<p><strong>ಬೆಂಗಳೂರು</strong>: ನಗರದಲ್ಲಿ ಗುರುವಾರ ಬೆಳಿಗ್ಗೆ ದಟ್ಟ ಮಂಜು ಆವರಿಸಿದ್ದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.</p>.<p>ಬೆಳಗಿನ ಜಾವ 4.30ರಿಂದಲೇ ದಟ್ಟ ಮಂಜಿನ ವಾತಾವರಣ ಕಾಣಿಸಿಕೊಂಡಿದ್ದರಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 48 ವಿಮಾನಗಳ ಸಂಚಾರ ವಿಳಂಬವಾಯಿತು.</p>.<p>ಒಂದು ವಿಮಾನ ಅತಿ ಹೆಚ್ಚು ಅಂದರೆ ಒಂದು ಗಂಟೆ 9 ನಿಮಿಷ ತಡವಾಗಿ ಬೆಂಗಳೂರಿನಿಂದ ಹೊರಟಿತು. 33 ವಿಮಾನಗಳು 15 ನಿಮಿಷ ತಡವಾಗಿ ಸಂಚಾರ ಆರಂಭಿಸಿದವು.</p>.<p>ಬೆಂಗಳೂರಿಗೆ ಬರಬೇಕಾಗಿದ್ದ ಎರಡು ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಲಾಯಿತು. ಬೆಳಿಗ್ಗೆ 7.21ಕ್ಕೆ ಮಂಗಳೂರಿನಿಂದ ಆಗಮಿಸಬೇಕಾಗಿದ್ದ ಏರ್ ಇಂಡಿಯಾ ವಿಮಾನ( ಐಎಕ್ಸ್ 2923) ಚೆನ್ನೈಗೆ, ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ(ಎಐ 2653) ಕೊಚ್ಚಿನ್ಗೆ ಮಾರ್ಗ ಬದಲಾಯಿಸಲಾಯಿತು. </p>.<p>ಬೆಳಿಗ್ಗೆ 8ರವರೆಗೂ ಇದೇ ವಾತಾವರಣ ಕಂಡು ಬಂದಿದ್ದರಿಂದ ವಿಮಾನ ಸಂಚಾರ ನಿಧಾನವಾಯಿತು. ಬೆಳಿಗ್ಗೆ 10ರ ನಂತರ ಸಂಚಾರ ಸಹಜ ಸ್ಥಿತಿಗೆ ಮರಳಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದಲ್ಲಿ ಗುರುವಾರ ಬೆಳಿಗ್ಗೆ ದಟ್ಟ ಮಂಜು ಆವರಿಸಿದ್ದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.</p>.<p>ಬೆಳಗಿನ ಜಾವ 4.30ರಿಂದಲೇ ದಟ್ಟ ಮಂಜಿನ ವಾತಾವರಣ ಕಾಣಿಸಿಕೊಂಡಿದ್ದರಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 48 ವಿಮಾನಗಳ ಸಂಚಾರ ವಿಳಂಬವಾಯಿತು.</p>.<p>ಒಂದು ವಿಮಾನ ಅತಿ ಹೆಚ್ಚು ಅಂದರೆ ಒಂದು ಗಂಟೆ 9 ನಿಮಿಷ ತಡವಾಗಿ ಬೆಂಗಳೂರಿನಿಂದ ಹೊರಟಿತು. 33 ವಿಮಾನಗಳು 15 ನಿಮಿಷ ತಡವಾಗಿ ಸಂಚಾರ ಆರಂಭಿಸಿದವು.</p>.<p>ಬೆಂಗಳೂರಿಗೆ ಬರಬೇಕಾಗಿದ್ದ ಎರಡು ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಲಾಯಿತು. ಬೆಳಿಗ್ಗೆ 7.21ಕ್ಕೆ ಮಂಗಳೂರಿನಿಂದ ಆಗಮಿಸಬೇಕಾಗಿದ್ದ ಏರ್ ಇಂಡಿಯಾ ವಿಮಾನ( ಐಎಕ್ಸ್ 2923) ಚೆನ್ನೈಗೆ, ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ(ಎಐ 2653) ಕೊಚ್ಚಿನ್ಗೆ ಮಾರ್ಗ ಬದಲಾಯಿಸಲಾಯಿತು. </p>.<p>ಬೆಳಿಗ್ಗೆ 8ರವರೆಗೂ ಇದೇ ವಾತಾವರಣ ಕಂಡು ಬಂದಿದ್ದರಿಂದ ವಿಮಾನ ಸಂಚಾರ ನಿಧಾನವಾಯಿತು. ಬೆಳಿಗ್ಗೆ 10ರ ನಂತರ ಸಂಚಾರ ಸಹಜ ಸ್ಥಿತಿಗೆ ಮರಳಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>