‘ಯುದ್ಧ ಆರಂಭವಾದ ನಂತರ ಮೂವರು ಸ್ನೇಹಿತರು ಜೊತೆಗೂಡಿ ಬಂಕರ್ನಲ್ಲಿ ದಿನ ಕಳೆದೆವು. ನಂತರ ₹ 6,000 ದಷ್ಟು ಪಾವತಿಸಿ ರಷ್ಯಾ ಗಡಿಗೆ ಬಂದು ನಂತರ ರೈಲಿನಲ್ಲಿ ಹಾರ್ಕಿವ್ನಿಂದ ಲಿವಿವ್ವರೆಗೆ ನಿಂತುಕೊಂಡೇ ಪ್ರಯಾಣ ಮಾಡಿದೆವು. ಅಲ್ಲಿಂದ ಪೋಲೆಂಡ್ ಗಡಿವರೆಗೆ ನಡೆದು ಅಲ್ಲಿ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಒಂದು ದಿನ ಇದ್ದೆವು. ನಂತರ ಭಾರತ ಸರ್ಕಾರ ಕಲ್ಪಿಸಿದ್ದ ಏರ್ಲಿಫ್ಟ್ ಮೂಲಕ ನವದೆಹಲಿ ತಲುಪಿ ಅಲ್ಲಿನ ಕರ್ನಾಟಕ ಭವನದಲ್ಲಿ ಉಳಿದು ನಂತರ ಬೆಂಗಳೂರು ಮೂಲಕ ಕಡೂರು ತಲುಪಿದೆ. ದೇಶದ ಬಗ್ಗೆ ಕೆಲವರು ಅಪಪ್ರಚಾರ ನಡೆಸಿದ್ದಾರೆ. ಉಕ್ರೇನ್ನಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಭಾರತ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಂಡಿದೆ ಎಂಬುದಕ್ಕೆ ನಾನು ಬಂದಿರುವುದೇ ಸಾಕ್ಷಿ’ ಎಂದರು.