ಎಂಡೋಸಲ್ಫಾನ್ ದುರಂತದಿಂದ ಎಚ್ಚೆತ್ತು ಸಾವಯವ ಕೃಷಿ ಬಗ್ಗೆ ಒಲವು ಬೆಳೆಸಿಕೊಂಡ ರಾಮನಗರದ ಸುರೇಂದ್ರ ಒಂದು ದಶಕದಿಂದ ರಾಸಾಯನಿಕ ಮುಕ್ತ ಬೇಸಾಯ ಮಾಡುತ್ತ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಲಕ್ಷಗಟ್ಟಲೇ ಆದಾಯವನ್ನೂ ಪಡೆಯುತ್ತಿದ್ದಾರೆ. ಸುತ್ತಲಿನ ಜನರನ್ನೂ ಸಾವಯವ ಕೃಷಿಯತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.