<p>ರವಿಕುಮಾರ್ ಶೆಟ್ಟಿಹಡ್ಲು</p>.<p><strong>ಕೊಪ್ಪ</strong>: ತಾಲ್ಲೂಕಿನ ಹರಿಹರಪುರದ ರಾಮಾನಂದ ಸರಸ್ವತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿಯುವ ಆತಂಕ ಎದುರಾಗಿದೆ.</p>.<p>1961ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ ಪ್ರಸ್ತುತ 110 ವಿದ್ಯಾರ್ಥಿಗಳು ವ್ಯಾಂಸಗ ಮಾಡುತ್ತಿದ್ದಾರೆ. ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳು ಇದೆ. ಬಹುತೇಕ ಕೊಠಡಿಗಳು ಸೋರುತ್ತಿದ್ದು, ಅನಿವಾರ್ಯವಾಗಿ ನಿತ್ಯ ಈ ಕೊಠಡಿಗಳಲ್ಲೇ ಪಾಠ ಪ್ರವಚನ ನಡೆಸುವಂತಾಗಿದೆ.</p>.<p>ದೊಡ್ಡ ಕೊಠಡಿಯಲ್ಲಿ ಚಾವಣಿ ಕುಸಿಯುವ ಹಂತಕ್ಕೆ ತಲುಪಿದೆ. ಪಕಾಸು, ರೀಪುಗಳು ಮುರಿದಿವೆ. ಚಾವಣಿ ಕುಸಿಯದಂತೆ ಕಬ್ಬಿಣದ ಸೆಂಟ್ರಿಂಗ್ ಕಂಬ ನಿಲ್ಲಿಸಲಾಗಿದೆ. ಈ ಕೊಠಡಿಗೆ ಹೊಂದಿಕೊಂಡಿರುವ 1ನೇ ತರಗತಿ, 6ನೇ ತರಗತಿ, 3ನೇ ತರಗತಿ ಕೊಠಡಿ ಗೋಡೆಗಳು ಬಿರುಕು ಬಿಟ್ಟಿದೆ. ಹೆಂಚುಗಳು ಅಲ್ಲಲ್ಲಿ ಒಡೆದಿದ್ದು ಮಳೆ ನೀರು ಗೋಡೆ ಮೇಲೆ, ವಿದ್ಯಾರ್ಥಿಗಳ ಮೇಲೆ ಸೋರುತ್ತಿದೆ.</p>.<p>ಇತ್ತೀಚೆಗೆ ಕಾರಿಡಾರ್ನ ಮೂಲೆಯಲ್ಲಿ ಪಿಲ್ಲರ್ ಕಂಬವೊಂದರ ಗಾರೆ ಬಾಯ್ತೆರೆದಿತ್ತು. ಇದನ್ನು ಗಮನಿಸಿದ ಶಿಕ್ಷಕರು ಸಿಮೆಂಟ್ ಪ್ಯಾಚ್ ವರ್ಕ್ ಮಾಡಿಸಿದ್ದಾರೆ. ಇದ್ದಕ್ಕಿದ್ದಂತೆ ಮತ್ತೊಮ್ಮೆ ಗಾರೆ ಕಿತ್ತು ಬಂದಾಗ ಪಕ್ಕದ ದೊಡ್ಡ ಕೊಠಡಿ ಚಾವಣಿ ಕುಸಿಯುವ ಹಂತಕ್ಕೆ ತಲುಪಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಶಿಕ್ಷಕರು ಇಲಾಖೆ ಗಮನಕ್ಕೆ ತಂದಿದ್ದಾರೆ.</p>.<p>ಶಾಲಾಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿಗಳು, ದಾನಿಗಳಿಂದ ಶಾಲೆಯಲ್ಲಿ ಕೆಲವು ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ, ಕೊಠಡಿ ದುರಸ್ತಿಪಡಿಸದಿದ್ದರೆ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರುವಂತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.</p>.<div><blockquote> ಕಟ್ಟಡ ದುರಸ್ತಿಗೆ ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ಬಂದ ಕೂಡಲೇ ಕೆಲಸ ಆರಂಭಗೊಳ್ಳಲಿದೆ. ಅಪಾಯವಿರುವ ಕೊಠಡಿಯಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಲಾಗುವುದು . </blockquote><span class="attribution">ರಾಘವೇಂದ್ರ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೊಪ್ಪ</span></div>.<div><blockquote>ಚಾವಣಿ ಗೋಡೆ ಗಟ್ಟಿ ಇಲ್ಲ. ದುರಸ್ತಿಗೆ ₹2 ಲಕ್ಷ ಮಂಜೂರು ಆಗಿದೆ ಎಂಬ ಮಾಹಿತಿ ಇದೆ. ಡಯಟ್ನಿಂದ ಒಬ್ಬರು ಇತ್ತೀಚೆಗೆ ಭೇಟಿ ಕೊಟ್ಟಿದ್ದರು </blockquote><span class="attribution">ಕಮಲಾಕ್ಷಿ ಮುಖ್ಯ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರಪುರ.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರವಿಕುಮಾರ್ ಶೆಟ್ಟಿಹಡ್ಲು</p>.<p><strong>ಕೊಪ್ಪ</strong>: ತಾಲ್ಲೂಕಿನ ಹರಿಹರಪುರದ ರಾಮಾನಂದ ಸರಸ್ವತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿಯುವ ಆತಂಕ ಎದುರಾಗಿದೆ.</p>.<p>1961ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ ಪ್ರಸ್ತುತ 110 ವಿದ್ಯಾರ್ಥಿಗಳು ವ್ಯಾಂಸಗ ಮಾಡುತ್ತಿದ್ದಾರೆ. ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳು ಇದೆ. ಬಹುತೇಕ ಕೊಠಡಿಗಳು ಸೋರುತ್ತಿದ್ದು, ಅನಿವಾರ್ಯವಾಗಿ ನಿತ್ಯ ಈ ಕೊಠಡಿಗಳಲ್ಲೇ ಪಾಠ ಪ್ರವಚನ ನಡೆಸುವಂತಾಗಿದೆ.</p>.<p>ದೊಡ್ಡ ಕೊಠಡಿಯಲ್ಲಿ ಚಾವಣಿ ಕುಸಿಯುವ ಹಂತಕ್ಕೆ ತಲುಪಿದೆ. ಪಕಾಸು, ರೀಪುಗಳು ಮುರಿದಿವೆ. ಚಾವಣಿ ಕುಸಿಯದಂತೆ ಕಬ್ಬಿಣದ ಸೆಂಟ್ರಿಂಗ್ ಕಂಬ ನಿಲ್ಲಿಸಲಾಗಿದೆ. ಈ ಕೊಠಡಿಗೆ ಹೊಂದಿಕೊಂಡಿರುವ 1ನೇ ತರಗತಿ, 6ನೇ ತರಗತಿ, 3ನೇ ತರಗತಿ ಕೊಠಡಿ ಗೋಡೆಗಳು ಬಿರುಕು ಬಿಟ್ಟಿದೆ. ಹೆಂಚುಗಳು ಅಲ್ಲಲ್ಲಿ ಒಡೆದಿದ್ದು ಮಳೆ ನೀರು ಗೋಡೆ ಮೇಲೆ, ವಿದ್ಯಾರ್ಥಿಗಳ ಮೇಲೆ ಸೋರುತ್ತಿದೆ.</p>.<p>ಇತ್ತೀಚೆಗೆ ಕಾರಿಡಾರ್ನ ಮೂಲೆಯಲ್ಲಿ ಪಿಲ್ಲರ್ ಕಂಬವೊಂದರ ಗಾರೆ ಬಾಯ್ತೆರೆದಿತ್ತು. ಇದನ್ನು ಗಮನಿಸಿದ ಶಿಕ್ಷಕರು ಸಿಮೆಂಟ್ ಪ್ಯಾಚ್ ವರ್ಕ್ ಮಾಡಿಸಿದ್ದಾರೆ. ಇದ್ದಕ್ಕಿದ್ದಂತೆ ಮತ್ತೊಮ್ಮೆ ಗಾರೆ ಕಿತ್ತು ಬಂದಾಗ ಪಕ್ಕದ ದೊಡ್ಡ ಕೊಠಡಿ ಚಾವಣಿ ಕುಸಿಯುವ ಹಂತಕ್ಕೆ ತಲುಪಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಶಿಕ್ಷಕರು ಇಲಾಖೆ ಗಮನಕ್ಕೆ ತಂದಿದ್ದಾರೆ.</p>.<p>ಶಾಲಾಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿಗಳು, ದಾನಿಗಳಿಂದ ಶಾಲೆಯಲ್ಲಿ ಕೆಲವು ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ, ಕೊಠಡಿ ದುರಸ್ತಿಪಡಿಸದಿದ್ದರೆ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರುವಂತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.</p>.<div><blockquote> ಕಟ್ಟಡ ದುರಸ್ತಿಗೆ ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ಬಂದ ಕೂಡಲೇ ಕೆಲಸ ಆರಂಭಗೊಳ್ಳಲಿದೆ. ಅಪಾಯವಿರುವ ಕೊಠಡಿಯಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಲಾಗುವುದು . </blockquote><span class="attribution">ರಾಘವೇಂದ್ರ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೊಪ್ಪ</span></div>.<div><blockquote>ಚಾವಣಿ ಗೋಡೆ ಗಟ್ಟಿ ಇಲ್ಲ. ದುರಸ್ತಿಗೆ ₹2 ಲಕ್ಷ ಮಂಜೂರು ಆಗಿದೆ ಎಂಬ ಮಾಹಿತಿ ಇದೆ. ಡಯಟ್ನಿಂದ ಒಬ್ಬರು ಇತ್ತೀಚೆಗೆ ಭೇಟಿ ಕೊಟ್ಟಿದ್ದರು </blockquote><span class="attribution">ಕಮಲಾಕ್ಷಿ ಮುಖ್ಯ ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರಪುರ.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>