ಇದೇ 21 ರಂದು 8.30ಕ್ಕೆ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಈ ಯುವಕ, ನಂತರ ಬಿಎಂಟಿಸಿ ಬಸ್ ಮೂಲಕ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿದ್ದ. ಮಧ್ಯಾಹ್ನ 2 ಗಂಟೆಗೆ ಮೆಜೆಸ್ಟಿಕ್ನಲ್ಲಿ ಊಟ ಮಾಡಿದ್ದು, ಸಂಜೆ 4.30ಕ್ಕೆ ಬೆಂಗಳೂರು–ಮಂಗಳೂರು ಕೆಎಸ್ಆರ್ಟಿಸಿ ಬಸ್ ಸಂಖ್ಯೆ ಕೆಎ–19, ಎಫ್3329 ಮೂಲಕ ಪ್ರಯಾಣ ಬೆಳೆಸಿದ್ದ. ದಾರಿ ಮಧ್ಯೆ ಕುಣಿಗಲ್ನಲ್ಲಿ ಚಹಾ ಕುಡಿದಿದ್ದು, 22 ರಂದು ಬೆಳಿಗ್ಗೆ 3 ಗಂಟೆಗೆ ಉಪ್ಪಿನಂಗಡಿಯಲ್ಲಿ ಇಳಿದುಕೊಂಡಿದ್ದ. ನಂತರ ಆಟೋದ ಮೂಲಕ ಮನೆ ತಲುಪಿದ್ದ.