸರ್ಕಾರ ಬೀಳಲಿದೆ. ಸರ್ಕಾರ ಬಿದ್ದರೆ ಬಿಜೆಪಿಯು ಕೆಲವರ ಬೆಂಬಲ ಪಡೆದು ಸರ್ಕಾರ ರಚಿಸಲಿದೆ ಎಂದು ಅವರು ತಿಳಿಸಿದರು.