<p><strong>ಬೆಂಗಳೂರು</strong>: ಬೆಂಗಳೂರು ಹಾಗೂ ಕನ್ನಡದ ಬಗ್ಗೆ ಉತ್ತರ ಭಾರತೀಯ ಕೆಲವರು ಆಗಾಗ ತಗಾದೆ ತೆಗೆಯುವುದನ್ನು ನೋಡುತ್ತಿರುತ್ತೇವೆ. ಈ ಪ್ರಕರಣಗಳಿಗೆ ಇದೀಗ ಮತ್ತೊಂದು ಸೇರ್ಪಡೆ.</p><p>ಬಳಕೆಯಾದ ಕಾರುಗಳನ್ನು ಕೊಳ್ಳಲು ಹಾಗೂ ಮಾರಲು ಆನ್ಲೈನ್ನಲ್ಲಿ ವೇದಿಕೆ ಸೃಷ್ಟಿಸಿರುವ Cars24 ಕಂಪನಿಯ ಸ್ಥಾಪಕ, ಟೆಕಿ ವಿಕ್ರಮ್ ಚೋಪ್ರಾ ಅವರು ಬೆಂಗಳೂರು ಹಾಗೂ ಕನ್ನಡದ ಬಗ್ಗೆ ಕೊಂಕು ಮಾತನಾಡಿದ್ದಾರೆ.</p><p>ಡಿಸೆಂಬರ್ 19ರಂದು ಬೆಳಿಗ್ಗೆ 10 ಗಂಟೆ 8 ನಿಮಿಷಕ್ಕೆ ಎಕ್ಸ್ ತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿರುವ ವಿಕ್ರಮ್ ಚೋಪ್ರಾ ಅವರು ಉತ್ತರ ಭಾರತೀಯರೇ ಹಲವು ವರ್ಷಗಳ ನಂತರವೂ ನಿಮಗೆ ಬೆಂಗಳೂರಲ್ಲಿ ಕನ್ನಡ ಕಲಿಯಲು, ಮಾತನಾಡಲು ಆಗಿಲ್ಲವೇ? ಹಾಗಾದರೆ ದೆಹಲಿಗೆ ಬನ್ನಿ ಎಂದು ಕರೆ ಕೊಟ್ಟಿದ್ದಾರೆ.</p>.<p>ತಮ್ಮ ಮನೆ ಹತ್ತಿರ ಕೆಲಸ ಮಾಡುವ ಉತ್ಸಾಹಿ ಎಂಜಿನಿಯರ್ಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿರುವ ಅವರು ದೆಹಲಿ ಎನ್ಸಿಆರ್ ಉತ್ತಮವಾಗಿದೆ ಎಂದು ನಾವು ಹೇಳುತ್ತಿಲ್ಲ, ನಿಜಕ್ಕೂ ಅದು ಉತ್ತಮವಾಗಿಯೇ ಇದೆ, ದೆಲ್ಲಿ ಮೇರಿ ಜಾನ್.. ಎಂದು ಹೇಳಿಕೊಂಡಿದ್ದಾರೆ</p><p> ಬೆಂಗಳೂರು ಬಿಟ್ಟು ಬಂದು ದೆಹಲಿಯಲ್ಲಿ ಕೆಲಸ ಮಾಡಲು ಬಯಸುವವರು ನನಗೆ ಸಂದೇಶ ಕಳುಹಿಸಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಬ್ಯಾಕ್ ಟು ದೆಹಲಿ ಎಂದು ವಿಮಾನದ ಚಿತ್ರವನ್ನು ಹಂಚಿಕೊಂಡಿದ್ದಾರೆ.</p><p>ವಿಕ್ರಮ್ ಚೋಪ್ರಾ ಅವರ ಈ ಟ್ವೀಟ್ಗೆ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ಅನೇಕ ನೆಟ್ಟಿಗರ ವ್ಯಾಪಕ ವಿರೋಧ ವ್ಯಕ್ತವಾಗಿದೆ.</p><p>ದೆಹಲಿ ಚೆನ್ನಾಗಿದೆ ಅಂತಾ ನೀನು ತೋರಿಸು, ನಾನು ನಿಮ್ಮ ಜೊತೆ ಒಂದು ವರ್ಷ ಉಚಿತವಾಗಿ ಕೆಲಸ ಮಾಡುತ್ತೇನೆ ಎಂದು ಟೆಕಿಯೊಬ್ಬರು ಹೇಳಿದ್ದಾರೆ.</p><p>ಅನೇಕ ಕನ್ನಡಿಗರು, ಕನ್ನಡಕ್ಕೆ ಕರ್ನಾಟಕಕ್ಕೆ ಮರ್ಯಾದೆ ಕೊಡದ ನಿಮ್ಮಂಥ ಉತ್ತರ ಭಾರತೀಯರು ಮೊದಲು ಇಲ್ಲಿಂದ ತೊಲಗಿ ಎಂದು ಕಮೆಂಟ್ಗಳನ್ನು ಮಾಡಿದ್ದಾರೆ. ಬೆಂಗಳೂರಿಗೆ ಅನ್ನ ಅರಸಿ ಬಂದು ಬದುಕು ಕಟ್ಟಿಕೊಂಡವರಿಗೆ ಕನ್ನಡ ಕಲಿಯಲು ಸಲಹೆ ನೀಡುವ ಬದಲು ಈ ರೀತಿ ಬೇಳೆ ಬೇಯಿಸಿಕೊಳ್ಳುವ ಕೆಲಸ ಬಿಡಿ ಎಂದು ಕೆಲವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೆಂಗಳೂರು ಹಾಗೂ ಕನ್ನಡದ ಬಗ್ಗೆ ಉತ್ತರ ಭಾರತೀಯ ಕೆಲವರು ಆಗಾಗ ತಗಾದೆ ತೆಗೆಯುವುದನ್ನು ನೋಡುತ್ತಿರುತ್ತೇವೆ. ಈ ಪ್ರಕರಣಗಳಿಗೆ ಇದೀಗ ಮತ್ತೊಂದು ಸೇರ್ಪಡೆ.</p><p>ಬಳಕೆಯಾದ ಕಾರುಗಳನ್ನು ಕೊಳ್ಳಲು ಹಾಗೂ ಮಾರಲು ಆನ್ಲೈನ್ನಲ್ಲಿ ವೇದಿಕೆ ಸೃಷ್ಟಿಸಿರುವ Cars24 ಕಂಪನಿಯ ಸ್ಥಾಪಕ, ಟೆಕಿ ವಿಕ್ರಮ್ ಚೋಪ್ರಾ ಅವರು ಬೆಂಗಳೂರು ಹಾಗೂ ಕನ್ನಡದ ಬಗ್ಗೆ ಕೊಂಕು ಮಾತನಾಡಿದ್ದಾರೆ.</p><p>ಡಿಸೆಂಬರ್ 19ರಂದು ಬೆಳಿಗ್ಗೆ 10 ಗಂಟೆ 8 ನಿಮಿಷಕ್ಕೆ ಎಕ್ಸ್ ತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿರುವ ವಿಕ್ರಮ್ ಚೋಪ್ರಾ ಅವರು ಉತ್ತರ ಭಾರತೀಯರೇ ಹಲವು ವರ್ಷಗಳ ನಂತರವೂ ನಿಮಗೆ ಬೆಂಗಳೂರಲ್ಲಿ ಕನ್ನಡ ಕಲಿಯಲು, ಮಾತನಾಡಲು ಆಗಿಲ್ಲವೇ? ಹಾಗಾದರೆ ದೆಹಲಿಗೆ ಬನ್ನಿ ಎಂದು ಕರೆ ಕೊಟ್ಟಿದ್ದಾರೆ.</p>.<p>ತಮ್ಮ ಮನೆ ಹತ್ತಿರ ಕೆಲಸ ಮಾಡುವ ಉತ್ಸಾಹಿ ಎಂಜಿನಿಯರ್ಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿರುವ ಅವರು ದೆಹಲಿ ಎನ್ಸಿಆರ್ ಉತ್ತಮವಾಗಿದೆ ಎಂದು ನಾವು ಹೇಳುತ್ತಿಲ್ಲ, ನಿಜಕ್ಕೂ ಅದು ಉತ್ತಮವಾಗಿಯೇ ಇದೆ, ದೆಲ್ಲಿ ಮೇರಿ ಜಾನ್.. ಎಂದು ಹೇಳಿಕೊಂಡಿದ್ದಾರೆ</p><p> ಬೆಂಗಳೂರು ಬಿಟ್ಟು ಬಂದು ದೆಹಲಿಯಲ್ಲಿ ಕೆಲಸ ಮಾಡಲು ಬಯಸುವವರು ನನಗೆ ಸಂದೇಶ ಕಳುಹಿಸಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಬ್ಯಾಕ್ ಟು ದೆಹಲಿ ಎಂದು ವಿಮಾನದ ಚಿತ್ರವನ್ನು ಹಂಚಿಕೊಂಡಿದ್ದಾರೆ.</p><p>ವಿಕ್ರಮ್ ಚೋಪ್ರಾ ಅವರ ಈ ಟ್ವೀಟ್ಗೆ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ಅನೇಕ ನೆಟ್ಟಿಗರ ವ್ಯಾಪಕ ವಿರೋಧ ವ್ಯಕ್ತವಾಗಿದೆ.</p><p>ದೆಹಲಿ ಚೆನ್ನಾಗಿದೆ ಅಂತಾ ನೀನು ತೋರಿಸು, ನಾನು ನಿಮ್ಮ ಜೊತೆ ಒಂದು ವರ್ಷ ಉಚಿತವಾಗಿ ಕೆಲಸ ಮಾಡುತ್ತೇನೆ ಎಂದು ಟೆಕಿಯೊಬ್ಬರು ಹೇಳಿದ್ದಾರೆ.</p><p>ಅನೇಕ ಕನ್ನಡಿಗರು, ಕನ್ನಡಕ್ಕೆ ಕರ್ನಾಟಕಕ್ಕೆ ಮರ್ಯಾದೆ ಕೊಡದ ನಿಮ್ಮಂಥ ಉತ್ತರ ಭಾರತೀಯರು ಮೊದಲು ಇಲ್ಲಿಂದ ತೊಲಗಿ ಎಂದು ಕಮೆಂಟ್ಗಳನ್ನು ಮಾಡಿದ್ದಾರೆ. ಬೆಂಗಳೂರಿಗೆ ಅನ್ನ ಅರಸಿ ಬಂದು ಬದುಕು ಕಟ್ಟಿಕೊಂಡವರಿಗೆ ಕನ್ನಡ ಕಲಿಯಲು ಸಲಹೆ ನೀಡುವ ಬದಲು ಈ ರೀತಿ ಬೇಳೆ ಬೇಯಿಸಿಕೊಳ್ಳುವ ಕೆಲಸ ಬಿಡಿ ಎಂದು ಕೆಲವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>