ಕೆಲವರಿಗೆ ಮಧ್ಯಾನ್ಹದಲ್ಲಿ ಕಿರು ನಿದ್ರೆ ಮಾಡುವ ಅಭ್ಯಾಸವಿರುತ್ತದೆ. ಈ ನಿಯಮದಿಂದ ಅಂತವರಿಗೆ ತೊಂದರೆ ಆಗುವುದಿಲ್ಲವೇ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರನ್ನು ಕೇಳಿದಾಗ, 'ಮಧ್ಯಾನ್ಹದ ಊಟ ಮತ್ತು ಕಿರುನಿದ್ರೆಗೆ ಎರಡು ಗಂಟೆ ತೆಗೆದುಕೊಳ್ಳಬಹುದು. ನಾವಿಂದು ಕಟ್ಟಿನಿಟ್ಟಿನ ನಿಯಮ ಪಾಲನೆ ಮಾಡಬೇಕಾದ ಪರಿಸ್ಥಿತಿ ಇದೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಲೇಬೇಕು' ಎಂದು ತಿಳಿಸಿದರು.