ದಕ್ಷೀಣ ಕಾಶಿ ಎಂದೇ ಹೆಸರಾಗಿರುವ ಸೊಗಲಕ್ಕೆ ರಾಜ್ಯವಷ್ಟೇ ಅಲ್ಲದೆ, ಮಹಾರಾಷ್ಟ್ರ, ಗೋವಾ ಸೇರಿದಂತೆ ಬೇರೆ, ಬೇರೆ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಜಿಂಕೆ ವನದಲ್ಲಿ ಸುತ್ತಾಡಿ, ವನ್ಯ ಜೀವಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆಗ ಅರಣ್ಯ ಇಲಾಖೆಗೆ ಜಿಂಕೆವನದಿಂದ ಉತ್ತಮ ಆದಾಯ ಬರುತ್ತಿತ್ತು. ಆದರೆ, ಕೊರೊನಾ ಬಳಿಕ ಪ್ರವಾಸಿಗರ ಕೊರತೆ ಎದುರಾಗಿದೆ. ನಿತ್ಯ ಬೆರಳೆಣಿಕೆಯಷ್ಟೇ ಜನರು ಮಾತ್ರ ಭೇಟಿ ನೀಡುತ್ತಿದ್ದಾರೆ.