ಮುಂಬೈಯಲ್ಲಿ ನೆಲೆಸಿದರೂ, ಹುಟ್ಟೂರಿನ ನಂಟು ಬಿಡದ ಡಾ.ಸುರೇಶ್ ರಾವ್, ಕಟೀಲಿನಲ್ಲಿ ಸಂಸ್ಕೃತ ಅಧ್ಯಯನ, ಸಂಸ್ಕಾರಗಳ ತರಬೇತಿ ಮತ್ತಿತರ ಕ್ಷೇತ್ರಗಳಲ್ಲಿ ಕೊಡುಗೆ ನೀಡುತ್ತಾ ಬಂದಿದ್ದಾರೆ. ಈಚೆಗೆ ಡಿಎಸ್ಎಂ ಆಸ್ಪತ್ರೆ ಮೂಲಕ ಗ್ರಾಮೀಣ ಕ್ಷೇತ್ರದಲ್ಲೂ ಆರೋಗ್ಯ ಸೇವೆ ಕಲ್ಪಿಸುವ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ಹೆಜ್ಜೆ ಇಟ್ಟಿದ್ದಾರೆ. ಪತ್ನಿ ವಿಜಯ ಲಕ್ಷ್ಮೀ, ಪುತ್ರಿಯರಾದ ಪಲ್ಲವಿ ಮತ್ತು ಶ್ರುತಿ ಅವರ ಕುಟುಂಬ.