<p>ಭಾರತೀಯರಲ್ಲಿ ಸರ್ಪಗಳಿಗೆ ಪೂಜಾನೀಯ ಸ್ಥಾನ ನೀಡಲಾಗಿದೆ. ಸರ್ಪಗಳ ಕುರಿತು ನಮ್ಮ ಪುರಾಣದಲ್ಲಿ ಹಲವಾರು ಕಥೆಗಳಿವೆ. ಸರ್ಪಗಳು ದೇವರಿಗೆ ಸಮ ಎಂಬ ನಂಬಿಕೆ ಇದೆ. ಜಾತಕಾನುಸಾರವಾಗಿ ಸರ್ಪ ದೋಷವಿದ್ದರೆ, ಅವುಗಳನ್ನು ಪೂಜಿಸುವುದರ ಮೂಲಕ ಪರಿಹಾರ ಮಾಡಿಕೊಳ್ಳಬಹುದು. </p><p>ಮಾತ್ರವಲ್ಲ ಸರ್ಪದೋಷ ಪರಿಹಾರದಿಂದ ವಿವಾಹ, ಸಂತಾನ, ದಾಂಪತ್ಯ ಸುಖ ಹಾಗೂ ಉದ್ಯೋಗಗಳು ದೊರೆತಯುತ್ತವೆ ಎಂಬ ನಂಬಿಕೆ ಇದೆ. ಹಾಗಾಗಿ ನೂರಾರು ಸರ್ಪಗಳ ದೇವಾಲಯಗಳಿವೆ. ಅವುಗಳ ಪೈಕಿ ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಭೇಟಿ ನೀಡಲು ಅವಕಾಶವಿರು ನಾಗ ದೇವಸ್ಥಾನದ ಬಗ್ಗೆ ತಿಳಿಯೋಣ. </p>.ಆಂಧ್ರಪ್ರದೇಶದ ಪ್ರಸಿದ್ಧ ವಿಷ್ಣು ದೇವಾಲಯಗಳು: ಇವುಗಳ ಇತಿಹಾಸ ತಿಳಿಯಿರಿ.ಮೈಸೂರಿಗೆ ಹೋದವರು ಅರಮನೆ ಮಾತ್ರವಲ್ಲ, ಈ ಧಾರ್ಮಿಕ ತಾಣಗಳಿಗೂ ಭೇಟಿ ಕೊಡಿ.<h2><strong>ಮಹಾಕಾಳೇಶ್ವರ ದೇವಸ್ಥಾನ</strong></h2>.<p>ಮಧ್ಯಪ್ರದೇಶದಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದ 2ನೇ ಮಹಡಿಯಲ್ಲಿರುವ ಶ್ರೀ ನಾಗಚಂದ್ರೇಶ್ವರ ದೇವಸ್ಥಾನದ ಬಾಗಿಲುಗಳು ವರ್ಷಕ್ಕೊಮ್ಮೆ ತೆರೆಯಲಾಗುತ್ತದೆ. ಅಂದರೆ ನಾಗರ ಪಂಚಮಿ ಹಬ್ಬದಂದು ತೆರೆಯಲಾಗುತ್ತದೆ. ಈ ದೇವಸ್ಥಾನ ಉಜ್ಜಯಿನಿಯ ಪ್ರಸಿದ್ಧ ದೇವಾಲಯಗಳ ಪೈಕಿ ಒಂದಾಗಿದೆ. </p><p>ವರ್ಷವೆಲ್ಲ ಬಾಗಿಲು ಹಾಕಿರುವ ಈ ದೇವಾಲಯ ನಾಗಪಂಚಮಿಯಂದು ಮಾತ್ರ ತೆರೆಯಲ್ಪಡುತ್ತದೆ. ಈ ದಿನ ಇಲ್ಲಿಗೆ ಭಕ್ತರು ನಾಗದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಅದರಲ್ಲಿಯೂ ನಾಗರಪಂಚಮಿಯಂದು ಮಧ್ಯರಾತ್ರಿ 12ಗಂಟೆಯಿಂದಲೇ ಭಕ್ತರು ಇಲ್ಲಿಗೆ ಬರಲಾರಂಭಿಸುತ್ತಾರೆ. </p><p><strong>ಅಪರೂಪದ ವಿಗ್ರಹ:</strong> </p><p>ಬೇರೆಲ್ಲೂ ಕಾಣದ ವಿಭಿನ್ನವಾದ ಶಿವ ಹಾಗೂ ಪಾರ್ವತಿಯ ಮೂರ್ತಿ ಕೂಡ ಇಲ್ಲಿದೆ. ಈ ವಿಗ್ರಹದಲ್ಲಿ ವಿಶೇಷವಾಗಿ 10 ಹೆಡೆಯ ಶೇಷನಾನಿಂದ ಸುತ್ತುವರೆದಿದೆ. ಅದರ ಮೇಲೆ ಶಿವ ಮತ್ತು ಪಾರ್ವತಿ ಆಸೀನರಾಗಿದ್ದಾರೆ. ಈ ರೀತಿಯ ಶಿವನ ವಿಗ್ರಹ ಈವರೆಗೆ ಬೇರೆಲ್ಲೂ ಪತ್ತೆಯಾಗಿಲ್ಲ. </p><p><strong>ದೇವಾಲಯದ ಇತಿಹಾಸ </strong></p><p>ಈ ದೇವಾಲಯವನ್ನು 11ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಪರಮಾರ ರಾಜವಂಶದ ರಾಜನಾಗಿದ್ದ ಭೋಜನು ಈ ದೇವಾಲಯವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ಇಲ್ಲಿ ಪ್ರತಿಸ್ಠಾಪಿಸಲಾದ ಈ ವಿಗ್ರಹವನ್ನು ನೇಪಾಳದಿಂದ ತರಲಾಯಿತು ಎಂಬ ಹತ್ತಾರು ಕಥೆಗಳು ಚಾಲ್ತಿಯಲ್ಲಿವೆ. ಕಾಲಾನಂತರದಲ್ಲಿ ಈ ದೇವಾಲಯವನ್ನು 1732ರಲ್ಲಿ ಸಿಂಧಿಯಾ ಕುಟುಂಬದ ಮಹಾರಾಜ ರಾಣೋಜಿ ಸಿಂಧಿಯಾ ನವೀಕರಿಸಿದರು ಎಂಬ ಉಲ್ಲೇಖ ಸಿಗುತ್ತವೆ. ಇಲ್ಲಿಗೆ ಭೇಟಿ ನೀಡುವುದರಿಂದ ನಾಗದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. </p><p><strong>ದಿನದ 24 ಗಂಟೆ ಪೂಜೆ: </strong></p><p>ಈ ದೇವಾಲಯದ ವಿಶೇಷ ಎಂದರೆ ನಾಗರ ಪಂಚಮಿಯ ಹಿಂದಿನ ದಿನದ ರಾತ್ರಿ 12ಗಂಟೆಗೆ ಬಾಗಿಲು ತೆರೆದು ಪೂಜಾ ಕಾರ್ಯ ಆರಂಭವಾದರೆ ಪಂಚಮಿಯ ದಿನ ಮುಗಿಯುವ ಮರುದಿನ 12ಗಂಟೆ ಗಂಟೆಯವರೆಗೆ ನಿರಂತರ ಪೂಜೆ ನಡೆಯುತ್ತದೆ. ದಿನದ 24 ಗಂಟೆ ಪೂಜಿಸಲ್ಪಡುವ ವಿರಳ ದೇವಾಲಯಗಳಲ್ಲಿ ಒಂದಾಗಿದೆ.</p><p>ಭಾರತದ ವಿವಿಧ ಭಾಗಗಳಲ್ಲಿ ನಾಗದೇವತೆಗಳ ದೇವಾಲಯಗಳಿವೆ. ಆದರೆ ಈ ದೇವಾಲಯವು ವಿಭಿನ್ನ ಮತ್ತು ವಿಶೇಷ ದೇವಾಲಯವಾಗಿದೆ. ಇಲ್ಲಿಗೆ ಭೇಟಿ ನೀಡಿ ಬಂದರೆ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾರತೀಯರಲ್ಲಿ ಸರ್ಪಗಳಿಗೆ ಪೂಜಾನೀಯ ಸ್ಥಾನ ನೀಡಲಾಗಿದೆ. ಸರ್ಪಗಳ ಕುರಿತು ನಮ್ಮ ಪುರಾಣದಲ್ಲಿ ಹಲವಾರು ಕಥೆಗಳಿವೆ. ಸರ್ಪಗಳು ದೇವರಿಗೆ ಸಮ ಎಂಬ ನಂಬಿಕೆ ಇದೆ. ಜಾತಕಾನುಸಾರವಾಗಿ ಸರ್ಪ ದೋಷವಿದ್ದರೆ, ಅವುಗಳನ್ನು ಪೂಜಿಸುವುದರ ಮೂಲಕ ಪರಿಹಾರ ಮಾಡಿಕೊಳ್ಳಬಹುದು. </p><p>ಮಾತ್ರವಲ್ಲ ಸರ್ಪದೋಷ ಪರಿಹಾರದಿಂದ ವಿವಾಹ, ಸಂತಾನ, ದಾಂಪತ್ಯ ಸುಖ ಹಾಗೂ ಉದ್ಯೋಗಗಳು ದೊರೆತಯುತ್ತವೆ ಎಂಬ ನಂಬಿಕೆ ಇದೆ. ಹಾಗಾಗಿ ನೂರಾರು ಸರ್ಪಗಳ ದೇವಾಲಯಗಳಿವೆ. ಅವುಗಳ ಪೈಕಿ ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಭೇಟಿ ನೀಡಲು ಅವಕಾಶವಿರು ನಾಗ ದೇವಸ್ಥಾನದ ಬಗ್ಗೆ ತಿಳಿಯೋಣ. </p>.ಆಂಧ್ರಪ್ರದೇಶದ ಪ್ರಸಿದ್ಧ ವಿಷ್ಣು ದೇವಾಲಯಗಳು: ಇವುಗಳ ಇತಿಹಾಸ ತಿಳಿಯಿರಿ.ಮೈಸೂರಿಗೆ ಹೋದವರು ಅರಮನೆ ಮಾತ್ರವಲ್ಲ, ಈ ಧಾರ್ಮಿಕ ತಾಣಗಳಿಗೂ ಭೇಟಿ ಕೊಡಿ.<h2><strong>ಮಹಾಕಾಳೇಶ್ವರ ದೇವಸ್ಥಾನ</strong></h2>.<p>ಮಧ್ಯಪ್ರದೇಶದಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದ 2ನೇ ಮಹಡಿಯಲ್ಲಿರುವ ಶ್ರೀ ನಾಗಚಂದ್ರೇಶ್ವರ ದೇವಸ್ಥಾನದ ಬಾಗಿಲುಗಳು ವರ್ಷಕ್ಕೊಮ್ಮೆ ತೆರೆಯಲಾಗುತ್ತದೆ. ಅಂದರೆ ನಾಗರ ಪಂಚಮಿ ಹಬ್ಬದಂದು ತೆರೆಯಲಾಗುತ್ತದೆ. ಈ ದೇವಸ್ಥಾನ ಉಜ್ಜಯಿನಿಯ ಪ್ರಸಿದ್ಧ ದೇವಾಲಯಗಳ ಪೈಕಿ ಒಂದಾಗಿದೆ. </p><p>ವರ್ಷವೆಲ್ಲ ಬಾಗಿಲು ಹಾಕಿರುವ ಈ ದೇವಾಲಯ ನಾಗಪಂಚಮಿಯಂದು ಮಾತ್ರ ತೆರೆಯಲ್ಪಡುತ್ತದೆ. ಈ ದಿನ ಇಲ್ಲಿಗೆ ಭಕ್ತರು ನಾಗದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಅದರಲ್ಲಿಯೂ ನಾಗರಪಂಚಮಿಯಂದು ಮಧ್ಯರಾತ್ರಿ 12ಗಂಟೆಯಿಂದಲೇ ಭಕ್ತರು ಇಲ್ಲಿಗೆ ಬರಲಾರಂಭಿಸುತ್ತಾರೆ. </p><p><strong>ಅಪರೂಪದ ವಿಗ್ರಹ:</strong> </p><p>ಬೇರೆಲ್ಲೂ ಕಾಣದ ವಿಭಿನ್ನವಾದ ಶಿವ ಹಾಗೂ ಪಾರ್ವತಿಯ ಮೂರ್ತಿ ಕೂಡ ಇಲ್ಲಿದೆ. ಈ ವಿಗ್ರಹದಲ್ಲಿ ವಿಶೇಷವಾಗಿ 10 ಹೆಡೆಯ ಶೇಷನಾನಿಂದ ಸುತ್ತುವರೆದಿದೆ. ಅದರ ಮೇಲೆ ಶಿವ ಮತ್ತು ಪಾರ್ವತಿ ಆಸೀನರಾಗಿದ್ದಾರೆ. ಈ ರೀತಿಯ ಶಿವನ ವಿಗ್ರಹ ಈವರೆಗೆ ಬೇರೆಲ್ಲೂ ಪತ್ತೆಯಾಗಿಲ್ಲ. </p><p><strong>ದೇವಾಲಯದ ಇತಿಹಾಸ </strong></p><p>ಈ ದೇವಾಲಯವನ್ನು 11ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಪರಮಾರ ರಾಜವಂಶದ ರಾಜನಾಗಿದ್ದ ಭೋಜನು ಈ ದೇವಾಲಯವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ಇಲ್ಲಿ ಪ್ರತಿಸ್ಠಾಪಿಸಲಾದ ಈ ವಿಗ್ರಹವನ್ನು ನೇಪಾಳದಿಂದ ತರಲಾಯಿತು ಎಂಬ ಹತ್ತಾರು ಕಥೆಗಳು ಚಾಲ್ತಿಯಲ್ಲಿವೆ. ಕಾಲಾನಂತರದಲ್ಲಿ ಈ ದೇವಾಲಯವನ್ನು 1732ರಲ್ಲಿ ಸಿಂಧಿಯಾ ಕುಟುಂಬದ ಮಹಾರಾಜ ರಾಣೋಜಿ ಸಿಂಧಿಯಾ ನವೀಕರಿಸಿದರು ಎಂಬ ಉಲ್ಲೇಖ ಸಿಗುತ್ತವೆ. ಇಲ್ಲಿಗೆ ಭೇಟಿ ನೀಡುವುದರಿಂದ ನಾಗದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. </p><p><strong>ದಿನದ 24 ಗಂಟೆ ಪೂಜೆ: </strong></p><p>ಈ ದೇವಾಲಯದ ವಿಶೇಷ ಎಂದರೆ ನಾಗರ ಪಂಚಮಿಯ ಹಿಂದಿನ ದಿನದ ರಾತ್ರಿ 12ಗಂಟೆಗೆ ಬಾಗಿಲು ತೆರೆದು ಪೂಜಾ ಕಾರ್ಯ ಆರಂಭವಾದರೆ ಪಂಚಮಿಯ ದಿನ ಮುಗಿಯುವ ಮರುದಿನ 12ಗಂಟೆ ಗಂಟೆಯವರೆಗೆ ನಿರಂತರ ಪೂಜೆ ನಡೆಯುತ್ತದೆ. ದಿನದ 24 ಗಂಟೆ ಪೂಜಿಸಲ್ಪಡುವ ವಿರಳ ದೇವಾಲಯಗಳಲ್ಲಿ ಒಂದಾಗಿದೆ.</p><p>ಭಾರತದ ವಿವಿಧ ಭಾಗಗಳಲ್ಲಿ ನಾಗದೇವತೆಗಳ ದೇವಾಲಯಗಳಿವೆ. ಆದರೆ ಈ ದೇವಾಲಯವು ವಿಭಿನ್ನ ಮತ್ತು ವಿಶೇಷ ದೇವಾಲಯವಾಗಿದೆ. ಇಲ್ಲಿಗೆ ಭೇಟಿ ನೀಡಿ ಬಂದರೆ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>