ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಎಡೆಯಾರಳ್ಳಿ ಕಾರಿಡಾರ್ ಬರುತ್ತದೆ. ಜಿಲ್ಲೆಯಲ್ಲೇ ಅತಿ ಮುಖ್ಯವಾದ ಕಾರಿಡಾರ್ (ವನ್ಯ ಜೀವಿ ಪಥ) ಎಂದು ಗುರುತಿಸಲಾಗಿರುವ ಎಡೆಯಾರಳ್ಳಿ ಕಾರಿಡಾರ್ನಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿತ್ತು. ಆದರೆ ಕೆಲವು ಕಿಡಿಗೇಡಿಗಳು ಉಬ್ಬುಗಳನ್ನು ಕಿತ್ತು ಹಾಕಿದ್ದಾರೆ.