ಗುರುವಾರ, 27 ನವೆಂಬರ್ 2025
×
ADVERTISEMENT
ADVERTISEMENT

ಮುಳಗುಂದ | ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

Published : 27 ನವೆಂಬರ್ 2025, 5:11 IST
Last Updated : 27 ನವೆಂಬರ್ 2025, 5:11 IST
ಫಾಲೋ ಮಾಡಿ
Comments
12ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಲಕ್ಷ್ಮೇಶ್ವರ:
ಪಟ್ಟಣದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ನಡೆಸಿದ ಅಹೋರಾತ್ರಿ ಧರಣಿ ಬುಧವಾರ 12ನೇ ದಿನಕ್ಕೆ ಕಾಲಿಟ್ಟಿದ್ದು ರೈತರು ‘ನಾವು ಮೆಕ್ಕೆಜೋಳ ಬೆಳೆದಿದ್ದೇವೆ’ ಎಂದು ಘೋಷಿಸುವ ಮೂಲಕ ಉತಾರ ಚಳವಳಿ ನಡೆಸಿದರು. ವಕೀಲ ಎಂ.ಎಸ್. ದೊಡ್ಡಗೌಡ್ರ ಮಾತನಾಡಿ ‘ಮೆಕ್ಕೆಜೋಳ ಬೆಳೆದ ರೈತರು ನ್ಯಾಯಯುತ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಸಲು ನಿರ್ಧರಿಸಿದ್ದು ಖರೀದಿ ಕೇಂದ್ರ ಆರಂಭಿಸಿಲ್ಲ. ಕಾರಣ ರೈತರ ಹೋರಾಟ ಉಗ್ರ ಸ್ವರೂಪ ತಾಳುವ ಮುನ್ನವೇ ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಆಗ್ರಹಿಸಿದರು. ಹೋರಾಟದ ನೇತೃತ್ವ ವಹಿಸಿದ ಮಂಜುನಾಥ ರವಿಕಾಂತ ಅಂಗಡಿ ನಾಗರಾಜ ಚಿಂಚಲಿ ಮಾತನಾಡಿದರು. ಶರಣು ಗೋಡಿ ಪರಮೇಶ ನಾಯಕ ನೀಲಪ್ಪ ಶರಸೂರಿ ಮಾತನಾಡಿದರು. ಆದೇಶ ಹುಲಗೂರ ಬಸಪ್ಪ ಶರಸೂರಿ ಪ್ರಕಾಶ ಮೇವುಂಡಿ ಚನ್ನಬಸಗೌಡ್ರ ಉದ್ದನಗೌಡ್ರ ಮುದಕಣ್ಣ ಗದ್ದಿ ಸುರೇಶ ಹಟ್ಟಿ ಗಂಗಯ್ಯ ಕಲಕೇರಿಮಠ ಬಸವರಾಜ ಹಿರೇಮನಿ ಅಶೋಕ ಅದರಗುಂಚಿ ಮುತ್ತಣ್ಣ ಟೋಕಾಳಿ ಈರಣ್ಣ ಹುಲಕೋಟಿ ಇಸ್ಮಾಯಿಲ್ ಆಡೂರ ಅತ್ತಾರ ಆಡೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT