100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿ ಎಂಟು ತಿಂಗಳು ಕಳೆದರೂ ಉದ್ಘಾಟನೆ ಆಗಿಲ್ಲ. ನೇಕಾರರ ಗುರುತಿನ ಚೀಟಿ ನೀಡಿದ ನಂತರ ದೊರೆಯಬೇಕಿರುವ ಅನುಕೂಲಗಳ ಭರವಸೆಯೂ ಈಡೇರಿಲ್ಲ. ನಾಗರೀಕರ ಕನಿಷ್ಠ ಭರವಸೆಗಳಾದ ರಸ್ತೆ, ಕುಡಿಯುವ ನೀರು ಇವುಗಳು ಈಡೇರಿಲ್ಲ. ಹೋರಾಟಗಳು ನಿರಂತರವಾಗಿಯೇ ಇವೆ.
ರುದ್ರಆರಾಧ್ಯ, ವಕೀಲ, ದೊಡ್ಡಬಳ್ಳಾಪುರ
ಮಹೇಶ್ ಹೊನ್ನಾಘಟ್ಟ
ಮತದಾನ ಬಹಿಷ್ಕಾರ, ಅಧಿಕಾರಿಗಳ ಭರವಸೆಗಳು ಸವಕಲು ನಾಣ್ಯದ ರೀತಿಯಾಗುತ್ತಿವೆ. ನಮ್ಮ ಹೋರಾಟಗಳ ಸ್ವರೂಪದಲ್ಲೂ ಒಂದಿಷ್ಟು ಬದಲಾವಣೆಗಳೊಂದಿಗೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕಿದೆ. ಆಗ ಮಾತ್ರ ನಮ್ಮ ಸಮಸ್ಯೆಗಳು ಕನಿಷ್ಠ ಮಟ್ಟದಲ್ಲಾದರೂ ನಿವಾರಣೆಯಾಗಲು ಸಾಧ್ಯವಾಗಬಹುದು ಅನ್ನಿಸುತ್ತಿದೆ.
ಮಹೇಶ್ ಹೊನ್ನಾಘಟ್ಟ, ಅಧ್ಯಕ್ಷ , ಕರ್ನಾಟಕ ರಾಜ್ಯ ರೈತ ಶಕ್ತಿ