<p>ಆಂಧ್ರಪ್ರದೇಶದಲ್ಲಿ ಹತ್ತಾರೂ ಧಾರ್ಮಿಕ ಕ್ಷೇತ್ರಗಳಿವೆ. ಪ್ರಮುಖವಾಗಿ ಶೈವ ದೇವಾಲಯಗಳು, ಶಕ್ತಿ ಪೀಠಗಳು ಹಾಗೂ ವೈಷ್ಣವ ದೇವಾಲಯಗಳು ಸೇರಿದಂತೆ ನೂರಾರು ದೇವಾಲಯಗಳಿವೆ. ಆಂಧ್ರವನ್ನು ಆಳಿದ ಶಾತವಾಹನರಿಂದ ಹಿಡಿದು ಪಲ್ಲವರವರೆಗೆ ಹಲವು ವಿಭಿನ್ನ ವಾಸ್ತುಶಿಲ್ಪ ಶೈಲಿಯ ದೇವಾಸ್ಥನಗಳು ಹಾಗೂ ಧಾರ್ಮಿಕ ಸ್ಥಳಗಳು ನಿರ್ಮಾಣವಾಗಿವೆ.</p><p>ಕರ್ನಾಟಕದ ಪಕ್ಕದ ರಾಜ್ಯವಾಗಿರುವ ಆಂಧ್ರಪ್ರದೇಶದ ದೇವಾಲಯಗಳಿಗೆ ಅಸಂಖ್ಯಾತ ಕನ್ನಡಿಗ ಭಕ್ತರಿದ್ದಾರೆ. ಇಲ್ಲಿನ ದ್ರಾವಿಡ ಹಾಗೂ ನಾಗರ ಶೈಲಿಯ ದೇವಾಲಯಗಳು ಎಲ್ಲರ ಗಮನ ಸೆಳೆಯುತ್ತವೆ. ಹಾಗಾದರೆ, ಆಂಧ್ರಪ್ರದೇಶದ ಪ್ರಮುಖ ವಿಷ್ಣು ದೇವಾಲಯಗಳು ಯಾವುವು ಎಂಬ ಮಾಹಿತಿ ಇಲ್ಲಿದೆ. </p>.ಮೈಸೂರಿಗೆ ಹೋದವರು ಅರಮನೆ ಮಾತ್ರವಲ್ಲ, ಈ ಧಾರ್ಮಿಕ ತಾಣಗಳಿಗೂ ಭೇಟಿ ಕೊಡಿ.ಈ ವಾರದ ಪಿಕ್ನಿಕ್ ಸ್ಪಾಟ್: ಬೆಂಗಳೂರಿಗೆ ಹತ್ತಿರವಿರುವ ಕಾವೇರಿ ನದಿ ತೀರ.<p><strong>ದ್ವಾರಕಾ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ:</strong></p><p>ಎಲೂರು ಜಿಲ್ಲೆಯ ದ್ವಾರಕ ತಿರುಮಲ ದೇವಾಲಯ ವಿಷ್ಟುವಿನ ದೇವಾಲಯವಾಗಿದೆ. ಚಿನ್ನದ ತಿರುಪತಿ, ಮಿನಿ ತಿರುಪತಿ ಎಂತಲೂ ಕರೆಯಲಾಗುತ್ತದೆ. ಇಲ್ಲಿ ವೆಂಕಟೇಶ್ವರನ ಎರಡು ವಿಗ್ರಹಗಳಿರುವುದು ವಿಶೇಷವಾಗಿದೆ. ಈ ದೇವಾಲಯದ ರಚನೆ ದ್ರಾವಿಡ ಶೈಲಿಯದ್ದಾಗಿದೆ. </p><p>ಕೃಷ್ಣ ಹಾಗೂ ಗೋದಾವರಿ ನದಿಗಳ ನಡುವಿನ ಬೆಟ್ಟದ ಮೇಲೆ ಈ ದೇವಾಲಯವಿದೆ. ದಂತಕತೆಯ ಪ್ರಕಾರ ಒಂದು ವಿಷ್ಟು ವಿಗ್ರಹ ಪಾತಾಳದಲ್ಲಿದೆ. ಅದನ್ನು ಬಲಿಚಕ್ರವರ್ತಿ ಪೂಜಿಸುತ್ತಾನೆ ಎಂಬ ನಂಬಿಕೆ ಇದೆ. ಮತ್ತೊಂದು ವಿಷ್ಟುವಿಗ್ರಹವನ್ನು ರಾಮಾನುಜಾಚಾರ್ಯರು 12ನೇ ಶತಮಾನದಲ್ಲಿ ಪ್ರತಿಷ್ಟಾಪನೆ ಮಾಡಿದರು ಎಂದು ಹೇಳಲಾಗುತ್ತದೆ. </p><p><strong>ಅಹೋಬಿಲಂ ದೇವಾಲಯ:</strong></p><p>ಕರ್ನೂಲ್ ಜಿಲ್ಲೆಯಲ್ಲಿರುವ ಅಹೋಬಿಲಂ ದೇವಾಲಯವಿದೆ. ಪುರಾಣ ಕಥೆಯ ಪ್ರಕಾರ ವಿಷ್ಣು ನರಸಿಂಹ ಅವತಾರದಲ್ಲಿ ಹಿರಣ್ಯ ಕಶಿಪುವನ್ನು ಕೊಂದ ಸ್ಥಳವಾಗಿದೆ ಎಂದು ನಂಬಲಾಗಿದೆ. ಇಲ್ಲಿ ಅಹೋಬಿಲಂ ಹಾಗೂ ಕೆಳಗಿನ ಅಹೋಬಿಲ ಎಂಬ ಎರಡು ದೇವಾಲಯಗಳಿವೆ.</p><p>ಕೆಳಗಿನ ಅಹೋಬಿಲಂನಲ್ಲಿ ಲಕ್ಷ್ಮೀನರಸಿಂಹನ ಶಾಂತ ಮೂರ್ತಿ ಇದೆ. ಇಲ್ಲಿಂದ 8 ಕಿ.ಮೀ ದೂರದ ಎತ್ತರದ ಬೆಟ್ಟದ ಮೇಲೆ ನರಸಿಂಹನ ಉಗ್ರ ಸ್ವರೂಪದ ದೇವಾಲಯವಿದೆ. ನರಸಿಂಹನ 9 ರೂಪಗಳ ಮೂರ್ತಿಗಳೂ ಇಲ್ಲಿವೆ. </p><p><strong>ಶ್ರೀ ಜಗನ್ಮೋಹಿನಿ ಕೇಶವ ಸ್ವಾಮಿ ದೇವಸ್ಥಾನ: </strong></p><p>ಶ್ರೀ ಜಗನ್ಮೋಹಿನಿ ಕೇಶವ ಸ್ವಾಮಿ ದೇವಾಲಯ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ. ಪ್ರಸಿದ್ದ ವಿಷ್ಣು ದೇವಾಲಯದಲ್ಲಿ ಒಂದಾಗಿರುವ ಈ ದೇವಾಲಯ ಏಕಶಿಲಾ ರಚನೆಯಾಗಿದೆ. ಉದ್ಯೋಗದಲ್ಲಿರುವವರು ಬಯಸಿದ ಸ್ಥಳಕ್ಕೆ ವರ್ಗಾವಣೆಯಾಗಲು ಈ ದೇವಾಸ್ಥಾನಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ. </p><p>ರಾಜಾ ವಿಕ್ರಮನು ಈ ದೇವಾಸ್ಥಾನವನ್ನು 11ನೇ ಶತಮಾನದಲ್ಲಿ ನಿರ್ಮಿಸಿದನು. ವಿಗ್ರಹದ ಮುಂಭಾಗದಲ್ಲಿ ಮಹಾವಿಷ್ಣುವಿನ ರೂಪ ವಿದ್ದರೆ, ವಿಗ್ರಹದ ಹಿಂಭಾಗ ಮೋಹಕ ಸ್ವರೂಪದಲ್ಲಿರುವ ಜಗನ್ಮೋಹಿನಿ ರೂಪವನ್ನು ಹೊಂದಿದೆ. ಇಲ್ಲಿ ವಿಷ್ಟುವಿನ ಸ್ತ್ರೀ ರೂಪವನ್ನು ಪೂಜಿಸಲಾಗುತ್ತದೆ. </p><p><strong>ವರಾಹ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ: </strong></p><p>ಆಂಧ್ರಪ್ರದೇಶದ ವಿಶಾಖಪಟ್ಟಣಂದ ಸಿಂಹಾಚಲಂ ಬೆಟ್ಟದ ಮೇಲಿರುವ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವೂ ಸೇರಿದೆ. ಇಲ್ಲಿ ವಿಷ್ಟುವಿನ ವರಾಹ ರೂಪದ ವಿಗ್ರಹವಿರುವುದು ಈ ದೇವಾಲಯದ ವಿಶೇಷವಾಗಿದೆ. ವಿಗ್ರಹಕ್ಕೆ ಶ್ರೀಗಂಧದ ಲೇಪನ ಮಾಡಲಾಗುತ್ತದೆ. </p><p>ಆಂಧ್ರಪ್ರದೇಶದ ಎರಡನೇ ಅತಿ ದೊಡ್ಡ ದೇವಾಲಯ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಸಿಂಹದ ತಲೆ ಮತ್ತು ಮಾನವ ದೇಹದೊಂದಿಗೆ ವಿಷ್ಣುವಿನ ವಿಗ್ರಹವಿದೆ. ಚೋಳ ರಾಜ ಕುಲೋತ್ತುಂಗನ ಕಾಲಕ್ಕೆ ಸೇರಿದ ದೇವಾಲಯವಾಗಿದ್ದು, ಕಳಿಂಗ, ಚಾಲುಕ್ಯ, ಕಾಕತೀಯ ಮತ್ತು ಚೋಳ ಶೈಲಿಗಳ ವಾಸ್ತು ಶಿಲ್ಪಗಳ ಮಿಶ್ರಣವಾಗಿದೆ. </p>.ವಿದೇಶ ಪ್ರವಾಸ: ಭಾರತದಿಂದ ಕೇವಲ ₹40 ಸಾವಿರಕ್ಕೆ ಹೋಗಿಬರಬಹುದಾದ ದೇಶಗಳಿವು!.<p><strong>ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ: </strong></p><p>ಭೂಲೋಕದ ವೈಕುಂಠ ಎಂದೇ ಕರೆಯುವ ತಿರುಪತಿ ತಿಮ್ಮಪ್ಪನಿಗೆ ಲಕ್ಷಾಂತರ ಭಕ್ತರಿದ್ದಾರೆ. ‘ಏಳು ಬೆಟ್ಟಗಳ ದೇವಾಲಯ‘, ‘ಕಲಿಯುಗ ವೈಕುಂಠ’ವಾಗಿರುವ ಈ ದೇವಾಲಯ ವಿಷ್ಟುವಿನ ಅವತಾರವಾಗಿರುವ ವೆಂಕಟೇಶ್ವರನ ದೇವಾಲಯವಾಗಿದೆ. </p><p>ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿರುವ ಈ ದೇವಾಲಯಕ್ಕೆ ಹಣಕಾಸಿನ ತೊಂದರೆ, ದಾಂಪತ್ಯದಲ್ಲಿ ಕಲಹ ಹಾಗೂ ವಿವಾಹ ದೋಷವಿರುವವರು ವೆಂಕಟೇಶ್ವರನ ಸನ್ನಿದಿಗೆ ಭೇಟಿ ನೀಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಂಧ್ರಪ್ರದೇಶದಲ್ಲಿ ಹತ್ತಾರೂ ಧಾರ್ಮಿಕ ಕ್ಷೇತ್ರಗಳಿವೆ. ಪ್ರಮುಖವಾಗಿ ಶೈವ ದೇವಾಲಯಗಳು, ಶಕ್ತಿ ಪೀಠಗಳು ಹಾಗೂ ವೈಷ್ಣವ ದೇವಾಲಯಗಳು ಸೇರಿದಂತೆ ನೂರಾರು ದೇವಾಲಯಗಳಿವೆ. ಆಂಧ್ರವನ್ನು ಆಳಿದ ಶಾತವಾಹನರಿಂದ ಹಿಡಿದು ಪಲ್ಲವರವರೆಗೆ ಹಲವು ವಿಭಿನ್ನ ವಾಸ್ತುಶಿಲ್ಪ ಶೈಲಿಯ ದೇವಾಸ್ಥನಗಳು ಹಾಗೂ ಧಾರ್ಮಿಕ ಸ್ಥಳಗಳು ನಿರ್ಮಾಣವಾಗಿವೆ.</p><p>ಕರ್ನಾಟಕದ ಪಕ್ಕದ ರಾಜ್ಯವಾಗಿರುವ ಆಂಧ್ರಪ್ರದೇಶದ ದೇವಾಲಯಗಳಿಗೆ ಅಸಂಖ್ಯಾತ ಕನ್ನಡಿಗ ಭಕ್ತರಿದ್ದಾರೆ. ಇಲ್ಲಿನ ದ್ರಾವಿಡ ಹಾಗೂ ನಾಗರ ಶೈಲಿಯ ದೇವಾಲಯಗಳು ಎಲ್ಲರ ಗಮನ ಸೆಳೆಯುತ್ತವೆ. ಹಾಗಾದರೆ, ಆಂಧ್ರಪ್ರದೇಶದ ಪ್ರಮುಖ ವಿಷ್ಣು ದೇವಾಲಯಗಳು ಯಾವುವು ಎಂಬ ಮಾಹಿತಿ ಇಲ್ಲಿದೆ. </p>.ಮೈಸೂರಿಗೆ ಹೋದವರು ಅರಮನೆ ಮಾತ್ರವಲ್ಲ, ಈ ಧಾರ್ಮಿಕ ತಾಣಗಳಿಗೂ ಭೇಟಿ ಕೊಡಿ.ಈ ವಾರದ ಪಿಕ್ನಿಕ್ ಸ್ಪಾಟ್: ಬೆಂಗಳೂರಿಗೆ ಹತ್ತಿರವಿರುವ ಕಾವೇರಿ ನದಿ ತೀರ.<p><strong>ದ್ವಾರಕಾ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ:</strong></p><p>ಎಲೂರು ಜಿಲ್ಲೆಯ ದ್ವಾರಕ ತಿರುಮಲ ದೇವಾಲಯ ವಿಷ್ಟುವಿನ ದೇವಾಲಯವಾಗಿದೆ. ಚಿನ್ನದ ತಿರುಪತಿ, ಮಿನಿ ತಿರುಪತಿ ಎಂತಲೂ ಕರೆಯಲಾಗುತ್ತದೆ. ಇಲ್ಲಿ ವೆಂಕಟೇಶ್ವರನ ಎರಡು ವಿಗ್ರಹಗಳಿರುವುದು ವಿಶೇಷವಾಗಿದೆ. ಈ ದೇವಾಲಯದ ರಚನೆ ದ್ರಾವಿಡ ಶೈಲಿಯದ್ದಾಗಿದೆ. </p><p>ಕೃಷ್ಣ ಹಾಗೂ ಗೋದಾವರಿ ನದಿಗಳ ನಡುವಿನ ಬೆಟ್ಟದ ಮೇಲೆ ಈ ದೇವಾಲಯವಿದೆ. ದಂತಕತೆಯ ಪ್ರಕಾರ ಒಂದು ವಿಷ್ಟು ವಿಗ್ರಹ ಪಾತಾಳದಲ್ಲಿದೆ. ಅದನ್ನು ಬಲಿಚಕ್ರವರ್ತಿ ಪೂಜಿಸುತ್ತಾನೆ ಎಂಬ ನಂಬಿಕೆ ಇದೆ. ಮತ್ತೊಂದು ವಿಷ್ಟುವಿಗ್ರಹವನ್ನು ರಾಮಾನುಜಾಚಾರ್ಯರು 12ನೇ ಶತಮಾನದಲ್ಲಿ ಪ್ರತಿಷ್ಟಾಪನೆ ಮಾಡಿದರು ಎಂದು ಹೇಳಲಾಗುತ್ತದೆ. </p><p><strong>ಅಹೋಬಿಲಂ ದೇವಾಲಯ:</strong></p><p>ಕರ್ನೂಲ್ ಜಿಲ್ಲೆಯಲ್ಲಿರುವ ಅಹೋಬಿಲಂ ದೇವಾಲಯವಿದೆ. ಪುರಾಣ ಕಥೆಯ ಪ್ರಕಾರ ವಿಷ್ಣು ನರಸಿಂಹ ಅವತಾರದಲ್ಲಿ ಹಿರಣ್ಯ ಕಶಿಪುವನ್ನು ಕೊಂದ ಸ್ಥಳವಾಗಿದೆ ಎಂದು ನಂಬಲಾಗಿದೆ. ಇಲ್ಲಿ ಅಹೋಬಿಲಂ ಹಾಗೂ ಕೆಳಗಿನ ಅಹೋಬಿಲ ಎಂಬ ಎರಡು ದೇವಾಲಯಗಳಿವೆ.</p><p>ಕೆಳಗಿನ ಅಹೋಬಿಲಂನಲ್ಲಿ ಲಕ್ಷ್ಮೀನರಸಿಂಹನ ಶಾಂತ ಮೂರ್ತಿ ಇದೆ. ಇಲ್ಲಿಂದ 8 ಕಿ.ಮೀ ದೂರದ ಎತ್ತರದ ಬೆಟ್ಟದ ಮೇಲೆ ನರಸಿಂಹನ ಉಗ್ರ ಸ್ವರೂಪದ ದೇವಾಲಯವಿದೆ. ನರಸಿಂಹನ 9 ರೂಪಗಳ ಮೂರ್ತಿಗಳೂ ಇಲ್ಲಿವೆ. </p><p><strong>ಶ್ರೀ ಜಗನ್ಮೋಹಿನಿ ಕೇಶವ ಸ್ವಾಮಿ ದೇವಸ್ಥಾನ: </strong></p><p>ಶ್ರೀ ಜಗನ್ಮೋಹಿನಿ ಕೇಶವ ಸ್ವಾಮಿ ದೇವಾಲಯ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ. ಪ್ರಸಿದ್ದ ವಿಷ್ಣು ದೇವಾಲಯದಲ್ಲಿ ಒಂದಾಗಿರುವ ಈ ದೇವಾಲಯ ಏಕಶಿಲಾ ರಚನೆಯಾಗಿದೆ. ಉದ್ಯೋಗದಲ್ಲಿರುವವರು ಬಯಸಿದ ಸ್ಥಳಕ್ಕೆ ವರ್ಗಾವಣೆಯಾಗಲು ಈ ದೇವಾಸ್ಥಾನಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ. </p><p>ರಾಜಾ ವಿಕ್ರಮನು ಈ ದೇವಾಸ್ಥಾನವನ್ನು 11ನೇ ಶತಮಾನದಲ್ಲಿ ನಿರ್ಮಿಸಿದನು. ವಿಗ್ರಹದ ಮುಂಭಾಗದಲ್ಲಿ ಮಹಾವಿಷ್ಣುವಿನ ರೂಪ ವಿದ್ದರೆ, ವಿಗ್ರಹದ ಹಿಂಭಾಗ ಮೋಹಕ ಸ್ವರೂಪದಲ್ಲಿರುವ ಜಗನ್ಮೋಹಿನಿ ರೂಪವನ್ನು ಹೊಂದಿದೆ. ಇಲ್ಲಿ ವಿಷ್ಟುವಿನ ಸ್ತ್ರೀ ರೂಪವನ್ನು ಪೂಜಿಸಲಾಗುತ್ತದೆ. </p><p><strong>ವರಾಹ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ: </strong></p><p>ಆಂಧ್ರಪ್ರದೇಶದ ವಿಶಾಖಪಟ್ಟಣಂದ ಸಿಂಹಾಚಲಂ ಬೆಟ್ಟದ ಮೇಲಿರುವ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವೂ ಸೇರಿದೆ. ಇಲ್ಲಿ ವಿಷ್ಟುವಿನ ವರಾಹ ರೂಪದ ವಿಗ್ರಹವಿರುವುದು ಈ ದೇವಾಲಯದ ವಿಶೇಷವಾಗಿದೆ. ವಿಗ್ರಹಕ್ಕೆ ಶ್ರೀಗಂಧದ ಲೇಪನ ಮಾಡಲಾಗುತ್ತದೆ. </p><p>ಆಂಧ್ರಪ್ರದೇಶದ ಎರಡನೇ ಅತಿ ದೊಡ್ಡ ದೇವಾಲಯ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಸಿಂಹದ ತಲೆ ಮತ್ತು ಮಾನವ ದೇಹದೊಂದಿಗೆ ವಿಷ್ಣುವಿನ ವಿಗ್ರಹವಿದೆ. ಚೋಳ ರಾಜ ಕುಲೋತ್ತುಂಗನ ಕಾಲಕ್ಕೆ ಸೇರಿದ ದೇವಾಲಯವಾಗಿದ್ದು, ಕಳಿಂಗ, ಚಾಲುಕ್ಯ, ಕಾಕತೀಯ ಮತ್ತು ಚೋಳ ಶೈಲಿಗಳ ವಾಸ್ತು ಶಿಲ್ಪಗಳ ಮಿಶ್ರಣವಾಗಿದೆ. </p>.ವಿದೇಶ ಪ್ರವಾಸ: ಭಾರತದಿಂದ ಕೇವಲ ₹40 ಸಾವಿರಕ್ಕೆ ಹೋಗಿಬರಬಹುದಾದ ದೇಶಗಳಿವು!.<p><strong>ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ: </strong></p><p>ಭೂಲೋಕದ ವೈಕುಂಠ ಎಂದೇ ಕರೆಯುವ ತಿರುಪತಿ ತಿಮ್ಮಪ್ಪನಿಗೆ ಲಕ್ಷಾಂತರ ಭಕ್ತರಿದ್ದಾರೆ. ‘ಏಳು ಬೆಟ್ಟಗಳ ದೇವಾಲಯ‘, ‘ಕಲಿಯುಗ ವೈಕುಂಠ’ವಾಗಿರುವ ಈ ದೇವಾಲಯ ವಿಷ್ಟುವಿನ ಅವತಾರವಾಗಿರುವ ವೆಂಕಟೇಶ್ವರನ ದೇವಾಲಯವಾಗಿದೆ. </p><p>ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿರುವ ಈ ದೇವಾಲಯಕ್ಕೆ ಹಣಕಾಸಿನ ತೊಂದರೆ, ದಾಂಪತ್ಯದಲ್ಲಿ ಕಲಹ ಹಾಗೂ ವಿವಾಹ ದೋಷವಿರುವವರು ವೆಂಕಟೇಶ್ವರನ ಸನ್ನಿದಿಗೆ ಭೇಟಿ ನೀಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>