<p><strong>ಬಾಗೇಪಲ್ಲಿ:</strong> ತಾಲ್ಲೂಕಿನ ಪರಗೋಡು ಬಳಿಯ ಚಿತ್ರಾವತಿ ಬ್ಯಾರೇಜು ಗುರುವಾರ ರಾತ್ರಿ ಕೋಡಿ ಹರಿಯಿತು. ಶುಕ್ರವಾರ ಸಂಜೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಾಗಿನ ಅರ್ಪಿಸಿದರು.</p>.<p>ತಾಲ್ಲೂಕಿನ ಪರಗೋಡು ಸುತ್ತಮುತ್ತಲೂ ಕಳೆದ ಒಂದು ವಾರದಿಂದ ಬಿದ್ದ ಭಾರಿ ಮಳೆಗೆ ಚಿತ್ರಾವತಿ ಬ್ಯಾರೇಜಿನಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಶುಕ್ರವಾರ ಬೆಳಿಗ್ಗೆ ಕೋಡಿ ಹರಿದಿದೆ. ಬ್ಯಾರೇಜಿನಲ್ಲಿ 0.7 ಟಿಎಂಸಿ ನೀರು ಸಂಗ್ರಹ ಆಗಿದೆ.</p>.<p>ತಾಲ್ಲೂಕಿನ ಗಡಿದಂ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಅರ್ಚಕ ಅಶ್ವತ್ಥಪ್ಪ ಚಿತ್ರಾವತಿ ಬ್ಯಾರೇಜಿನಲ್ಲಿ ಪೂಜೆ ಸಲ್ಲಿಸಿದರು. </p>.<p>ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಹಶೀಲ್ದಾರ್ ಮನೀಷಾ ಎನ್.ಪತ್ರಿ, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತಾನಾಯ್ಡು, ಪ್ರಶಾಂತ್ ವರ್ಣಿ, ಅಮೃತಸುಬ್ಬಾರೆಡ್ಡಿ, ನಾಗಮಣಿ ಸೇರಿದಂತೆ ಗಣ್ಯರು ಚಿತ್ರಾವತಿ ಬ್ಯಾರೇಜಿನಲ್ಲಿ ನೀರಿನ ಅರಿಶಿಣ, ಕುಂಕುಮ, ಹೂವು, ಎಲೆ, ಅಡಿಕೆ, ಹಣ್ಣು ಸಮರ್ಪಿಸಿದರು. </p>.<p>ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಪ್ರತಿ ವರ್ಷವು ಕ್ಷೇತ್ರದಲ್ಲಿ ಮಳೆ ಆಗಿ, ಕೆರೆ, ಕುಂಟೆಳು, ಕಾಲುವೆ ಹರಿಯುತ್ತಿವೆ. ಇದರಂತೆ ಚಿತ್ರಾವತಿ ಬ್ಯಾರೇಜಿನಲ್ಲಿ ಶುಕ್ರವಾರದ ದಿನ ಕೋಡಿ ಹರಿದಿರುವುದು ಈ ಭಾಗದ ಜನರಿಗೆ ಸಂತಸ ಮೂಡಿಸಿದೆ. ನೀರಿನ ಒಳಹರಿವಿನಿಂದ ಅಂತರ್ಜಲ ಮಟ್ಟ ಹೆಚ್ಚಿಸಿದೆ. ಪಟ್ಟಣಕ್ಕೆ 2 ವರ್ಷಗಳಷ್ಟು ಕುಡಿಯುವ ನೀರು ಕಲ್ಪಿಸಬಹುದು. ಶುದ್ಧಿಕರಣ ಘಟಕದಲ್ಲಿ ಕೆಲ ಪೈಪ್, ಪಂಪ್, ಮೋಟಾರ್ಗಳನ್ನು ದುರಸ್ತಿ ಮಾಡಿಸಿ, ಪಟ್ಟಣದ ಮನೆಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.</p>.<p>ಕ್ಷೇತ್ರದಲ್ಲಿ ಬಿದ್ದ ಮಳೆಯಿಂದ ಕೆಲ ರಸ್ತೆ, ಮನೆಗಳು, ಶೆಡ್ ಹಾಗೂ ಬೆಳೆ ಹಾನಿ ಆಗಿದೆ. 3 ದಿನಗಳ ಒಳಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಕಲ್ಪಿಸಲಾಗುವುದು. ಕುಸಿತವಾದ ಸೇತುವೆಗಳನ್ನು ರಿಪೇರಿ ಮಾಡಿಸಲಾಗುವುದು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗೇಪಲ್ಲಿ:</strong> ತಾಲ್ಲೂಕಿನ ಪರಗೋಡು ಬಳಿಯ ಚಿತ್ರಾವತಿ ಬ್ಯಾರೇಜು ಗುರುವಾರ ರಾತ್ರಿ ಕೋಡಿ ಹರಿಯಿತು. ಶುಕ್ರವಾರ ಸಂಜೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಾಗಿನ ಅರ್ಪಿಸಿದರು.</p>.<p>ತಾಲ್ಲೂಕಿನ ಪರಗೋಡು ಸುತ್ತಮುತ್ತಲೂ ಕಳೆದ ಒಂದು ವಾರದಿಂದ ಬಿದ್ದ ಭಾರಿ ಮಳೆಗೆ ಚಿತ್ರಾವತಿ ಬ್ಯಾರೇಜಿನಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಶುಕ್ರವಾರ ಬೆಳಿಗ್ಗೆ ಕೋಡಿ ಹರಿದಿದೆ. ಬ್ಯಾರೇಜಿನಲ್ಲಿ 0.7 ಟಿಎಂಸಿ ನೀರು ಸಂಗ್ರಹ ಆಗಿದೆ.</p>.<p>ತಾಲ್ಲೂಕಿನ ಗಡಿದಂ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಅರ್ಚಕ ಅಶ್ವತ್ಥಪ್ಪ ಚಿತ್ರಾವತಿ ಬ್ಯಾರೇಜಿನಲ್ಲಿ ಪೂಜೆ ಸಲ್ಲಿಸಿದರು. </p>.<p>ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಹಶೀಲ್ದಾರ್ ಮನೀಷಾ ಎನ್.ಪತ್ರಿ, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತಾನಾಯ್ಡು, ಪ್ರಶಾಂತ್ ವರ್ಣಿ, ಅಮೃತಸುಬ್ಬಾರೆಡ್ಡಿ, ನಾಗಮಣಿ ಸೇರಿದಂತೆ ಗಣ್ಯರು ಚಿತ್ರಾವತಿ ಬ್ಯಾರೇಜಿನಲ್ಲಿ ನೀರಿನ ಅರಿಶಿಣ, ಕುಂಕುಮ, ಹೂವು, ಎಲೆ, ಅಡಿಕೆ, ಹಣ್ಣು ಸಮರ್ಪಿಸಿದರು. </p>.<p>ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಪ್ರತಿ ವರ್ಷವು ಕ್ಷೇತ್ರದಲ್ಲಿ ಮಳೆ ಆಗಿ, ಕೆರೆ, ಕುಂಟೆಳು, ಕಾಲುವೆ ಹರಿಯುತ್ತಿವೆ. ಇದರಂತೆ ಚಿತ್ರಾವತಿ ಬ್ಯಾರೇಜಿನಲ್ಲಿ ಶುಕ್ರವಾರದ ದಿನ ಕೋಡಿ ಹರಿದಿರುವುದು ಈ ಭಾಗದ ಜನರಿಗೆ ಸಂತಸ ಮೂಡಿಸಿದೆ. ನೀರಿನ ಒಳಹರಿವಿನಿಂದ ಅಂತರ್ಜಲ ಮಟ್ಟ ಹೆಚ್ಚಿಸಿದೆ. ಪಟ್ಟಣಕ್ಕೆ 2 ವರ್ಷಗಳಷ್ಟು ಕುಡಿಯುವ ನೀರು ಕಲ್ಪಿಸಬಹುದು. ಶುದ್ಧಿಕರಣ ಘಟಕದಲ್ಲಿ ಕೆಲ ಪೈಪ್, ಪಂಪ್, ಮೋಟಾರ್ಗಳನ್ನು ದುರಸ್ತಿ ಮಾಡಿಸಿ, ಪಟ್ಟಣದ ಮನೆಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.</p>.<p>ಕ್ಷೇತ್ರದಲ್ಲಿ ಬಿದ್ದ ಮಳೆಯಿಂದ ಕೆಲ ರಸ್ತೆ, ಮನೆಗಳು, ಶೆಡ್ ಹಾಗೂ ಬೆಳೆ ಹಾನಿ ಆಗಿದೆ. 3 ದಿನಗಳ ಒಳಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಕಲ್ಪಿಸಲಾಗುವುದು. ಕುಸಿತವಾದ ಸೇತುವೆಗಳನ್ನು ರಿಪೇರಿ ಮಾಡಿಸಲಾಗುವುದು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>