ಒಟ್ಟು 12 ನಿರ್ದೇಶಕ ಸ್ಥಾನದಲ್ಲಿ 8 ಜೆಡಿಎಸ್, 3 ಕಾಂಗ್ರೆಸ್, 1 ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದರು. ಜೆಡಿಎಸ್ಗೆ ಸರಳ ಬಹುಮತ ಇತ್ತು. ಆದರೆ ಅಧ್ಯಕ್ಷರಾಗುವ ಆಸೆಗೆ ಜೆಡಿಎಸ್ ಬೆಂಬಲಿತ ಎಸ್.ಪಿ.ಸ್ವಾಮಿ ಬಿಜೆಪಿ ಸೇರಿದ್ದರು. ಜೊತೆಗೆ ಬೈಲಾ ಉಲ್ಲಂಘನೆ ಆರೋಪದ ಮೇಲೆ ಇಬ್ಬರು ಜೆಡಿಎಸ್ ಬೆಂಬಲಿತರನ್ನು ಅನರ್ಹಗೊಳಿಸಲಾಗಿತ್ತು. ಆದರೆ ಹೈಕೋರ್ಟ್ನಲ್ಲಿ ಅವರಿಗ ಮತ ಚಲಾವಣೆ ಅವಕಾಶ ನೀಡಿತ್ತು. ಸ್ವಾಮಿ ಬಿಜೆಪಿ ಸೇರ್ಪಡೆಯೊಂದಿಗೆ ಜೆಡಿಎಸ್ ಬೆಂಬಲಿತರ ಸಂಖ್ಯೆ 7ಕ್ಕೆ ಕುಸಿದಿತ್ತು.