ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ಸುಲಿಗೆ, ವೇಶ್ಯಾವಾಟಿಕೆ, ಕಳ್ಳತನ: ಮೆಜೆಸ್ಟಿಕ್‌ನಲ್ಲಿ ಅನೈತಿಕ ಚಟುವಟಿಕೆಯ ಹಾವಳಿ

Published : 2 ಫೆಬ್ರುವರಿ 2026, 18:33 IST
Last Updated : 2 ಫೆಬ್ರುವರಿ 2026, 19:30 IST
ಫಾಲೋ ಮಾಡಿ
Comments
ಗಸ್ತು ಹೆಚ್ಚಿಸಿ
‘ಮೆಜೆಸ್ಟಿಕ್‌ನಲ್ಲಿ ಉಪ್ಪಾರಪೇಟೆ ಹೊರಠಾಣೆ ಇದೆ. ಇಲ್ಲಿ ಹಿಂದೆ ‘ಒನಕೆ ಓಬವ್ವ’ ಪಡೆ ಇತ್ತು. ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದ ಕಾರಣ ಅಕ್ರಮ ಪ್ರಕರಣಗಳು ಸ್ವಲ್ಪ ನಿಯಂತ್ರಣವಾಗಿತ್ತು. ಈಗ ಪಡೆ ನಿಸ್ತೇಜವಾಗಿದೆ. ಪೊಲೀಸರು ಗಸ್ತು ಹೆಚ್ಚು ಮಾಡಬೇಕು. ಮಫ್ತಿಯಲ್ಲಿ ತಿರುಗಾಡಬೇಕು. ಹೊಯ್ಸಳ ಚೀತಾಗಳನ್ನು ಬಳಸಿಕೊಳ್ಳಬೇಕು. ನಾವೇ ಕುಟುಂಬ ಸಹಿತ ಅಡ್ಡಾಡಲು ನಾಚಿಕೆ ಪಟ್ಟುಕೊಳ್ಳುವ ಪರಿಸ್ಥಿತಿ ಇದ್ದು ಸಬ್‌ ಇನ್‌ಸ್ಪೆಕ್ಟರ್‌ಗಳ ಸಂಖ್ಯೆ ಹೆಚ್ಚಿಸಿ ಮನಸ್ಸಿಟ್ಟು ಕೆಲಸ ಮಾಡಿದರೆ ಪರಿಸ್ಥಿತಿ ಸುಧಾರಣೆ ಮಾಡಬಹುದು’ ಎಂದು ಪೊಲೀಸರೊಬ್ಬರು ಹೇಳಿದರು.
ನಿಯಂತ್ರಣಕ್ಕೆ ಕ್ರಮ
ಸುಲಿಗೆಗೆ ಸಂಬಂಧಿಸಿದಂತೆ ಕಳೆದ ಒಂದು ವಾರದಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಮೆಜೆಸ್ಟಿಕ್‌ ಪಾದಚಾರಿ ಮೇಲ್ಸೇತುವೆಯಲ್ಲಿ ದೀರ್ಘ ಅವಧಿ ಯಾರೂ ನಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ. ಯಾರಾದರೂ ನಿಂತಿದ್ದರೆ ಮಹಿಳಾ ಪೊಲೀಸ್‌ ಸಿಬ್ಬಂದಿಯನ್ನು ಬಳಸಿ ಕಳುಹಿಸಲಾಗುತ್ತದೆ.  ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಮೆಜೆಸ್ಟಿಕ್‌ ಸುತ್ತಮುತ್ತ ಅಪರಾಧ ಪ್ರಕರಣಗಳ ತಡೆಯಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಎನ್‌. ಯತೀಶ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT