’ನಾವು ಹಿಂದೆಲ್ಲಾ ವಿಪತ್ತಿನ ಕಾಲದಲ್ಲಿ ಸಾರ್ವಜನಿಕರು, ಸರ್ಕಾರಕ್ಕೆ ನೆರವು ನೀಡಿದ್ದೇವೆ. ಈಗ ನಾವೇ ನೆರವಿಗಾಗಿ ಅಂಗಲಾಚುವ ಸ್ಥಿತಿ ಬಂದೊದಗಿದೆ. ನಮ್ಮ ನಂಬಿರುವ ತರಕಾರಿ ಮಾರಾಟಗಾರರು ಲಾಕ್ಡೌನ್ ಎಂದು ಮುಗಿಯುತ್ತದೆ ಎಂದು ಕೇಳುವಾಗ ಸಂಕಟವಾಗುತ್ತದೆ. ಮಾಡಿಕೊಂಡಿರುವ ಸಾಲ ನಿಗದಿತ ಅವಧಿಯಲ್ಲಿ ತೀರಿಸಲು ಸಾಧ್ಯವಾಗುವುದೊ ಇಲ್ಲವೂ ಎಂಬ ಭಯ ಕಾಡುತ್ತಿದೆ. ಹೊಟೇಲ್ನಲ್ಲಿ ಉಳಿದಿರುವ ಪೇಡೆ, ಚೂಡಾ, ಬ್ರೆಡ್, ಮೈದಾ, ಶೇಂಗಾ, ರವೆ, ಹಾಗೂ ಒಂದು ವಾರಕ್ಕೆ ಆಗುವಷ್ಟು ಸಂಗ್ರಹಿಸಿಟ್ಟಿದ್ದ ತರಕಾರಿ ಎಲ್ಲಾ ನಾಶವಾಗಿದೆ.