<p><strong>ಔರಾದ್:</strong> ತಾಲ್ಲೂಕಿನ ಸಂತಪುರ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯಿತಿ ಆಗಿರುವ ಈ ಊರಿಗೆ ಅನೇಕ ಯೋಜನೆ ಜಾರಿ ಮಾಡಿ ಕೋಟಿಗಟ್ಟಲೇ ಹಣ ಖರ್ಚು ಮಾಡಿದರೂ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಗದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಸಂತಪುರ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಸೇರಿದಂತೆ ವಿವಿಧ ಸಮುದಾಯದ ಜನರು ವಾಸಿಸುವ ವಾರ್ಡ್ 1 ಹಾಗೂ 2ರಲ್ಲಿ ಕಳೆದ ಎರಡು ವಾರದಿಂದ ನೀರು ಬಾರದೇ ಜನ ತಾಳ್ಮೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ವಾರ್ಡ್ 2ರ ಮಹಿಳೆಯರು ಮಂಗಳವಾರ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ತಮಗೆ ಕುಡಿಯಲು ನೀರು ಕೊಡಿ ಎಂದು ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ.</p>.<p>’ನಮ್ಮ ಗಲ್ಲಿಗೆ ವಾರಕ್ಕೊಮ್ಮೆಯೂ ಸರಿಯಾಗಿ ನೀರು ಬರುವುದಿಲ್ಲ. ಬಂದರೂ ನಾಲ್ಕೈದು ಕೊಡ ಸಿಗುತ್ತವೆ. ಇದರಿಂದಾಗಿ ದಿನ ಬಳಕೆ ಹಾಗೂ ಕುಡಿಯಲು ನೀರಿಗಾಗಿ ನಾವು ಪರದಾಡಬೇಕಿದೆ’ ಎಂದು ಪ್ರತಿಭಟನಾ ನಿರತ ಮಹಿಳೆಯರು ಗೋಳು ತೋಡಿಕೊಂಡರು.</p>.<p>ನೀರು ಬಂದಾಗ ಕೆಲವರು ಮೋಟಾರ್ ಬಳಸುತ್ತಿರುವುದರಿಂದ ಸಿಗುವ ಒಂದೆರಡು ಕೊಡ ನೀರು ಸಿಗದಂತಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.</p>.<p>’24 ಗಂಟೆ ನಿರಂತರ ನೀರು ಪೂರೈಸುವುದಾಗಿ ಹೇಳಿ ರಸ್ತೆ ಅಗೆದು ಪೈಪ್ ಹಾಕಿದ್ದಾರೆ. ಆದರೆ, ಅದರಿಂದ ನಮಗೆ ಹನಿ ನೀರು ಬಂದಿಲ್ಲ’ ಎಂದು ಸಂತಪುರನ ರೈತ ಮುಖಂಡ ಪ್ರಭುದಾಸ ಅವರು ಜೆಜೆಎಂ ಕಾಮಗಾರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.</p>.<p>’ವಾರ್ಡ್ 1 ಹಾಗೂ 2ರಲ್ಲಿ ನೀರಿನ ಮೂಲ ಗುರುತಿಸಿ ಹೊಸದಾಗಿ ಕೊಳವೆ ಬಾವಿ ಕೊರೆದು ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ನಾವು ಬೀದರ್-ಔರಾದ್ ರಸ್ತೆ ಬಂದ್ ಮಾಡಿ ಪ್ರತಿಭಟಿಸುತ್ತೇವೆ’ ಎಂದು ಭೀಮವಾದ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ತುಕಾರಾಮ ಹಸನ್ಮುಖಿ ಎಚ್ಚರಿಸಿದರು.</p>.<p>’ಗ್ರಾಮದಲ್ಲಿ ನೀರಿನ ಮೂಲ ಬತ್ತಿ ಹೋಗಿವೆ. ಜೆಜೆಎಂ ಯೋಜನೆಯಲ್ಲಿ ಕೊರೆದ ತೆರೆದ ಬಾವಿಯಲ್ಲೂ ನೀರಿಲ್ಲ. ಹೀಗಾಗಿ ಕೆಲ ವಾರ್ಡ್ಗಳಿಗೆ ನೀರಿನ ಕೊರತೆಯಾಗಿದೆ. ವಾರ್ಡ್ 1ರಲ್ಲಿ ಸದ್ಯ ಟ್ಯಾಂಕರ್ ನೀರು ಪೂರೈಸುತ್ತಿದ್ದೇವೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ ತಿಳಿಸಿದ್ದಾರೆ.</p>.<p>ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪೂರ್ಣ ಆಗಿಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ. ಬಾವಿ ಬಳಿ ಹೊಸದಾಗಿ ಕೊಳವೆ ಬಾವಿ ಕೊರೆದು ಕುಡಿಯವ ನೀರಿನ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್:</strong> ತಾಲ್ಲೂಕಿನ ಸಂತಪುರ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯಿತಿ ಆಗಿರುವ ಈ ಊರಿಗೆ ಅನೇಕ ಯೋಜನೆ ಜಾರಿ ಮಾಡಿ ಕೋಟಿಗಟ್ಟಲೇ ಹಣ ಖರ್ಚು ಮಾಡಿದರೂ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಗದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಸಂತಪುರ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಸೇರಿದಂತೆ ವಿವಿಧ ಸಮುದಾಯದ ಜನರು ವಾಸಿಸುವ ವಾರ್ಡ್ 1 ಹಾಗೂ 2ರಲ್ಲಿ ಕಳೆದ ಎರಡು ವಾರದಿಂದ ನೀರು ಬಾರದೇ ಜನ ತಾಳ್ಮೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ವಾರ್ಡ್ 2ರ ಮಹಿಳೆಯರು ಮಂಗಳವಾರ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ತಮಗೆ ಕುಡಿಯಲು ನೀರು ಕೊಡಿ ಎಂದು ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ.</p>.<p>’ನಮ್ಮ ಗಲ್ಲಿಗೆ ವಾರಕ್ಕೊಮ್ಮೆಯೂ ಸರಿಯಾಗಿ ನೀರು ಬರುವುದಿಲ್ಲ. ಬಂದರೂ ನಾಲ್ಕೈದು ಕೊಡ ಸಿಗುತ್ತವೆ. ಇದರಿಂದಾಗಿ ದಿನ ಬಳಕೆ ಹಾಗೂ ಕುಡಿಯಲು ನೀರಿಗಾಗಿ ನಾವು ಪರದಾಡಬೇಕಿದೆ’ ಎಂದು ಪ್ರತಿಭಟನಾ ನಿರತ ಮಹಿಳೆಯರು ಗೋಳು ತೋಡಿಕೊಂಡರು.</p>.<p>ನೀರು ಬಂದಾಗ ಕೆಲವರು ಮೋಟಾರ್ ಬಳಸುತ್ತಿರುವುದರಿಂದ ಸಿಗುವ ಒಂದೆರಡು ಕೊಡ ನೀರು ಸಿಗದಂತಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.</p>.<p>’24 ಗಂಟೆ ನಿರಂತರ ನೀರು ಪೂರೈಸುವುದಾಗಿ ಹೇಳಿ ರಸ್ತೆ ಅಗೆದು ಪೈಪ್ ಹಾಕಿದ್ದಾರೆ. ಆದರೆ, ಅದರಿಂದ ನಮಗೆ ಹನಿ ನೀರು ಬಂದಿಲ್ಲ’ ಎಂದು ಸಂತಪುರನ ರೈತ ಮುಖಂಡ ಪ್ರಭುದಾಸ ಅವರು ಜೆಜೆಎಂ ಕಾಮಗಾರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.</p>.<p>’ವಾರ್ಡ್ 1 ಹಾಗೂ 2ರಲ್ಲಿ ನೀರಿನ ಮೂಲ ಗುರುತಿಸಿ ಹೊಸದಾಗಿ ಕೊಳವೆ ಬಾವಿ ಕೊರೆದು ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ನಾವು ಬೀದರ್-ಔರಾದ್ ರಸ್ತೆ ಬಂದ್ ಮಾಡಿ ಪ್ರತಿಭಟಿಸುತ್ತೇವೆ’ ಎಂದು ಭೀಮವಾದ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ತುಕಾರಾಮ ಹಸನ್ಮುಖಿ ಎಚ್ಚರಿಸಿದರು.</p>.<p>’ಗ್ರಾಮದಲ್ಲಿ ನೀರಿನ ಮೂಲ ಬತ್ತಿ ಹೋಗಿವೆ. ಜೆಜೆಎಂ ಯೋಜನೆಯಲ್ಲಿ ಕೊರೆದ ತೆರೆದ ಬಾವಿಯಲ್ಲೂ ನೀರಿಲ್ಲ. ಹೀಗಾಗಿ ಕೆಲ ವಾರ್ಡ್ಗಳಿಗೆ ನೀರಿನ ಕೊರತೆಯಾಗಿದೆ. ವಾರ್ಡ್ 1ರಲ್ಲಿ ಸದ್ಯ ಟ್ಯಾಂಕರ್ ನೀರು ಪೂರೈಸುತ್ತಿದ್ದೇವೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ ತಿಳಿಸಿದ್ದಾರೆ.</p>.<p>ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪೂರ್ಣ ಆಗಿಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ. ಬಾವಿ ಬಳಿ ಹೊಸದಾಗಿ ಕೊಳವೆ ಬಾವಿ ಕೊರೆದು ಕುಡಿಯವ ನೀರಿನ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>