<p><strong>ಕಡೂರು:</strong> ವೀರಭದ್ರಸ್ವಾಮಿ ರಥೋತ್ಸವದ ಪ್ರಯುಕ್ತ ಪಟ್ಟಣದ ಗ್ರಾಮದೇವತೆ ಶ್ರೀಕೆಂಚಾಂಬ ದೇವಿಯವರ ಸಿಡಿಸೇವೆ ಮಹೋತ್ಸವವು ಬುಧವಾರ ಸಂಭ್ರಮದಿಂದ ಜರುಗಿತು. </p>.<p>ದೇವಿಯವರ ಉತ್ಸವ ಮೂರ್ತಿಯು ಪಟ್ಟಣದ ಮನೆಗಳಿಗೆ ತೆರಳಿ ಸಿಡಿ ಸೇವೆಗಾಗಿ ಗುರುತಿಸಿದ ಮಕ್ಕಳನ್ನು ಕರೆತಂದಿತು. ಹರಕೆಯಂತೆ ಪೋಷಕರು ಮಕ್ಕಳ ಸಿಡಿಸೇವೆ ಅರ್ಪಿಸಿದರು.</p>.<p>ಸಿಡಿ ಮಹೋತ್ಸವದಲ್ಲಿ ಕೆಂಚಾಂಬದೇವಿ, ವೀರಭದ್ರಸ್ವಾಮಿ, ಮಲ್ಲೇಶ್ವರದ ಸ್ವರ್ಣಾಂಬ ದೇವಿ, ಬನಶಂಕರಿ, ಚೌಡ್ಲಾಪುರದ ಕರಿಯಮ್ಮ, ಭದ್ರಕಾಳಮ್ಮ ಪಾಲ್ಗೊಂಡಿದ್ದವು.</p>.<p>ಸಿಡಿ ಸೇವೆಗೆ ಒಳಪಡುವ ಮಕ್ಕಳನ್ನು ಕಲಶದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಮಧ್ಯಾಹ್ನ 1.15ಕ್ಕೆ ಕೆಂಚಾಂಬ ದೇವರನ್ನು ಅರ್ಚಕರು ಸಿಡಿ ಆಡಿಸಿದ ನಂತರ ಮಕ್ಕಳ ಸಿಡಿಸೇವೆ ನಡೆಯಿತು. </p>.<p>ಸಿಡಿ ಕಾರ್ಯವನ್ನು ಪಟ್ಟಣದ ಜನಮಿತ್ರ ದಿ.ನಾರಾಯಣಪ್ಪ ಕುಟುಂಬದವರಾದ ಧರಣಿಪಾಲ್ ತಮ್ಮ ಮನೆಯಿಂದ ಸಿಡಿ ಕೊಂಡಿಯನ್ನು ಮೆರವಣಿಗೆಯಲ್ಲಿ ತಂದು ಸಿಡಿ ಸೇವೆ ಅರ್ಪಿಸಿದರು. ಸಿಡಿಮರದಲ್ಲಿ ಕುಳಿತು ಬ್ಯಾಗಡೇಹಳ್ಳಿಯ ರಾಮಣ್ಣ ವಂಶಸ್ಥರು ಸಿಡಿ ಸೇವೆ ಸಲ್ಲಿಸಿದರು.</p>.<p>ಈ ಸಂದರ್ಭದಲ್ಲಿ 12 ಹರಿವಾಣದ ಗುಡಿಕಟ್ಟಿನ ಸದಸ್ಯರು, ದೇವಾಲಯದ ಅರ್ಚಕರು, ಮಹಿಳೆಯರು ಮತ್ತು ಮಕ್ಕಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು:</strong> ವೀರಭದ್ರಸ್ವಾಮಿ ರಥೋತ್ಸವದ ಪ್ರಯುಕ್ತ ಪಟ್ಟಣದ ಗ್ರಾಮದೇವತೆ ಶ್ರೀಕೆಂಚಾಂಬ ದೇವಿಯವರ ಸಿಡಿಸೇವೆ ಮಹೋತ್ಸವವು ಬುಧವಾರ ಸಂಭ್ರಮದಿಂದ ಜರುಗಿತು. </p>.<p>ದೇವಿಯವರ ಉತ್ಸವ ಮೂರ್ತಿಯು ಪಟ್ಟಣದ ಮನೆಗಳಿಗೆ ತೆರಳಿ ಸಿಡಿ ಸೇವೆಗಾಗಿ ಗುರುತಿಸಿದ ಮಕ್ಕಳನ್ನು ಕರೆತಂದಿತು. ಹರಕೆಯಂತೆ ಪೋಷಕರು ಮಕ್ಕಳ ಸಿಡಿಸೇವೆ ಅರ್ಪಿಸಿದರು.</p>.<p>ಸಿಡಿ ಮಹೋತ್ಸವದಲ್ಲಿ ಕೆಂಚಾಂಬದೇವಿ, ವೀರಭದ್ರಸ್ವಾಮಿ, ಮಲ್ಲೇಶ್ವರದ ಸ್ವರ್ಣಾಂಬ ದೇವಿ, ಬನಶಂಕರಿ, ಚೌಡ್ಲಾಪುರದ ಕರಿಯಮ್ಮ, ಭದ್ರಕಾಳಮ್ಮ ಪಾಲ್ಗೊಂಡಿದ್ದವು.</p>.<p>ಸಿಡಿ ಸೇವೆಗೆ ಒಳಪಡುವ ಮಕ್ಕಳನ್ನು ಕಲಶದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಮಧ್ಯಾಹ್ನ 1.15ಕ್ಕೆ ಕೆಂಚಾಂಬ ದೇವರನ್ನು ಅರ್ಚಕರು ಸಿಡಿ ಆಡಿಸಿದ ನಂತರ ಮಕ್ಕಳ ಸಿಡಿಸೇವೆ ನಡೆಯಿತು. </p>.<p>ಸಿಡಿ ಕಾರ್ಯವನ್ನು ಪಟ್ಟಣದ ಜನಮಿತ್ರ ದಿ.ನಾರಾಯಣಪ್ಪ ಕುಟುಂಬದವರಾದ ಧರಣಿಪಾಲ್ ತಮ್ಮ ಮನೆಯಿಂದ ಸಿಡಿ ಕೊಂಡಿಯನ್ನು ಮೆರವಣಿಗೆಯಲ್ಲಿ ತಂದು ಸಿಡಿ ಸೇವೆ ಅರ್ಪಿಸಿದರು. ಸಿಡಿಮರದಲ್ಲಿ ಕುಳಿತು ಬ್ಯಾಗಡೇಹಳ್ಳಿಯ ರಾಮಣ್ಣ ವಂಶಸ್ಥರು ಸಿಡಿ ಸೇವೆ ಸಲ್ಲಿಸಿದರು.</p>.<p>ಈ ಸಂದರ್ಭದಲ್ಲಿ 12 ಹರಿವಾಣದ ಗುಡಿಕಟ್ಟಿನ ಸದಸ್ಯರು, ದೇವಾಲಯದ ಅರ್ಚಕರು, ಮಹಿಳೆಯರು ಮತ್ತು ಮಕ್ಕಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>