<p><strong>ಬೆಂಗಳೂರು:</strong> ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾಜಧಾನಿಯ ಮಹಾತ್ಮ ಗಾಂಧಿ ರಸ್ತೆಯಲ್ಲಿ ಪ್ರತಿವರ್ಷದಂತೆ ಜಮಾವಣೆಗೊಳ್ಳುವ ಜನರ ನಿಯಂತ್ರಣಕ್ಕೆ ಬಿಗಿ ಬಂದೋಬಸ್ತ್ ಮಾಡಿದ್ದ ಬೆಂಗಳೂರು ನಗರ ಪೊಲೀಸರ ನೇತೃತ್ವವನ್ನು ಸ್ವತಃ ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ಅವರೇ ವಹಿಸಿದ್ದರು.</p><p>ರಾತ್ರಿ 10ರ ವರೆಗೂ ಎಂ.ಜಿ. ರಸ್ತೆ ಎಂದಿನಂತೆಯೇ ಇತ್ತು. ಆದರೆ, ನಂತರ ಜನರು ಬ್ರಿಗೇಡ್, ಚರ್ಚ್ ಸ್ಟ್ರೀಟ್ನತ್ತ ಬರಲಾರಂಭಿಸಿದರು. ಹೊಸ ವರ್ಷದ ಸಂಭ್ರಮಾಚರಣೆ ಕಳೆಗಟ್ಟಿತು. ರಾತ್ರಿ 11ರ ಸುಮಾರಿಗೆ ಕಪ್ಪು ಬಣ್ಣದ ಥಾರ್ನಲ್ಲಿ ಯುವಕರಿಬ್ಬರು ಬ್ರಿಗೇಡ್ ರಸ್ತೆಯ ಜಂಕ್ಷನ್ಗೆ ಬಂದರು.</p>.PHOTOS | ಹೊಸ ವರ್ಷದ ಸಂಭ್ರಮಾಚರಣೆ: ಕುಣಿದು ಕುಪ್ಪಳಿಸಿದ ಯುವಜನ.ಹೊಸ ವರ್ಷದ ಸಡಗರದಲ್ಲಿ ತೇಲಿದ ನಗರ: ಪಬ್, ಕ್ಲಬ್ಗಳಲ್ಲಿ ಕುಣಿದು–ನಲಿದು ಸಂಭ್ರಮ. <p>ಪರಿಶೀಲನೆ ಸಲುವಾಗಿ ಅಲ್ಲಿಗೆ ತೆರಳಿದ ಸೀಮಾಂತ್ ಕುಮಾರ್ ಸಿಂಗ್, ಕಾರಿನ ಕಿಟಕಿ ಗಾಜು ಇಳಿಸಲು ಸೂಚಿಸಿದರು. ದಾಖಲೆ ಕೇಳಿದರು. ಆಗ ಕಮಿಷನರ್ ಅವರನ್ನು ಕಂಡು ಗಾಬರಿಯಾದ ಯುವಕ, ದಾಖಲೆ ತೆಗೆಯಲು ತುಸು ತಡಬಡಾಯಿಸಿದ. ಆದರೆ, ಈ ಘಟನೆಗೆ ಸಾಕ್ಷಿಯಂತೆ ಚಾಲಕನ ಪಕ್ಕದಲ್ಲಿ ಕೂತಿದ್ದ ಯುವಕ, ಘಟನೆ ಅರಗಿಸಿಕೊಳ್ಳುವ ಮೊದಲೇ ಕಮಿಷನರ್ ಕಜ್ಜಾಯದ ಬಿಸಿ ತೋರಿಸಿದ್ದರು.</p><p>ಪೆಟ್ಟು ತಿಂದು ಪೆಚ್ಚಾದ ಯುವಕ, ‘ನನಗೆ ಹೊಡೆದಿದ್ದಾದರೂ ಏಕೆ?’ ಎಂಬ ಪ್ರಶ್ನೆಯನ್ನು ಕೇಳುತ್ತಲೇ ಇದ್ದ. </p><p>ಘಟನೆಗೆ ಸಾಕ್ಷಿಯಾದ ಪತ್ರಕರ್ತರ ಬಳಿ ತನ್ನ ಅಳಲು ತೋಡಿಕೊಂಡ ಆತ, ‘ನನಗೆ ಏಕೆ ಹೊಡೆದರು ಎಂದು ಈಗಲೂ ಗೊತ್ತಾಗುತ್ತಿಲ್ಲ. ನಾವು ಎಂ.ಜಿ. ರಸ್ತೆಗೆ ಬರ್ಬಾರ್ದಾ?’ ಎಂದು ಮರು ಪ್ರಶ್ನೆಯನ್ನಿತ್ತು, ಮತ್ತೆ ಮಂಕಾದರು.</p><p>ಮತ್ತೊಂದೆಡೆ ಯುವಕನೊಬ್ಬನ ಬ್ಯಾಗ್ ಪರಿಶೀಲಿಸಿದ ಸೀಮಾಂತ್ ಕುಮಾರ್ ಸಿಂಗ್, ಆತನ ಬಳಿ ಇದ್ದ ಕ್ಯಾಮೆರಾ ನೋಡಿ, ‘ಇದನ್ನೇಕೆ ತಂದಿದ್ದೀಯಾ? ಎಂದು ಗದರಿ, ಆತನನ್ನು ಸಂಭ್ರಮದಿಂದಲೇ ದೂರವಿಡಲು ಸಿಬ್ಬಂದಿಗೆ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾಜಧಾನಿಯ ಮಹಾತ್ಮ ಗಾಂಧಿ ರಸ್ತೆಯಲ್ಲಿ ಪ್ರತಿವರ್ಷದಂತೆ ಜಮಾವಣೆಗೊಳ್ಳುವ ಜನರ ನಿಯಂತ್ರಣಕ್ಕೆ ಬಿಗಿ ಬಂದೋಬಸ್ತ್ ಮಾಡಿದ್ದ ಬೆಂಗಳೂರು ನಗರ ಪೊಲೀಸರ ನೇತೃತ್ವವನ್ನು ಸ್ವತಃ ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ಅವರೇ ವಹಿಸಿದ್ದರು.</p><p>ರಾತ್ರಿ 10ರ ವರೆಗೂ ಎಂ.ಜಿ. ರಸ್ತೆ ಎಂದಿನಂತೆಯೇ ಇತ್ತು. ಆದರೆ, ನಂತರ ಜನರು ಬ್ರಿಗೇಡ್, ಚರ್ಚ್ ಸ್ಟ್ರೀಟ್ನತ್ತ ಬರಲಾರಂಭಿಸಿದರು. ಹೊಸ ವರ್ಷದ ಸಂಭ್ರಮಾಚರಣೆ ಕಳೆಗಟ್ಟಿತು. ರಾತ್ರಿ 11ರ ಸುಮಾರಿಗೆ ಕಪ್ಪು ಬಣ್ಣದ ಥಾರ್ನಲ್ಲಿ ಯುವಕರಿಬ್ಬರು ಬ್ರಿಗೇಡ್ ರಸ್ತೆಯ ಜಂಕ್ಷನ್ಗೆ ಬಂದರು.</p>.PHOTOS | ಹೊಸ ವರ್ಷದ ಸಂಭ್ರಮಾಚರಣೆ: ಕುಣಿದು ಕುಪ್ಪಳಿಸಿದ ಯುವಜನ.ಹೊಸ ವರ್ಷದ ಸಡಗರದಲ್ಲಿ ತೇಲಿದ ನಗರ: ಪಬ್, ಕ್ಲಬ್ಗಳಲ್ಲಿ ಕುಣಿದು–ನಲಿದು ಸಂಭ್ರಮ. <p>ಪರಿಶೀಲನೆ ಸಲುವಾಗಿ ಅಲ್ಲಿಗೆ ತೆರಳಿದ ಸೀಮಾಂತ್ ಕುಮಾರ್ ಸಿಂಗ್, ಕಾರಿನ ಕಿಟಕಿ ಗಾಜು ಇಳಿಸಲು ಸೂಚಿಸಿದರು. ದಾಖಲೆ ಕೇಳಿದರು. ಆಗ ಕಮಿಷನರ್ ಅವರನ್ನು ಕಂಡು ಗಾಬರಿಯಾದ ಯುವಕ, ದಾಖಲೆ ತೆಗೆಯಲು ತುಸು ತಡಬಡಾಯಿಸಿದ. ಆದರೆ, ಈ ಘಟನೆಗೆ ಸಾಕ್ಷಿಯಂತೆ ಚಾಲಕನ ಪಕ್ಕದಲ್ಲಿ ಕೂತಿದ್ದ ಯುವಕ, ಘಟನೆ ಅರಗಿಸಿಕೊಳ್ಳುವ ಮೊದಲೇ ಕಮಿಷನರ್ ಕಜ್ಜಾಯದ ಬಿಸಿ ತೋರಿಸಿದ್ದರು.</p><p>ಪೆಟ್ಟು ತಿಂದು ಪೆಚ್ಚಾದ ಯುವಕ, ‘ನನಗೆ ಹೊಡೆದಿದ್ದಾದರೂ ಏಕೆ?’ ಎಂಬ ಪ್ರಶ್ನೆಯನ್ನು ಕೇಳುತ್ತಲೇ ಇದ್ದ. </p><p>ಘಟನೆಗೆ ಸಾಕ್ಷಿಯಾದ ಪತ್ರಕರ್ತರ ಬಳಿ ತನ್ನ ಅಳಲು ತೋಡಿಕೊಂಡ ಆತ, ‘ನನಗೆ ಏಕೆ ಹೊಡೆದರು ಎಂದು ಈಗಲೂ ಗೊತ್ತಾಗುತ್ತಿಲ್ಲ. ನಾವು ಎಂ.ಜಿ. ರಸ್ತೆಗೆ ಬರ್ಬಾರ್ದಾ?’ ಎಂದು ಮರು ಪ್ರಶ್ನೆಯನ್ನಿತ್ತು, ಮತ್ತೆ ಮಂಕಾದರು.</p><p>ಮತ್ತೊಂದೆಡೆ ಯುವಕನೊಬ್ಬನ ಬ್ಯಾಗ್ ಪರಿಶೀಲಿಸಿದ ಸೀಮಾಂತ್ ಕುಮಾರ್ ಸಿಂಗ್, ಆತನ ಬಳಿ ಇದ್ದ ಕ್ಯಾಮೆರಾ ನೋಡಿ, ‘ಇದನ್ನೇಕೆ ತಂದಿದ್ದೀಯಾ? ಎಂದು ಗದರಿ, ಆತನನ್ನು ಸಂಭ್ರಮದಿಂದಲೇ ದೂರವಿಡಲು ಸಿಬ್ಬಂದಿಗೆ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>