ಬೆಂಗಳೂರು: ವೈವಾಹಿಕ ಜಾಲತಾಣ ಮೂಲಕ ಯುವತಿಯೊಬ್ಬರನ್ನು ಪರಿಚಯಿಸಿಕೊಂಡ ವರನೊಬ್ಬ, ವಧು ನೋಡುವ ಶಾಸ್ತ್ರ ಮುಗಿಸಿ ₹5.20 ಲಕ್ಷ ಪಡೆದುಕೊಂಡು ಪರಾರಿಯಾಗಿದ್ದಾನೆ.
ಈ ಸಂಬಂಧ ನೊಂದ 29 ವರ್ಷದ ಯುವತಿ, ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಮಂಡ್ಯದವರೆಂದು ಹೇಳಲಾಗಿರುವ ಆರೋಪಿ ಮಧುಸೂದನ್ (32) ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
‘ವರನನ್ನು ಹುಡುಕುತ್ತಿದ್ದ ಯುವತಿ, ವೈವಾಹಿಕ ಜಾಲತಾಣದಲ್ಲಿ ಖಾತೆ ತೆರೆದು ಸ್ವ–ವಿವರ ನಮೂದಿಸಿದ್ದರು. ಮೇ 29ರಂದು ಪರಿಚಯವಾಗಿದ್ದ ಮಧುಸೂದನ್, ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಮೇ 31ರಂದು ಯುವತಿ ಮನೆಗೂ ಹೋಗಿ ವಧು ನೋಡಿಕೊಂಡು ಹೋಗಿದ್ದರು. ಈ ಸಂಗತಿಯನ್ನು ಯುವತಿಯೇ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಅನಾಥರೆಂದು ಹೇಳಿದ್ದ ಆರೋಪಿ, ನಗರದಲ್ಲಿ ಹೊಸ ಮನೆ ಖರೀದಿಸುವ ನೆಪದಲ್ಲಿ ಯುವತಿಯಿಂದ ₹ 5.20 ಲಕ್ಷ ಪಡೆದಿದ್ದ. ನಂತರ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ’ ಎಂದೂ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.