ಮುಂಜಾನೆ ಕೊಣ್ಣೂರು-ನರಗುಂದ ಹಳೆಯ ಸೇತುವೆ ದಾಟಿಕೊಂಡು ಹೊಲಕ್ಕೆ ಹೋಗಿದ್ದ ಅವರು ವಾಪಸ್ ಅದೇ ದಾರಿಯಲ್ಲಿ ಮನೆಗೆ ಹೊರಟಿದ್ದಾರೆ. ಆದರೆ ಮಳೆಯ ಕಾರಣ ಮಲಪ್ರಭೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಹಳೆಯ ಸೇತುವೆ ಮೇಲಿನಿಂದ ಹರಿಯುತ್ತಿದೆ. ನೀರಿನ ಸೆಳವಿಗೆ ಸಿಲುಕಿ ಅವರು ಕೊಚ್ಚಿ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.