<p>ಶಿವ ಪೂಜೆಯಲ್ಲಿ ವಿವಿಧ ಹೂವುಗಳು ಹಾಗೂ ಪತ್ರೆಗಳನ್ನು ಬಳಸುತ್ತಾರೆ. ಅದೇ ರೀತಿ ಬಿಲ್ವಪತ್ರೆ ಶಿವನಿಗೆ ಪ್ರಿಯವಾದ ಪತ್ರೆಗಳಲ್ಲಿ ಒಂದಾಗಿದೆ. ಅಲ್ಲದೇ ತುಳಸಿ ಪತ್ರೆಯನ್ನೂ ಪೂಜೆಯಲ್ಲಿ ಬಳಸಲಾಗುತ್ತದೆ. ಪೂಜೆಯಲ್ಲಿ ಬಿಲ್ವಪತ್ರೆ ಹಾಗೂ ತುಳಸಿಯ ಮಹತ್ವವೇನು ಎಂಬುದನ್ನು ತಿಳಿಯೋಣ. </p><p><strong>ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದರಿಂದಾಗುವ ಲಾಭಗಳು: </strong></p><p>ಬಿಲ್ವಪತ್ರೆಯಲ್ಲಿ ಶಿವ ತತ್ವದಲ್ಲಿನ ತಾರಕ ಶಕ್ತಿಯಾದ ವಾಹಕ ಮತ್ತು ಈ ಪತ್ರೆಯ ತೊಟ್ಟಿನಲ್ಲಿ ಶಿವ ತತ್ವದ ಮಾರಕಶಕ್ತಿಯ ವಾಹಕತೆ ಅಡಗಿರುತ್ತದೆ ಎಂಬ ನಂಬಿಕೆ ಇದೆ. </p><p>ಶಿವ ಪ್ರಕೃತಿಯ ತಾರಕವಾಗಿರುವುದರಿಂದ ಆರಾಧನೆ ಮಾಡುವವರು ಪ್ರಕೃತಿ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿ ಪೂಜೆ ಸಲ್ಲಿಸುವುದು ಶುಭಕರವಾಗಿದೆ. ಶಿವನ ತಾರಕ ತತ್ವದ ಲಾಭ ಪಡೆದುಕೊಳ್ಳಲು ಶಿವಲಿಂಗದ ಮೇಲೆ ಬಿಲ್ವಪತ್ರೆಯ ತುದಿಗಳನ್ನು ನಮ್ಮ ಕಡೆಗೆ ಮಾಡಿ ಅರ್ಪಿಸಬೇಕು.</p>.ತುಳಸಿ ತೀರ್ಥ: ಇದರ ಮಹತ್ವವೇನು, ಹೇಗೆ ಸ್ವೀಕರಿಸಬೇಕು? ಇಲ್ಲಿದೆ ಮಾಹಿತಿ.ತುಳಸಿ: ಇದು ಸಸ್ಯ ಮಾತ್ರವಲ್ಲ, ಕುಟುಂಬದ ಏರು ಪೇರುಗಳ ಸೂಚಕ.<p>ಶಿವನ ಮಾರಕ ತತ್ವದ ಲಾಭವನ್ನು ಪಡೆದುಕೊಳ್ಳಲು ಪತ್ರೆಯ ತೊಟ್ಟು ನಮ್ಮ ಕಡೆಗೆ ಮಾಡಿ ಎಲೆಗಳ ತುದಿಗಳನ್ನು ಶಿವದೆಡೆಗೆ ಮಾಡಿ ಅರ್ಪಿಸಬೇಕು.</p><p>ಶಿವಲಿಂಗದ ಪವಿತ್ರಕಗಳನ್ನು ನಮ್ಮೆಡೆಗೆ ಸೆಳೆದುಕೊಳ್ಳಲು ಮೂರು ಎಲೆಗಳಿರುವ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಲಾಗುತ್ತದೆ. </p><p>ಬಿಲ್ವದ ಫಲಕ್ಕೆ ಆಯುರ್ವೇದದಲ್ಲಿ ಅಮೃತ ಫಲ ಎನ್ನುತ್ತಾರೆ. ಬಿಲ್ವದಿಂದ ವಾಸಿಯಾಗದ ಯಾವ ರೋಗವೂ ಇಲ್ಲ. ರೋಗಕ್ಕೆ ಯಾವ ಔಷಧಿಯೂ ಸಿಗದಿದ್ದರೆ ಬಿಲ್ವಪತ್ರೆಯನ್ನು ಉಪಯೋಗಿಸಬಹುದು ಎಂದು ಹೇಳಲಾಗುತ್ತದೆ.</p><p>ಗರ್ಭವತಿ ಸ್ತ್ರೀಯರು ಮಾತ್ರ ಬಿಲ್ವಪತ್ರೆಯನ್ನು ಸೇವಿಸಿದರೆ ಭ್ರೂಣವು ಮರಣ ಹೊಂದುವ ಸಾಧ್ಯತೆ ಇರುತ್ತದೆ ಎಂದು ಶಾಸ್ತ್ರ ಹಾಗೂ ವೈಜ್ಞಾನಿಕವಾಗಿ ಉಲ್ಲೇಖಿತವಾಗಿದೆ.</p><p><strong>ನೈವೇದ್ಯ ಅರ್ಪಿಸುವಾಗ ತುಳಸಿ ಬಳಕೆ: </strong></p><p>ತುಳಸಿ ಎಲೆ ಬಳಸಿ ನೈವೇದ್ಯ ಅರ್ಪಿಸುವುದು ಶುಭದಾಯಕವಾಗಿದೆ. </p><p>ತುಳಸಿ ಗಿಡ ವಾಯುಮಂಡಲದಲ್ಲಿನ ಸಾತ್ವಿಕ ಸಂಕೇತವಾಗಿದೆ. ತುಳಸಿಗೆ ಬ್ರಹ್ಮಾಂಡದಲ್ಲಿನ ಕೃಷ್ಣ ತತ್ವವನ್ನು ಸೆಳೆದುಕೊಳ್ಳುವ ಅಂಶವಿದೆ ಎಂದು ಹೇಳಲಾಗುತ್ತದೆ.</p><p>ತುಳಸಿ ಎಲೆಯನ್ನು ನೈವೇದ್ಯದಲ್ಲಿ ಬಳಸುವುದರಿಂದ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. </p>.ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವ ಪೂಜೆಯಲ್ಲಿ ವಿವಿಧ ಹೂವುಗಳು ಹಾಗೂ ಪತ್ರೆಗಳನ್ನು ಬಳಸುತ್ತಾರೆ. ಅದೇ ರೀತಿ ಬಿಲ್ವಪತ್ರೆ ಶಿವನಿಗೆ ಪ್ರಿಯವಾದ ಪತ್ರೆಗಳಲ್ಲಿ ಒಂದಾಗಿದೆ. ಅಲ್ಲದೇ ತುಳಸಿ ಪತ್ರೆಯನ್ನೂ ಪೂಜೆಯಲ್ಲಿ ಬಳಸಲಾಗುತ್ತದೆ. ಪೂಜೆಯಲ್ಲಿ ಬಿಲ್ವಪತ್ರೆ ಹಾಗೂ ತುಳಸಿಯ ಮಹತ್ವವೇನು ಎಂಬುದನ್ನು ತಿಳಿಯೋಣ. </p><p><strong>ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದರಿಂದಾಗುವ ಲಾಭಗಳು: </strong></p><p>ಬಿಲ್ವಪತ್ರೆಯಲ್ಲಿ ಶಿವ ತತ್ವದಲ್ಲಿನ ತಾರಕ ಶಕ್ತಿಯಾದ ವಾಹಕ ಮತ್ತು ಈ ಪತ್ರೆಯ ತೊಟ್ಟಿನಲ್ಲಿ ಶಿವ ತತ್ವದ ಮಾರಕಶಕ್ತಿಯ ವಾಹಕತೆ ಅಡಗಿರುತ್ತದೆ ಎಂಬ ನಂಬಿಕೆ ಇದೆ. </p><p>ಶಿವ ಪ್ರಕೃತಿಯ ತಾರಕವಾಗಿರುವುದರಿಂದ ಆರಾಧನೆ ಮಾಡುವವರು ಪ್ರಕೃತಿ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿ ಪೂಜೆ ಸಲ್ಲಿಸುವುದು ಶುಭಕರವಾಗಿದೆ. ಶಿವನ ತಾರಕ ತತ್ವದ ಲಾಭ ಪಡೆದುಕೊಳ್ಳಲು ಶಿವಲಿಂಗದ ಮೇಲೆ ಬಿಲ್ವಪತ್ರೆಯ ತುದಿಗಳನ್ನು ನಮ್ಮ ಕಡೆಗೆ ಮಾಡಿ ಅರ್ಪಿಸಬೇಕು.</p>.ತುಳಸಿ ತೀರ್ಥ: ಇದರ ಮಹತ್ವವೇನು, ಹೇಗೆ ಸ್ವೀಕರಿಸಬೇಕು? ಇಲ್ಲಿದೆ ಮಾಹಿತಿ.ತುಳಸಿ: ಇದು ಸಸ್ಯ ಮಾತ್ರವಲ್ಲ, ಕುಟುಂಬದ ಏರು ಪೇರುಗಳ ಸೂಚಕ.<p>ಶಿವನ ಮಾರಕ ತತ್ವದ ಲಾಭವನ್ನು ಪಡೆದುಕೊಳ್ಳಲು ಪತ್ರೆಯ ತೊಟ್ಟು ನಮ್ಮ ಕಡೆಗೆ ಮಾಡಿ ಎಲೆಗಳ ತುದಿಗಳನ್ನು ಶಿವದೆಡೆಗೆ ಮಾಡಿ ಅರ್ಪಿಸಬೇಕು.</p><p>ಶಿವಲಿಂಗದ ಪವಿತ್ರಕಗಳನ್ನು ನಮ್ಮೆಡೆಗೆ ಸೆಳೆದುಕೊಳ್ಳಲು ಮೂರು ಎಲೆಗಳಿರುವ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಲಾಗುತ್ತದೆ. </p><p>ಬಿಲ್ವದ ಫಲಕ್ಕೆ ಆಯುರ್ವೇದದಲ್ಲಿ ಅಮೃತ ಫಲ ಎನ್ನುತ್ತಾರೆ. ಬಿಲ್ವದಿಂದ ವಾಸಿಯಾಗದ ಯಾವ ರೋಗವೂ ಇಲ್ಲ. ರೋಗಕ್ಕೆ ಯಾವ ಔಷಧಿಯೂ ಸಿಗದಿದ್ದರೆ ಬಿಲ್ವಪತ್ರೆಯನ್ನು ಉಪಯೋಗಿಸಬಹುದು ಎಂದು ಹೇಳಲಾಗುತ್ತದೆ.</p><p>ಗರ್ಭವತಿ ಸ್ತ್ರೀಯರು ಮಾತ್ರ ಬಿಲ್ವಪತ್ರೆಯನ್ನು ಸೇವಿಸಿದರೆ ಭ್ರೂಣವು ಮರಣ ಹೊಂದುವ ಸಾಧ್ಯತೆ ಇರುತ್ತದೆ ಎಂದು ಶಾಸ್ತ್ರ ಹಾಗೂ ವೈಜ್ಞಾನಿಕವಾಗಿ ಉಲ್ಲೇಖಿತವಾಗಿದೆ.</p><p><strong>ನೈವೇದ್ಯ ಅರ್ಪಿಸುವಾಗ ತುಳಸಿ ಬಳಕೆ: </strong></p><p>ತುಳಸಿ ಎಲೆ ಬಳಸಿ ನೈವೇದ್ಯ ಅರ್ಪಿಸುವುದು ಶುಭದಾಯಕವಾಗಿದೆ. </p><p>ತುಳಸಿ ಗಿಡ ವಾಯುಮಂಡಲದಲ್ಲಿನ ಸಾತ್ವಿಕ ಸಂಕೇತವಾಗಿದೆ. ತುಳಸಿಗೆ ಬ್ರಹ್ಮಾಂಡದಲ್ಲಿನ ಕೃಷ್ಣ ತತ್ವವನ್ನು ಸೆಳೆದುಕೊಳ್ಳುವ ಅಂಶವಿದೆ ಎಂದು ಹೇಳಲಾಗುತ್ತದೆ.</p><p>ತುಳಸಿ ಎಲೆಯನ್ನು ನೈವೇದ್ಯದಲ್ಲಿ ಬಳಸುವುದರಿಂದ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. </p>.ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>