‘ನೂರಕ್ಕೂ ಹೆಚ್ಚು ಮೆನಗಳಿರುವ ಹಾರವಾಡ ಗ್ರಾಮದಲ್ಲಿ ಹತ್ತಾರು ವಿದ್ಯಾರ್ಥಿಗಳು ನಿತ್ಯ ಅವರ್ಸಾ ಪ್ರೌಢಶಾಲೆಗೆ, ಕಾರವಾರ ಮತ್ತು ಅಂಕೋಲಾದ ಕಾಲೇಜುಗಳಿಗೆ ತೆರಳಬೇಕಾಗುತ್ತಿದೆ. ಕೆಲಸಕ್ಕೆ
ಪಟ್ಟಣಕ್ಕೆ ತೆರಳುವ ಮಹಿಳಾ ಕಾರ್ಮಿಕರು ಬಸ್ಗೆ ಕಾಯಲು ಹೆದ್ದಾರಿ ಪಕ್ಕ ನೆರಳಿನ ವ್ಯವಸ್ಥೆ ಇಲ್ಲದಂತಾಗಿದೆ. ಬಸ್ ತಂಗುದಾಣ ನಿರ್ಮಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡಿದರೂ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ತಾತ್ಕಾಲಿಕ ತಂಗುದಾಣ ನಿರ್ಮಿಸಬೇಕಾಯಿತು’ ಎಂದು ಗ್ರಾಮದ ಮಹಿಳೆಯರು ಪ್ರತಿಕ್ರಿಯಿಸಿದರು.