‘ಹಣ ಪಡೆದ ನಂತರ ಆರೋಪಿಗಳು, ಸಾಲವನ್ನು ವಾಪಸು ಕೊಡಿಸಿರಲಿಲ್ಲ. ಪುನಃ ಹಣ ಖರ್ಚು ಮಾಡಬೇಕೆಂದು ಹೇಳಲಾರಂಭಿಸಿದ್ದರು. ಅದರಿಂದ ಅನುಮಾನಗೊಂಡ ರುಕ್ಮಿಣಿ, ಹಣವನ್ನು ವಾಪಸು ಕೊಡುವಂತೆ ಕೇಳಿದ್ದರು. ಅವರಿಗೆ ಬೆದರಿಕೆ ಹಾಕಿದ್ದ ಆರೋಪಿ ಭವಾನಿ, ‘ನಿಮಗೆ ಹಣ ವಾಪಸ್ ಕೊಡುವುದಿಲ್ಲ. ಏನಾದರೂ ಮಾಡಿಕೊಳ್ಳಿ. ಯಾರಿಗೆ ಬೇಕಾದರೂ ದೂರು ಕೊಡಿ’ ಎಂದು ಬೆದರಿಸಿದ್ದಳು. ನೊಂದ ರುಕ್ಮಿಣಿ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಪೊಲೀಸರು ವಿವರಿಸಿದರು.